ಸತತ 25 ವರ್ಷಗಳ ಕಾಲ ಜೊತರಯಲ್ಲಿದ್ದ ಬಿಜೆಪಿ ನಮ್ಮನ್ನು ಹಾಳು ಮಾಡಿದಲ್ಲದೆ ಇದೀಗ ಭಗ್ನ ಪ್ರೇಮಿಯಂತೆ ವರ್ತಿಸುತ್ತಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಆರೋಪಿಸಿದ್ದಾರೆ.
ಈ ಹಿಂದೆ ಬಿಜೆಪಿಯ ಅವಿಭಾಜ್ಯ ಅಂಗ ಎಂದೇ ಕರೆಲ್ಪಡುತ್ತಿದ್ದ ಶಿವಸೇನೆಯು ಕಾರಣಾಂತರಗಳಿಂದ 2019ರ ಚುನಾವಣೆ ನಂತರ ಬಿಜೆಪಿಯಿಂದ ದೂರವಾಯಿತ್ತು. ಆ ನಂತರ ಎರಡು ಪಕ್ಷಗಳು ರಾಜಕೀಯ ಬದ್ದವೈರಿಗಳಂತೆ ಕಾದಾಡುತ್ತಿರುವುದು ಎಲ್ಲರಿಗು ಗೊತ್ತಿರುವ ವಿಚಾರ.
ಕ್ರಿಕೆಟ್ನ್ಲ್ಲಿ ಆಟಗಾರರ ಎಕಾಗ್ರತೆಯನ್ನು ಹಾಳು ಮಾಡಲು ಎದುರಾಳಿ ತಂಡದವರು ಹಿಯಾಳಿಸಿದಂತೆ ಬಿಜೆಪಿಯವರು ನಮ್ಮನ್ನು ಟೀಕಿಸುವುದರಲ್ಲಿ ನಿರತರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ಒನ್ ಸೈಡ್ ಲವರ್ನಂತೆ ವರ್ತಿಸುತ್ತಿದ್ದಾರೆ ಮುಂದುವರೆದು ಬಿಜೆಪಿಯ ಎ, ಬಿ, ಸಿ ಹಾಗು ಡಿ ಟೀಂಗಳನ್ನು ನಿಯೋಜಿಸಿದೆ ಎಂದು ರಾಜ್ ಠಾಕ್ರೆ, ಅಸಾದುದ್ದೀನ್ ಒವೈಸಿ, ರಾಣಾ ದಂಪತಿಗಳ ಹೆಸರನ್ನು ಉಲ್ಲೇಖಿಸದೆ ಬಹಿರಂಗವಾಗಿ ಗುಡುಗಿದ್ದಾರೆ.