
ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಗಳ ವಿಚಾರಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮತ್ತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾತ್ ಸಭೆ ನಡೆಸಿದ್ರು. ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಿಬಿಎಂಪಿ ಕಮಿಷನರ್ ಜಂಟಿ ಸಭೆ ನಡೆಸಿ ಅನಧಿಕೃತ ಪ್ಲೆಕ್ಸ್ ತೆರವು ಹಾಗೂ ಪ್ರಕರಣ ದಾಖಲಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಈ ಹಿಂದೆ ಬಿಬಿಎಂಪಿ ಕಮಿಷನರ್ ನಿಂದ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಅನಧಿಕೃತ ಫ್ಲೆಕ್ಸ್ ಗಳ ತೆರವಿಗೆ ಬಿಬಿಎಂಪಿ ಸಹಾಯ ಕೊರಿತ್ತು. ಈ ಸಂಬಂಧ ಚರ್ಚಿಸಿ ನಿರ್ಧರಿಸಲು ಸಮಯ ನಿಗದಿ ಮಾಡಿತ್ತು. ಅದರಂತೆ ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ್ರು.
