• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ಪ್ರತಿಧ್ವನಿ by ಪ್ರತಿಧ್ವನಿ
June 23, 2026
in ರಾಜಕೀಯ
0
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌
Share on WhatsAppShare on FacebookShare on Telegram

 ಮತದಾರರ ಗುರುತಿನ ಚೀಟಿ (ವೋಟರ್‌ ಐಡಿ) ಒಬ್ಬ ಭಾರತೀಯ ನಾಗರಿಕನ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ದೇಶದ ಒಂದೇ ಸ್ಥಳದಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದುವುದು ಕಾನೂನುಬದ್ಧವಲ್ಲ.ಇದೀಗ ಬಹುಭಾಷಾ ನಟ ಹಾಗೂ ರಾಜಕೀಯ ವಿಶ್ಲೇಷಕ ಪ್ರಕಾಶ್‌ ರಾಜ್‌ ಅವರು ನಾಲ್ಕು ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿಯಾಗಿರುವುದಾಗಿ ವರದಿಯಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಾಗ್ಮಿ ಹಾಗೂ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಅವರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.

ADVERTISEMENT
Gruhalakshmi Scheme : ಖಾತೆಗಳೇ ಇಲ್ಲದವರ ಅಕೌಂಟಿಗೆ ಕೋಟಿ ಕೋಟಿ ಹೋಗಿದ್ದು ಹೇಗೆ..? #pratidhvani

ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸೂಲಿಬೆಲೆ, ಪ್ರಕಾಶ್‌ ರಾಜ್‌ ವಿರುದ್ಧ ವ್ಯಂಗ್ಯದ ಶೈಲಿಯಲ್ಲಿ ಟೀಕೆ ಮಾಡಿದ್ದಾರೆ. ಅವರ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾಕಷ್ಟು ಪ್ರತಿಕ್ರಿಯೆಗಳನ್ನು ಸೆಳೆಯುತ್ತಿದೆ.“ನಾಲ್ಕು ವೋಟರ್‌ ಐಡಿ ಹೊಂದಿರುವ ಅನ್ಯಾಯದ ವಿರುದ್ಧ ಪ್ರಕಾಶ್‌ ರಾಜ್‌ ಹೋರಾಟ ಮಾಡಲಿದ್ದಾರೆ. ಬೆಂಗಳೂರಿನ ಪ್ರಕಾಶ್‌ ರಾಜ್‌ಗೆ ತಮಿಳುನಾಡಿನ ಪ್ರಕಾಶ್‌ ರಾಜ್‌ ಕರೆ ಮಾಡಿ, ಹೋರಾಟಕ್ಕೆ ಬಂದರೆ ತಬ್ಬಿಕೊಳ್ಳುವುದಾಗಿ ಹೇಳುತ್ತಾರೆ. ತೆಲಂಗಾಣದ ಪ್ರಕಾಶ್‌ ರಾಜ್‌ ಬೀದಿಗಿಳಿದರೆ, ಕೇರಳದ ಪ್ರಕಾಶ್‌ ರಾಜ್‌ ಕೂಡ ಬೆಂಬಲಕ್ಕೆ ಬರುತ್ತಾರೆ” ಎಂದು ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ.

CM Vijay : ಅನುದಾನ ದುರುಪಯೋಗದ ಆರೋಪಕ್ಕೆ ವಾಕ್ಸ್‌ಮರ..! #cmvijay #udhayanidhistalin #dmk

ಪ್ರಕಾಶ್‌ ರಾಜ್‌ ಅವರು ಕರ್ನಾಟಕ, ತಮಿಳುನಾಡು, ತೆಲಂಗಾಣ ಸೇರಿದಂತೆ ಒಟ್ಟು ನಾಲ್ಕು ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿ ವಕೀಲ ದಿಲೀಪ್‌ ಕುಮಾರ್‌ ಅವರು 2019ರಲ್ಲಿ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 48ನೇ ಎಸಿಜಿಎಂ ನ್ಯಾಯಾಲಯವು ಪ್ರಕಾಶ್‌ ರಾಜ್‌ ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳಕ್ಕೆ ಸಂಬಂಧಿಸಿದ ವಿವಾದದಲ್ಲೂ ಪ್ರಕಾಶ್‌ ರಾಜ್‌ ಅವರ ಹೆಸರು ಕೇಳಿಬಂದಿತ್ತು. ಗಿರೀಶ್‌ ಮಟ್ಟೆಣ್ಣವರ್‌ ಹೇಳಿದಂತೆ ಸಾಕ್ಷ್ಯ ನೀಡಿದರೆ ಪ್ರಕಾಶ್‌ ರಾಜ್‌ ತಮ್ಮನ್ನು ಅಪ್ಪಿಕೊಳ್ಳುವುದಾಗಿ ಹೇಳಿದ್ದರು ಎಂದು ಚಿನ್ನಯ್ಯ ಆರೋಪಿಸಿದ್ದರು. ಅಲ್ಲದೆ, ತಮ್ಮ ವಿರುದ್ಧ 200 ಕೋಟಿ ರೂಪಾಯಿ ಮೌಲ್ಯದ ಷಡ್ಯಂತ್ರ ರೂಪಿಸಲಾಗಿದೆ ಎಂಬ ಆರೋಪವನ್ನೂ ಮಾಡಿದ್ದರು. ಆದರೆ ಈ ಎಲ್ಲ ಆರೋಪಗಳನ್ನು ಪ್ರಕಾಶ್‌ ರಾಜ್‌ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

Satish Jarakiholi: ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಾ? ಸಚಿವ ಸತೀಶ್ ಹೇಳಿದ್ದೇನು?  #pratidhvani

ಜೂನ್‌ 17ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಕಾಶ್‌ ರಾಜ್‌, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಶ್ರೇಷ್ಠ ವ್ಯಕ್ತಿ ಎಂದು ಬಣ್ಣಿಸಿದ್ದ ಅವರು, “ಧರ್ಮಸ್ಥಳದ ಕುರಿತು ನಾನು ಯಾವುದೇ ಅಪಪ್ರಚಾರ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದರು.

Tags: actor prakash rajCelebrity PostIndia Politicskarnataka newsPolitical CommentaryPolitical SatirePrice Tag SarcasmPublic DebateSocial MediaSocial Media Buzztrending newsviral postViral Reactionviral tweet
Previous Post

ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

Next Post

ನೀಟ್ ಮರುಪರೀಕ್ಷೆ ವಿವಾದಕ್ಕೆ ಟ್ವಿಸ್ಟ್‌: ಪೊಲೀಸರ ತನಿಖೆಯಲ್ಲಿ ಹೊರಬಿದ್ದ ಸತ್ಯ

Related Posts

ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ
Top Story

ನಟ ಮಮ್ಮುಟ್ಟಿ, ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಪದ್ಮ ವಿಭೂಷಣ : ಕ್ರಿಕೆಟಿಗ ರೋಹಿತ್‌ ಶರ್ಮಾಗೆ ಪದ್ಮಶ್ರೀ ಪ್ರದಾನ

by ಪ್ರತಿಧ್ವನಿ
June 23, 2026
0

ಬೆಂಗಳೂರು : ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ , ಟೆನಿಸ್‌ ದಂತಕಥೆ ವಿಜಯ್‌ ಅಮೃತರಾಜ್‌, ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು...

Read moreDetails
ಖಾತೆಗಳೇ ಇಲ್ಲದವರ ಅಕೌಂಟ್‌ಗೆ ಕೋಟಿ ಕೋಟಿ ಹಣ : ಗೃಹಲಕ್ಷ್ಮಿ ಯೋಜನೆಯ ಬಗ್ಗೆ CAG ವರದಿ ಬಿಚ್ಚಿಟ್ಟ ಸ್ಫೋಟಕ ಅಂಶಗಳೇನು..?

ಖಾತೆಗಳೇ ಇಲ್ಲದವರ ಅಕೌಂಟ್‌ಗೆ ಕೋಟಿ ಕೋಟಿ ಹಣ : ಗೃಹಲಕ್ಷ್ಮಿ ಯೋಜನೆಯ ಬಗ್ಗೆ CAG ವರದಿ ಬಿಚ್ಚಿಟ್ಟ ಸ್ಫೋಟಕ ಅಂಶಗಳೇನು..?

June 23, 2026
ಅಡ್ಡ ಮತದಾನ: ನಾಯಕರಿಗೆ ಬಿಜೆಪಿ ಹೈಕಮಾಂಡ್​ ಖಡಕ್​ ಸೂಚನೆ!

ಅಡ್ಡ ಮತದಾನ: ನಾಯಕರಿಗೆ ಬಿಜೆಪಿ ಹೈಕಮಾಂಡ್​ ಖಡಕ್​ ಸೂಚನೆ!

June 23, 2026
Nimbalkar Outrage on Congress

ಅಡ್ಡ ಮತದಾನದ ಬೆಂಕಿಗೆ ತುಪ್ಪ ಸುರಿದ ನಿಂಬಾಳ್ಕರ್‌ : ಮಾಜಿ ಶಾಸಕಿಯ ಪೋಸ್ಟ್‌ಗೆ ಕೈ, ಕಮಲದಲ್ಲಿ ಕಂಪನ..!

June 23, 2026
ವಿದ್ಯುತ್ ಸಂಪರ್ಕಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರದಿಂದ ವಿನಾಯಿತಿ: ಸರ್ಕಾರದ ಮಹತ್ವದ ಆದೇಶ

ವಿದ್ಯುತ್ ಸಂಪರ್ಕಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರದಿಂದ ವಿನಾಯಿತಿ: ಸರ್ಕಾರದ ಮಹತ್ವದ ಆದೇಶ

June 23, 2026
Next Post
ಪ್ರಕಾಶ್‌ ರಾಜ್‌ಗೆ ಸೂಲಿಬೆಲೆ ವ್ಯಂಗ್ಯ; ಪೋಸ್ಟ್‌ ವೈರಲ್‌

ನೀಟ್ ಮರುಪರೀಕ್ಷೆ ವಿವಾದಕ್ಕೆ ಟ್ವಿಸ್ಟ್‌: ಪೊಲೀಸರ ತನಿಖೆಯಲ್ಲಿ ಹೊರಬಿದ್ದ ಸತ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada