Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸ್ವಾಮೀಜಿಗಳು ಮಾತಾಡಿದ್ರು ಸಾಧಕಿಗೆ ಅವಕಾಶ ಇಲ್ಲ: ಉಡುತಡಿ ಸಂರಕ್ಷಕಿ ಲೀಲಾದೇವಿ ಗದ್ಗದಿತ : Uduthadi Sansakshi Leeladevi

ಪ್ರತಿಧ್ವನಿ

ಪ್ರತಿಧ್ವನಿ

March 18, 2023
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಶಿವಮೊಗ್ಗ:ಮಾ.18: ಸಾಹಿತಿ, ರಾಜಕಾರಣಿ, ವಚನ ಸಾಹಿತ್ಯ ಸಂಶೋಧಕಿ ಲೀಲಾದೇವಿ ಆರ್ ಪ್ರಸಾದ್ ಹಿಂದೆ ಕನ್ನಡ ಹಾಗೂ ಸಂಸ್ಕೃತಿ‌‌ ಸಚಿವೆಯಾಗಿದ್ದವರು. ಬಹಳಷ್ಟು ಜನರಿಗೆ ಗೊತ್ತಿಲ್ಲ, ಅವರು ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿಯಲ್ಲಿ‌ 5 ದಶಕಗಳ ಹೊರಾಟ ಮಾಡಿಕೊಂಡು ಬಂದವರು. ಅಂದು ಅಕ್ಕನ ದೇಗುಲದ ಸುತ್ತಲ ಬೀಳು ಬಿದ್ದಿದ್ದ, ಪೊದೆ, ಗಿಡ-ಗಂಟಿಗಳಿಂದ ಕೂಡಿದ್ದ, ಒತ್ತುವರಿಯಾಗುತ್ತಿದ್ದ ಗೋಮಾಳ ಜಾಗವನ್ನ ಉಳಿಸಿಕೊಂಡು ಬಂದವರು. ಸರ್ಕಾರದಿಂದ ಜಮೀನು ಪಡೆದು ಉಡುತಡಿ ಅಕ್ಕಮಹಾದೇವಿ ಸಮಿತಿಗೆ ರಿಜಿಸ್ಟರ್ ಮಾಡಿಸಿದ್ದಕ್ಕಾಗಿ ಇಂದು ಭವ್ಯವಾದ ಅಕ್ಕಮಹಾದೇವಿ ಪುತ್ಥಳಿ ಅನಾವರಣಗೊಂಡಿದೆ ಹಾಗೂ ಸುತ್ತಲ ಜಾಗ ಅಕ್ಷರಧಾಮವಾಗಿ ರೂಪುಗೊಳ್ಳುತ್ತಿದೆ. ಇಂತಹ ಸಾಧಕಿ ಹಾಗೂ ಸಂರಕ್ಷಕಿಯನ್ನ ಹಿಂದಿನಿಂದಲೂ ಯಡಿಯೂರಪ್ಪ ‌ಕುಟುಂಬ ಗೌರವಿಸಿಕೊಂಡು ಬಂದಿದ್ದು, ಅವರ ಆಶಯದಂತೆ ಸ್ಥಳ ಅಭಿವೃದ್ಧಿ ಮಾಡಿದೆ. ದುರಾದೃಷ್ಟವಶಾತ್ ಇಂದು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಹಾಗೂ ಯಡಿಯೂರಪ್ಪ ‌ಜೊತೆ ಕೂತಿದ್ದ ಲೀಲಾದೇವಿಗೆ ಮಾತನಾಡಲು ಅವಕಾಶನೇ‌ ನೀಡಲಿಲ್ಲ. ಕಷ್ಟದ ದಿನಗಳನ್ನ ಹೇಳಿಕೊಳ್ಳಬೇಕು ಎಂದುಕೊಂಡಿದ್ದ ಲೀಲಾದೇವಿ ಗದ್ಗದಿತರಾದರು. ಅಕ್ಕನ ಕಾರ್ಯಕ್ರಮದಲ್ಲಿ ಮಹಿಳೆಗೆ ಅವಕಾಶ ಇಲ್ಲ. ಈ ಜಾಗ ಉಳಿಸಿಕೊಳ್ಳಲು ಎಷ್ಟು ಕಷ್ಟ ಪಟ್ಟಿದ್ದೇನೆ ಎಂದು ನನಗೆ ಮಾತ್ರ ಗೊತ್ತು.‌ಅಂದು ಮುಸ್ಲಿಂ ಸಮುದಾಯದವರೂ ಸಹ ನನ್ನ ಮೇಲೆ‌ ದಂಡೆತ್ತಿ ಬಂದಿದ್ದರು ಎಂದು ಹಳೆಯ ದಿನಗಳನ್ನ ನೆನೆದರು.

