ಮೈಸೂರು (Mysuru): ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಎರಡು ಚಿರತೆಗಳು (Leopard) ಬಿದ್ದಿವೆ.
ಒಂದೇ ದಿನ ತಿ.ನರಸೀಪುರ ಹಾಗೂ ನಂಜನಗೂಡಿನಲ್ಲಿ ಎರಡು ಚಿರತೆಗಳು ಸೆರೆ ಸಿಕ್ಕಿವೆ.
![](https://pratidhvani.com/wp-content/uploads/2024/02/IMG-20240213-WA0003-1024x768.webp)
ತಿ.ನರಸೀಪುರ ತಾಲ್ಲೂಕಿನ ಕುರುಬಾಳಹುಂಡಿ ಗ್ರಾಮದಲ್ಲಿ 4 ವರ್ಷದ ಗಂಡು ಚಿರತೆ, ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ 5 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿವೆ.
ಕಳೆದ ಹಲವು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿತ್ತು. ಇದರಿಂದ ಜಮೀನಿಗೆ ಹೋಗಲು ರೈತರು ಹೆದರುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು (Forestdepartment) ಬೋನು ಇರಿಸಿದ್ದರು.
![](https://pratidhvani.com/wp-content/uploads/2024/02/IMG-20240213-WA0005-1024x768.webp)
ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ, ಸೆರೆ ಸಿಕ್ಕಿರುವ ಚಿರತೆಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.