ಕೆಲ ನಿರ್ದಿಷ್ಟ ವಿಷಯಗಳನ್ನು ತೆಗೆದುಹಾಕುವ ಕುರಿತು ಹಾಗೂ ಇಂತಹ ಖಾತೆಗಳನ್ನು ನಿರ್ಬಂಧಿಸಬೇಕು ಎಂಬ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಆದೇಶದ ವಿರುದ್ಧ ಟ್ವೀಟರ್ ಕರ್ನಾಟಕ ಹೈಕೋರ್ಟ್ನ ಮೊರೆ ಹೋಗಿದೆ ಎಂದು ಲೈವ್ ಲಾ ಮಂಗಳವಾರ ವರದಿ ಮಾಡಿದೆ.
ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ವಿಷಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲು ಈ ನಿಬಂಧನೆಯು ಸರ್ಕಾರ ಆದೇಶ ನೀಡಿತ್ತು. ಹೀಗೆ ಕೆಲ ಕಂಟೆಂಟ್ ನಿರ್ಬಂಧಿಸುವ ಬಗ್ಗೆ ಸೆಕ್ಷನ್ 69 ‘ಎ’ ಅಡಿ ಐಟಿ ಸಚಿವಾಲಯ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಟ್ವಿಟರ್ ಸರ್ಕಾರದ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಅಲ್ಲದೇ, ಸೆಕ್ಷನ್ 69 ‘ಎ’ ಅಡಿ ನಿರ್ಬಂಧಿಸುವುದಾಗಿ ಹೇಳುವ ಸರ್ಕಾರ, ಅದು ಹೇಗೆ ಅಥವಾ ಯಾವ ವಿಷಯದಲ್ಲಿ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಿಲ್ಲ ಎಂದು ಟ್ವಿಟರ್ ಆರೋಪಿಸಿದೆ. ಈ ನಿರ್ಬಂಧದ ಆದೇಶ ರದ್ದುಗೊಳಿಸಲು ಟ್ವಿಟರ್ ನ್ಯಾಯಾಲಯದ ಮೊರೆ ಹೋಗಿದೆ ಎಂದು ಹೇಳಲಾಗಿದೆ.
ಈ ಹಿಂದೆ ಅನೇಕ ಸಂದರ್ಭಗಳಲ್ಲಿ, ಕೇಂದ್ರ ಸರ್ಕಾರವು ತನ್ನ ಕ್ರಮಗಳನ್ನು ಟೀಕಿಸುವ ಪೋಸ್ಟ್ಗಳು ಮತ್ತು ಖಾತೆಗಳನ್ನು ನಿರ್ಬಂಧಿಸುವಂತೆ ಟ್ವಿಟರ್ಗೆ ಕೇಳಿಕೊಂಡಿದೆ ಎಂದು ಸ್ಕ್ರಾಲ್ ವರದಿ ಮಾಡಿದೆ.
ನವೆಂಬರ್ 2020 ರಲ್ಲಿ ಪ್ರಾರಂಭವಾದ ದೊಡ್ಡ ಪ್ರಮಾಣದ ರೈತ ಪ್ರತಿಭಟನೆಯಲ್ಲಿ ಕೇಂದ್ರವನ್ನು ಟೀಕಿಸಿದ ನೂರಾರು ಖಾತೆಗಳನ್ನು ನಿರ್ಬಂಧಿಸುವಂತೆ ಫೆಬ್ರವರಿ 2021 ರಲ್ಲಿ ಸರ್ಕಾರವು ಟ್ವಿಟರ್ಗೆ ಒತ್ತಾಯಿಸಿತು. ಈ ನಡೆಯನ್ನು ಟ್ವೀಟರ್ ನಿರಾಕರಿಸಿತು, ಆದರೆ ಅಂತಿಮವಾಗಿ ತನ್ನ ಸ್ಥಳೀಯ ಉದ್ಯೋಗಿಗಳಿಗೆ ಬೆದರಿಕೆ ಹಾಕಿದ ನಂತರ ಟ್ವೀಟರ್ ಕಾನೂನು ಮೊರೆ ಹೋಗಿದೆ.
ಕಳೆದ ವರ್ಷ ಏಪ್ರಿಲ್ ಕೋವಿಡ್ ಎರಡನೇ ಅಲೆ ಸಮಯದಲ್ಲಿ, ಲಕ್ಷಗಟ್ಟಲೆ ಜನರು ಸತ್ತಾಗ ಸರ್ಕಾರವು ಕೋವಿಡ್ -19 ಅನ್ನು ನಿರ್ವಹಿಸುವುದನ್ನು ಟೀಕಿಸಿದ ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರವು ಟ್ವಿಟರ್ಗೆ ಕೇಳಿಕೊಂಡಿತ್ತು. ಆದರೆ ಇದನ್ನು ಟ್ವೀಟರ್ ನಿರಾಕರಿಸಿದೆ ಎಂದು ಹೇಳಿಕೊಂಡಿದೆ.