ಇದು ಪವಿತ್ರವಾದ ಕಾರ್ಯಕ್ರಮ.‌ ಸುಮಾರು ಐವತ್ತು ವರ್ಷಗಳ ಹಿಂದೆ ಉಡುತಡಿಗೆ ನಾನು ಬಂದವಳು. ಹಿಂದೆ ನಾನು ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ಬಸವಕಲ್ಯಾಣ ಮಾಡುವಾಗ ಉಡುತಡಿ ಮಾಡಬೇಕು ಎಂದು ಹೇಳಿದವಳು ನಾನು.‌ ಅಗ ಉಡುತಡಿಯಲ್ಲೇನಿದೆ ಎಂದು ನನ್ನ ಪ್ರಶ್ನಿಸುತ್ತಿದ್ದರು. ಅಕ್ಕಮಹಾದೇವಿ ಸುಪ್ರಭಾತದಿಂದ ಸಂಪುಟದವರೆಗೆ ರಚಿಸಿ, ಯಾತ್ರೆಯನ್ನೂ ಮಾಡಿಸಿದವಳು ನಾನು. ಈ ಮಟ್ಟಿಗೆ ಇದು ಅಭಿವೃದ್ಧಿಯಾಗಲು ನಾನೇ ಕಾರಣ. ಅಂದು ನನಗೆ ಹುಚ್ಚು ಹಿಡಿದಿದೆ ಎನ್ನುತ್ತಿದ್ದರು. ಅಭಿವೃದ್ಧಿ ಮಾಡುತ್ತೇನೆ ಎಂದರೆ ನಗುತ್ತಿದ್ದರು. ಗೋಮಾಳವನ್ನ ರಕ್ಷಣೆ ಮಾಡಿ ಮೂವತ್ತು ವರ್ಷ ಲೀಸ್ ಪಡೆದಿದ್ದೆ. ಅದನ್ನ ಕೊಂಡುಕೊಳ್ಳುತ್ತೀರಾ ಎಂದಿದ್ದರು. ಅಂದು ಹಣ ನೀಡಿ ಸಮಿತಿಗೆ ಭೂಮಿ ಪಡೆದಿದ್ದೆ. ಅದೇ ಜಾಗ ಇಂದು ಅಭಿವೃದ್ಧಿಗೆ‌ ಅನುವಾಗಿದೆ ಎಂದು ಲೀಲಾದೇವಿ ಬೇಸರ ವ್ಯಕ್ತಪಡಿಸಿದರು.

ತೊಂಭತ್ತರ ಆಸುಪಾಸಿನಲ್ಲಿರುವ ಲೀಲಾದೇವಿ ಅಕ್ಕನ ವಚನ ಸಾಹಿತ್ಯ ಹೊರದೇಶದಲ್ಲಿ ಪಸರಿಸಲು, ನಾನಾ ಭಾಷೆಯಲ್ಲಿ ತರ್ಜುಮೆ‌‌‌ ಮಾಡಲು ಶ್ರಮಿಸಿದವರು. ಶಿವಮೊಗ್ಗ ಎಂಪಿ ಬಿವೈ ರಾಘವೇಂದ್ರ ಅವಕಾಶ ನೀಡೋದಾಗಿ ಹೇಳಿದ್ದರು ಆದರೆ ನೀಡಲಿಲ್ಲ. ನಾನು‌ ಮಹಿಳೆ ಎಂದು ತಾತ್ಸಾರ ಮಾಡಿದ್ದಾರೆ. ಎರಡು ನಿಮಿಷ ಮಾತಾಡ್ತಿದ್ದೆ.‌ ಅದರ ಅವಶ್ಯಕತೆ ಇತ್ತು ಎಂದು ಲೀಲಾದೇವಿ ಕಣ್ಣೀರಿಟ್ಟರು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

IRS OFFICER CONGRESS | ಐಆರ್ ಎಸ್ ಅಧಿಕಾರಿ ಸುಧಮ್ ದಾಸ್ ಕಾಂಗ್ರೆಸ್ ಗೆ ಸೇರ್ಪಡೆ..! #PRATIDHVANI
ಇದೀಗ

IRS OFFICER CONGRESS | ಐಆರ್ ಎಸ್ ಅಧಿಕಾರಿ ಸುಧಮ್ ದಾಸ್ ಕಾಂಗ್ರೆಸ್ ಗೆ ಸೇರ್ಪಡೆ..! #PRATIDHVANI

by ಪ್ರತಿಧ್ವನಿ
March 21, 2023
ಇತಿಹಾಸ ಹಾಳುಮಾಡುವವರ ವಿರುದ್ಧದ ಹೋರಾಟಕ್ಕೆ ಶ್ರೀಗಳು ನೇತೃತ್ವ ವಹಿಸಲಿ : ಡಿ.ಕೆ.ಶಿವಕುಮಾರ್ : D.K Shivakumar
Top Story

ಇತಿಹಾಸ ಹಾಳುಮಾಡುವವರ ವಿರುದ್ಧದ ಹೋರಾಟಕ್ಕೆ ಶ್ರೀಗಳು ನೇತೃತ್ವ ವಹಿಸಲಿ : ಡಿ.ಕೆ.ಶಿವಕುಮಾರ್ : D.K Shivakumar

by ಪ್ರತಿಧ್ವನಿ
March 21, 2023
ASSEMBLY ELECTION-2023 | ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಯಾರ ಕೊರಳಿಗೆ ವಿಜಯಮಾಲೆ..! ಪಾರ್ಟ್-‌10
ಇದೀಗ

ASSEMBLY ELECTION-2023 | ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಯಾರ ಕೊರಳಿಗೆ ವಿಜಯಮಾಲೆ..! ಪಾರ್ಟ್-‌10

by ಪ್ರತಿಧ್ವನಿ
March 21, 2023
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!
Top Story

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!

by ಪ್ರತಿಧ್ವನಿ
March 20, 2023
SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI
ಇದೀಗ

SIDDARAMAIAH VS DK SHIVAKUMAR | ಇನ್ನೂ ಮುಗಿಯದ ಸಿದ್ದರಾಮಯ್ಯ ಕ್ಷೇತ್ರ ಗೊಂದಲ #PRATIDHVANI

by ಪ್ರತಿಧ್ವನಿ
March 23, 2023
Next Post
ಡಾ.ಬಿ.ಆರ್‌ ಅಂಬೇಡ್ಕರ್‌ ದೃಷ್ಟಿಯಲ್ಲಿ ಮಹಿಳೆ ಮತ್ತು ಸಮಾನ ನಾಗರಿಕ ಸಂಹಿತೆ : Women And Equal Civil Code

ಡಾ.ಬಿ.ಆರ್‌ ಅಂಬೇಡ್ಕರ್‌ ದೃಷ್ಟಿಯಲ್ಲಿ ಮಹಿಳೆ ಮತ್ತು ಸಮಾನ ನಾಗರಿಕ ಸಂಹಿತೆ : Women And Equal Civil Code

ʼಕೆ ಜಿ ಎಫ್ʼ ,  ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ”..  KABZAA ‘Box Office’ Collection..!

ʼಕೆ ಜಿ ಎಫ್ʼ , ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ "ಕಬ್ಜ".. KABZAA 'Box Office' Collection..!

Night Party in Shivamogga : ಶಿವಮೊಗ್ಗದಲ್ಲಿ ಮಹಿಳೆಯರ ನೈಟ್ ಪಾರ್ಟಿ ಮೇಲೆ‌ ಬಜರಂಗ ದಳ ಕಾರ್ಯಕರ್ತರ ದಾಳಿ

Night Party in Shivamogga : ಶಿವಮೊಗ್ಗದಲ್ಲಿ ಮಹಿಳೆಯರ ನೈಟ್ ಪಾರ್ಟಿ ಮೇಲೆ‌ ಬಜರಂಗ ದಳ ಕಾರ್ಯಕರ್ತರ ದಾಳಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist