• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

2018-20ರ ಅವಧಿಯಲ್ಲಿ UAPA ಅನ್ವಯ ಬಂಧಿತರಾದವರಲ್ಲಿ ಶೇ.53 ರಷ್ಟು 18-30 ವಯಸ್ಸಿನ ಯುವಜನರು!

Any Mind by Any Mind
August 5, 2022
in ದೇಶ
0
2018-20ರ ಅವಧಿಯಲ್ಲಿ UAPA ಅನ್ವಯ ಬಂಧಿತರಾದವರಲ್ಲಿ ಶೇ.53 ರಷ್ಟು 18-30 ವಯಸ್ಸಿನ ಯುವಜನರು!
Share on WhatsAppShare on FacebookShare on Telegram

ADVERTISEMENT

2018 ಮತ್ರು 20 ರ ನಡುವೆ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟ 4690 ಆರೋಪಿಗಳ ಪೈಕಿ 53% ಮಂದಿ 18-30 ವಯಸ್ಸಿನವರಾದರೆ ಹದಿಮೂರು ಆರೋಪಿಗಳು ಹದಿನೆಂಟು ವರ್ಷಕ್ಕಿಂತ ಕೆಳಗಿನವರು ಮತ್ತು ಹತ್ತು ಮಂದಿ 60 ವರ್ಷ ಮೇಲ್ಪಟ್ಟವರು ಎಂದು ಗುರುವಾರ ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಕೇರಳದ ಸಿಪಿಐ ಸಂಸದರಾಗಿರುವ ಸಂತೋಷ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಯುಎಪಿಎ ಅಡಿಯಲ್ಲಿ ಬಂಧಿತರಾದ 4,690 ವ್ಯಕ್ತಿಗಳಲ್ಲಿ 2,488 (53%) ಮಂದಿ 18-30 ವಯಸ್ಸಿನವರಾದರೆ 1,850 (39%) ಮಂದಿ 30-45 ವಯಸ್ಸಿನವರು ಮತ್ತು 329 ಮಂದಿ 45-60 ವಯಸ್ಸಿನವರು ಎಂದಿದ್ದಾರೆ. 2018-20 ಅವಧಿಯಲ್ಲಿ, ಸಂಸತ್ತಿನಲ್ಲಿ ಮಂಡಿಸಿದ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ವರದಿಯ ಆಧಾರದ ಮೇಲೆ ಈ 4690 ವ್ಯಕ್ತಿಗಳಲ್ಲಿ ಕೇವಲ 149 ಮಂದಿ ಮಾತ್ರ ಯುಎಪಿಎ ಅಡಿಯಲ್ಲಿ ಶಿಕ್ಷೆಗೊಳಗಾದವರು.

ಆದರೆ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿತರಾದವರ ಶೇಕಡಾವಾರು ಸಂಖ್ಯೆ 2020ರಲ್ಲಿ 32% ರಷ್ಟು ಕಡಿಮೆಯಾಗಿದೆ. 2020ರಲ್ಲಿ 1,321 ಮಂದಿ ಈ ಕಾನೂನಿನಡಿ ಬಂಧನಕ್ಕೊಳಗಾಗಿದ್ದರೆ 2019ರಲ್ಲಿ 1,948 ಮಂದಿಯನ್ನು ಬಂಧಿಸಲಾಗಿತ್ತು. ಆದರೆ 2020 ರಲ್ಲಿ ಶಿಕ್ಷೆಗೊಳಗಾದವರ ಸಂಖ್ಯೆ 80ಕ್ಕೆ ಏರಿದೆ. 2014ರಲ್ಲಿ ಈ ಸಂಖ್ಯೆ 34ರಲ್ಲಿತ್ತು.

2020 ರಲ್ಲಿ UAPA ಅಡಿಯಲ್ಲಿ ಉತ್ತರಪ್ರದೇಶದಲ್ಲಿ 361 ಬಂಧನವಾಗಿದ್ದು ಇದು ದೇಶದಲ್ಲೇ ಅತ್ಯಂತ ಗರಿಷ್ಠ ಸಂಖ್ಯೆಯಾಗಿದೆ. 346 ಬಂಧನಗಳೊಂದಿಗೆ ಕಾಶ್ಮೀರ ಎರಡನೇ ಮತ್ತು 225 ಬಂಧನಗಳೊಂದಿಗೆ ಮಣಿಪುರ ಮೂರನೇ ಸ್ಥಾನದಲ್ಲಿದೆ.

ಕೇಂದ್ರ ಸಚಿವಾಲಯವು ಜುಲೈ 2020 ರಂದು ನೀಡಿದ ಹೇಳಿಕೆ ಪ್ರಕಾರ ಯುಎಎಪಿಎ ಅಡಿಯಲ್ಲಿ ಬಂಧಿಸಿರುವ 24,134 ಜನರಲ್ಲಿ ಕೇವಲ 212 ಮಂದಿ 2016-20 ಅವಧಿಯಲ್ಲಿ ಶಿಕ್ಷೆಗೊಳಗಾಗಿದ್ದಾರೆ.

UAPA ಕಾನೂನು 1967 ರಲ್ಲಿ ಜಾರಿಗೊಳಿಸಲ್ಪಟ್ಟ‌ ಕಾನೂನು. ಇದಕ್ಕೆ 2008 ಮತ್ತು 2012 ರಲ್ಲಿ ಕಾಂಗ್ರೆಸ್ ಸರ್ಕಾರಗಳು ಮತ್ತು ಆ ನಂತರ ನರೆಂದ್ರ ಮೋದಿ ಸರ್ಕಾರ ತಿದ್ದುಪಡಿ ಮಾಡಿತು. 2019 ರಲ್ಲಿ, ಪ್ರಸ್ತುತ ಎನ್‌ಡಿಎ ಸರ್ಕಾರವು ಮಾಡಿದ ತಿದ್ದುಪಡಿಯ ಪ್ರಕಾರ ಸಂಸ್ಥೆಗಳು ಮಾತ್ರವಲ್ಲದೆ ವ್ಯಕ್ತಿಗಳನ್ನು ಸಹ ಯುಎಪಿಎ ಅಡಿಯಲ್ಲಿ ಬಂಧಿಸಬಹುದು.

ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಲ್ಪಟರೆ ಜಾಮೀನು ಅಸಾಧ್ಯ. ಹಲವಾರು ವರ್ಷಗಳ ಕಾಲ ವಿಚಾರಣೆಗಾಗಿ‌ ಜೈಲಿನಲ್ಲಿ ಕಾಯಬೇಕಾಗುತ್ತದೆ. ಹಾಗಾಗಿಯೇ ಈ ಕಾನೂನನ್ನು ಸರ್ಕಾರಗಳು ದುರ್ಬಳಕೆ ಮಾಡುವ ಅಪಾಯ ಇದೆ ಎಂಬ ಕೂಗು ಎದ್ದಿರುವುದು. ಈ‌ ಕೂಗಿಗೆ ಸರ್ಕಾರವೇ ನೀಡಿರುವವ ಅಂಕಿ ಅಂಶಗಳು ಮತ್ತಷ್ಟು ಬಲತುಂಬುತ್ತಿವೆ. ಅದು ಸಲ್ಲಿಸಿರುವ ವರದಿಯ ಪ್ರಕಾರ 2016 ರಿಂದ 4,098 ವ್ಯಕ್ತಿಗಳು, 2017 ರಿಂದ 4,862 ವ್ಯಕ್ತಿಗಳು, 2019 ರಿಂದ 5,862 ವ್ಯಕ್ತಿಗಳು , 2019 ರಿಂದ 5,862 ವ್ಯಕ್ತಿಗಳು ಮತ್ತು 2020 ರಿಂದ 6,482 ರಷ್ಟು ವ್ಯಕ್ತಿಗಳು ವಿಚಾರಣೆಗಾಗಿ ಕಾಯುತ್ತಾ ಜೈಲಲ್ಲಿದ್ದಾರೆ. ಆದರೆ ಇದೇ ಅವಧಿಯಲ್ಲಿ ಈ ಕಾನೂನಿನ ಪ್ರಕಾರ ಬಂಧಿಸಲ್ಪಟ್ಟು ಬಿಡುಗಡೆಗೊಂಡವರು ಕೇವಲ 386 ಮಂದಿ ಮಾತ್ರ.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಭಾರತವು ಆತ್ಮಹತ್ಯೆಯ ರೂಪದಲ್ಲಿ ಅತಿಹೆಚ್ಚಿನ ಸಂಖ್ಯೆಯ ಯುವ ತಾಯಂದಿರನ್ನು ಏಕೆ ಕಳೆದುಕೊಳ್ಳುತ್ತಿದೆ?

Next Post

ದಾವೂದ್ ಇಬ್ರಾಹಿಂ ಆಪ್ತ ಚೋಟಾ ಶಕೀಲ್ ಸಂಬಂಧಿ ಅರೆಸ್ಟ್!

Related Posts

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
0

"ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. (Deputy Chief...

Read moreDetails

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

November 18, 2025

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

November 18, 2025

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 18, 2025
Next Post
ದಾವೂದ್ ಇಬ್ರಾಹಿಂ ಆಪ್ತ ಚೋಟಾ ಶಕೀಲ್ ಸಂಬಂಧಿ ಅರೆಸ್ಟ್!

ದಾವೂದ್ ಇಬ್ರಾಹಿಂ ಆಪ್ತ ಚೋಟಾ ಶಕೀಲ್ ಸಂಬಂಧಿ ಅರೆಸ್ಟ್!

Please login to join discussion

Recent News

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ
Top Story

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ

by ಪ್ರತಿಧ್ವನಿ
November 19, 2025
ಕೊತ್ತಲವಾಡಿ ಸಿನಿಮಾ PRO ಹರೀಶ್ ವಿರುದ್ಧ FIR
Top Story

ಕೊತ್ತಲವಾಡಿ ಸಿನಿಮಾ PRO ಹರೀಶ್ ವಿರುದ್ಧ FIR

by ಪ್ರತಿಧ್ವನಿ
November 19, 2025
Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
Top Story

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
November 18, 2025
Top Story

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

by ಪ್ರತಿಧ್ವನಿ
November 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ

ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು-ಪುರುಷೋತ್ತಮ ಬಿಳಿಮಲೆ

November 19, 2025
ಕೊತ್ತಲವಾಡಿ ಸಿನಿಮಾ PRO ಹರೀಶ್ ವಿರುದ್ಧ FIR

ಕೊತ್ತಲವಾಡಿ ಸಿನಿಮಾ PRO ಹರೀಶ್ ವಿರುದ್ಧ FIR

November 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada