ಬೇಡ ಜಂಗಮರನ್ನ ಪರಿಶಿಷ್ಟ ಜಾತಿಗೆ ಸೇರಿಸಬೇಡಿ ಎಂದು ಸಿಎಂ ಎದುರೇ ಆದಿ ಜಾಂಬವ ಸಂಘದ ರಾಜ್ಯಾಧ್ಯಕ್ಷ ಸಿದ್ದರಾಜು ಕೂಗಾಡಿದ ಘಟನೆಯೂ ನಡೆದಿದೆ.
ವಿಧಾನಸೌಧದಲ್ಲಿ ಇಂದು ಡಾ.ಬಾಬು ಜಗಜೀವನರಾಮ್ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಡಾ.ಬಾಬು ಜಗಜೀವನರಾಮ್ 35ನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಡಾ. ಬಾಬು ಜಗಜೀವನರಾಮ್ ಪ್ರತಿಮೆಗೆ ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪ ನಮನ ಸಲ್ಲಿಸಿದರು. ಇದೆ ವೇಳೆ ಆದಿ ಜಾಂಬವ ಸಂಘದ ರಾಜ್ಯಾಧ್ಯಕ್ಷ ಸಿದ್ದರಾಜು ಬೇಡ ಜಂಗಮರನ್ನ ಪರಿಶಿಷ್ಟ ಜಾತಿಗೆ ಸೇರಿಸಬೇಡಿ, ಅವರು ಲಿಂಗಾಯತರು, ಅವರನ್ನ ಸೇರಿಸಬೇಡಿ ಇದರಿಂದ ಎಸ್ಸಿಗಳಿಗೆ ಅನ್ಯಾಯವಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರವಾಗಿ ಸಿಎಂ ಬಳಿ ಹೋಗುತ್ತಿದ್ದ ಅವರನ್ನು ಪೊಲೀಸರು ತಡೆದರು. ನನ್ನ ಮನವಿಯನ್ನು ಸಿಎಂಗೆ ಸಲ್ಲಿಸಲು ಬಿಡಿ .ನನ್ನನ್ನು ಯಾಕೆ ತಡೆಯುತ್ತಿದ್ದಿರಿ ಅಂತ ಕಿಡಿ ಆದಿ ಜಾಂಬವ ಸಂಘದ ರಾಜ್ಯಾಧ್ಯಕ್ಷ ಸಿದ್ದರಾಜು ಬಳಿಕ ಮಾತನಾಡಿ, ಕೆಲವರು ಬೇಡ ಜಂಗಮರನ್ನು ಎಸ್ಸಿಗೆ ಸೇರಿಸಿ ಅಂತಿದ್ದಾರೆ. ಅವ್ರು ಲಿಂಗಾಯತರು. ಎಸ್ಸಿಗೆ ಸೇರಿಸಿದ್ರೆ ನಮಗೆ ಅನ್ಯಾಯವಾಗುತ್ತದೆ ಎಂದರು.