• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಶಾಶ್ವತ ಆಸ್ಪತ್ರೆಯಾಗಿ ಬೆಳಗಾವಿ ಸುವರ್ಣ ಸೌಧ: ಜಾಲತಾಣದಲ್ಲಿ ಜನಾಗ್ರಹ

Shivakumar by Shivakumar
May 7, 2021
in ಕರ್ನಾಟಕ
0
ಶಾಶ್ವತ ಆಸ್ಪತ್ರೆಯಾಗಿ ಬೆಳಗಾವಿ ಸುವರ್ಣ ಸೌಧ: ಜಾಲತಾಣದಲ್ಲಿ ಜನಾಗ್ರಹ
Share on WhatsAppShare on FacebookShare on Telegram

ಗುರುವಾರ ಸಂಜೆಯ ಹೊತ್ತಿಗೆ ಕರ್ನಾಟಕದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ಐವತ್ತು ಸಾವಿರದ ಗಡಿ ದಾಟಿದ್ದರೆ, ನಿತ್ಯ ಸಾವಿನ ಸಂಖ್ಯೆ 350ಕ್ಕೂ ಹೆಚ್ಚಾಗಿದೆ. ಈ ನಡುವೆ ಲಾಕ್ ಡೌನ್ ಪರಿಣಾಮವಾಗಿ ನಗರವಾಸಿಗಳು ಹಳ್ಳಿಗಳತ್ತ ಮುಖಮಾಡಿರುವುದರಿಂದ ಗ್ರಾಮೀಣ ಭಾಗಗಳಲ್ಲಿ;  ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಕರಣಗಳು ಆಘಾತಕಾರಿ ಪ್ರಮಾಣದಲ್ಲಿ ಏರತೊಡಗಿವೆ.

ADVERTISEMENT

ಆದರೆ, ಉತ್ತರಕರ್ನಾಟಕದ ದೊಡ್ಡ ಮಿತಿ ಎಂದರೆ ಅಲ್ಲಿನ ದುರ್ಬಲ ವೈದ್ಯಕೀಯ ವ್ಯವಸ್ಥೆ. ಹುಬ್ಬಳ್ಳಿ ಕಿಮ್ಸ್ ನಂತಹ ದೊಡ್ಡ ಆಸ್ಪತ್ರೆಯನ್ನು ಹೊರತುಪಡಿಸಿದರೆ, ಬಹುತೇಕ ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆಗಳು ವಿರಳ. ಅದರಲ್ಲೂ ಬಡವರು ಮತ್ತು ಜನಸಾಮಾನ್ಯರ ಕೈಗೆಟಕುವಂತಹ ಸಾರ್ವಜನಿಕ ವೈದ್ಯಕೀಯ ಸೌಲಭ್ಯಗಳಂತೂ ಇಲ್ಲವೇ ಇಲ್ಲ!

ಪರಿಸ್ಥಿತಿ ಹೀಗಿರುವಾಗ ಭಾರೀ ವೇಗದಲ್ಲಿ ಹಬ್ಬುತ್ತಿರುವ ಮಾರಣಾಂತಿಕ ಕರೋನಾದ ಎರಡನೇ ಅಲೆ ಅಲ್ಲಿನ ಜನಸಾಮಾನ್ಯರಲ್ಲಿ ದೊಡ್ಡ ಮಟ್ಟದ ಆತಂಕ ಮೂಡಿಸಿದೆ. ಬೆಂಗಳೂರಿನ ರಾಜಧಾನಿಯಲ್ಲಿ ಕೂತ ಅಧಿಕಾರಸ್ಥರಿಗೆ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳ ಪರಿಸ್ಥಿತಿಯ ಮೇಲೆಯೇ ಗಮನವಿಲ್ಲ; ವ್ಯವಸ್ಥೆಯ ಮೇಲೆ ಹಿಡಿತವಿಲ್ಲ ಎಂಬುದಕ್ಕೆ ಚಾಮರಾಜನಗರದಲ್ಲಿ ಮೊನ್ನೆ ನಡೆದ 28 ಮಂದಿಯ ಸಾಮೂಹಿಕ ಮಾರಣಹೋಮವೇ ಸಾಕ್ಷಿ. ಮಾಧ್ಯಮಗಳು ಕೂಡ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳ ಮೇಲೆಯೇ ಹೆಚ್ಚು ಗಮನಹರಿಸುವುದರಿಂದ ಚಾಮರಾಜನಗರದ ದುರ್ಘಟನೆ ನಡೆದ ದಿನ ಮತ್ತು ಅದರ ಮಾರನೇ ದಿನ ಉತ್ತರ ಕರ್ನಾಟಕದ ಬೆಳಗಾವಿ, ಕಲ್ಬುರ್ಗಿ ಮತ್ತಿತರ ಕಡೆ ನಡೆದ ಸಾಲು ಸಾಲು ಸಾವುಗಳು ಗಮನ ಸೆಳೆಯದೇ ಹೋದವು.

ಕರೋನಾದಂತಹ ಭೀಕರ ಕಾಯಿಲೆಯ ವಿಷಯದಲ್ಲಂತೂ, ಬೆಳಗಾವಿ, ಬೀದರ್, ವಿಜಯಪುರದಂತಹ ಗಡಿ ನಾಡ ಹಳ್ಳಿ ಮೂಲೆಯ ಮಂದಿ ಜೀವ ಉಳಿಸಿಕೊಳ್ಳಲು ಹುಬ್ಬಳ್ಳಿ, ಬೆಂಗಳೂರು, ಮಂಗಳೂರಿನಂತಹ ವೈದ್ಯಕೀಯ ಅನುಕೂಲಗಳಿರುವ ಊರುಗಳಿಗೆ ತಲುಪುವುದರಲ್ಲೇ ಜನ ಹಾದಿಬೀದಿ ಹೆಣವಾಗುವ ದಾರುಣ ಪರಿಸ್ಥಿತಿ ಇದೆ. ಒಂದು ಕಡೆ ದೂರದ ಪ್ರಯಾಣದ ಸವಾಲು, ಮತ್ತೊಂದು ಕಡೆ ಲಾಕ್ ಡೌನ್ ನಡುವೆ ದುಡಿಮೆ ಇರದೆ, ಭಾರೀ ಹಣಕಾಸು ವೆಚ್ಚದ ಸವಾಲು. ಹಾಗಾಗಿ ಆಸ್ಪತ್ರೆಯ ಮೆಟ್ಟಿಲು ಹತ್ತುವ ಮುನ್ನವೇ ಹಲವರ ಪ್ರಾಣಪಕ್ಷಿ ಹಾರಿಹೋಗುವುದು ಸಾಮಾನ್ಯ.

ಆಸ್ಪತ್ರೆ ಹಾಸಿಗೆ ಸಿಗದೆ, ಆಮ್ಲಜನಕ ಸಿಗದೆ ಬಹುತೇಕ ಕೋವಿಡ್ ಸಾವುಗಳು ಸಂಭವಿಸುತ್ತಿರುವ ತೀರಾ ಹೀನಾಯ ಸ್ಥಿತಿಯಲ್ಲಿ ಉತ್ತರ ಕರ್ನಾಟಕದ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಸರ್ಕಾರ ತತಕ್ಷಣಕ್ಕೆ ಮಾಡಬಹುದಾದ ಘನಕಾರ್ಯವೆಂದರೆ; ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಶಾಶ್ವತವಾಗಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸುವುದು ಎಂಬ ಅಭಿಪ್ರಾಯ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೊಳಗಾಗಿದೆ.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು ಅವರು ಬೆಳಗ್ಗೆ ತಮ್ಮ ಟ್ವಟಿರ್ ನಲ್ಲಿ ಮುಖ್ಯಮಂತ್ರಿಯವರ ಖಾತೆಗೆ ಟ್ಯಾಗ್ ಮಾಡಿ, ಈ ವಿಷಯ ಪ್ರಸ್ತಾಪಿಸಿ, “ವರ್ಷದಲ್ಲಿ ಒಂದೋ, ಎರಡೋ ಬಾರಿ ಮಾತ್ರ ವಿಧಾನ ಮಂಡಲ ಅಧಿವೇಶನ ನಡೆಸಲು ಬಳಸಿ, ಉಳಿದಂತೆ ವರ್ಷವಿಡೀ ಖಾಲಿ ಇರುವ ಬೆಳಗಾವಿಯ ಸುವರ್ಣ ವಿಧಾನಸೌಧವನ್ನು, ಉತ್ತರ ಕರ್ನಾಟಕದ ಜನರ ಆರೋಗ್ಯ ಸೇವೆಗಾಗಿ ಶಾಶ್ವತವಾಗಿ ಸುಸಜ್ಜಿತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಬಹುದು ಎಂಬುದು ನನ್ನ ಸಲಹೆ” ಎಂದು ಹೇಳಿದ್ದರು.

Terrific that @DrAnjaliTai has followed up on her promise and shot off a letter to @BSYBJP urging him to covert #SuvarnaVidhanaSoudha into a #Covid hospital. https://t.co/d4EPfP0heR

— Sugata Srinivasaraju (@sugataraju) May 6, 2021

“ಸಾರ್ವಜನಿಕ ತೆರಿಗೆ ಹಣದ ನೂರಾರು ಕೋಟಿ ವೆಚ್ಚದಲ್ಲಿ, ಸೆಂಟ್ರಲ್ ವಿಸ್ತಾದ ರೀತಿ ಪ್ರತಿಷ್ಠೆಗಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡ ಅದು. 145,730 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಆ ಕಟ್ಟಡ ವರ್ಷದ ಬಹುತೇಕ ವೇಳೆ ಬೀಗ ಹಾಕಿದ ಸ್ಥಿತಿಯಲ್ಲಿರುತ್ತದೆ ಮತ್ತು ಅದರ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ಕರ್ಚು ಮಾಡಲಾಗುತ್ತಿದೆ. ವಿಸ್ತಾರ ನೆಲಮಾಳಿಗೆ ಮತ್ತು ನಾಲ್ಕು ಅಂತಸ್ತಿನ ಆ ಬೃಹತ್ ಭವನ ಸುಸಜ್ಜಿತ ಆಸ್ಪತ್ರೆಗೆ ಹೇಳಿಮಾಡಿಸಿದಂತಿದೆ. ನೀವು ಬೇಕಾದರೆ ಪ್ರಧಾನಿ ಮೋದಿಯವರಿಂದಲೇ ಅದರ ಉದ್ಘಾಟನೆ ಮಾಡಿಸಿ, ಈ ಕೋವಿಡ್ ಬಿಕ್ಕಟ್ಟಿನ ಹೊತ್ತಲ್ಲಿ ನಿಮ್ಮ ಮತ್ತು ಅವರ ಸರ್ಕಾರದ ಮುಕ್ಕಾದ ಪ್ರತಿಷ್ಠೆಯನ್ನು ಕೂಡ ಕೆಲಮಟ್ಟಿಗೆ ಗಳಿಸಬಹುದು. ಅದಕ್ಕೇನೂ ಅಭ್ಯಂತರವಿಲ್ಲ. ಈ ಕಾರ್ಯ ಮಾಡಿದರೆ ಜನ ಕೂಡ ಬಹುಶಃ ನಿಮ್ಮೆಲ್ಲಾ ಹಗರಣಗಳನ್ನೂ ಮನ್ನಿಸಬಹುದು” ಎಂದು ಸುಗತ ಅವರು ಹೇಳಿದ್ದರು.

ಜೊತೆಗೆ ಇಂತಹದ್ದೊಂದು ಜನಪರ ತೀರ್ಮಾನಕ್ಕೆ ಆತ್ಮಸಾಕ್ಷಿ ಹೊಂದಿರುವ ಪ್ರತಿಪಕ್ಷಗಳ ನಾಯಕರೂ ದನಿಗೂಡಿಸಿ ಸಾಧ್ಯವಾದಷ್ಟು ಬೇಗ ಈ ಬಗ್ಗೆ ವಿಧಾನಮಂಡಲದಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಬೇಕು ಎಂದೂ ಅವರು ಸಲಹೆ ನೀಡಿದ್ದರು.

ಅವರ ಈ ಸಲಹೆಯ ಬೆನ್ನಲ್ಲೇ ಆ ಸರಣಿ ಟ್ವೀಟ್ ವೈರಲ್ ಆಗಿತ್ತು. ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್, ಎಂ ಬಿ ಪಾಟೀಲ್, ಡಾ ಅಂಜಲಿ ನಿಂಬಾಳ್ಕರ್, ಮೋಹನ್ ಕೊಂಡಜ್ಜಿ ಸೇರಿದಂತೆ ನೂರಾರು ಮಂದಿ ರೀಟ್ವೀಟ್ ಮಾಡಿ, ಬಹಳ ಅಮೂಲ್ಯವಾದ ಮತ್ತು ಸಕಾಲಿಕ ಸಲಹೆ. ಸರ್ಕಾರ ಮತ್ತು ಮುಖ್ಯಮಂತ್ರಿಗಳು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಉತ್ತರ ಕರ್ನಾಟಕದ ಮಂದಿಯ ಜೀವರಕ್ಷಣೆಯ ನಿಟ್ಟಿನಲ್ಲಿ ಇಂತಹದ್ದೊಂದು ಕ್ರಮ ಕೈಗೊಳ್ಳಬೇಕು. ಜನರ ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ. ವರ್ಷದ ಒಂದೆರಡು ವಾರದ ಅಧಿವೇಶನಕ್ಕಾಗಿ ಬೃಹತ್ ಸೌಧವನ್ನು ವ್ಯರ್ಥ ಮಾಡುವ ಬದಲು, ಇಡೀ ಉತ್ತರ ಕರ್ನಾಟಕದ ಭಾಗದ ಜೀವ ರಕ್ಷಣೆಯ ನಿಟ್ಟಿನಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸುವುದಕ್ಕಿಂತ ದೊಡ್ಡ ಕಾರ್ಯ ಈ ಬಿಕ್ಕಟ್ಟಿನ ಹೊತ್ತಿನಲ್ಲಿ ಮತ್ತೊಂದು ಇರಲಾರದು ಎಂದು ಪ್ರತಿಕ್ರಿಯಿಸಿದ್ದಾರೆ.

“ರಾಜ್ಯದ ಇತರೆ ಭಾಗಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಕರೋನಾದ ಪರಿಣಾಮಗಳು ಭೀಕರ ಸ್ವರೂಪ ಪಡೆಯಲಿವೆ. ಹಾಗಾಗಿ ಈಗಲೇ ಅಂತಹ ಪರಿಸ್ಥಿತಿ ಎದುರಿಸಲು ತಯಾರಿ ಮಾಡಿಕೊಳ್ಳುವುದು ಒಳಿತು. ಮುಖ್ಯಮಂತ್ರಿಗಳು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೆ ತರಬೇಕು. ಬೆಳಗಾವಿಯ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ” ಎಂದು ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್  ಟ್ವೀಟ್ ಮಾಡಿದ್ದಾರೆ.

Good suggestion.

The impact of the #pandemic is only going to increase in rest of Karnataka, it’s best we prepare ourselves.@BSYBJP should take note & create the best facilities here, it will immensely help the people of #Belagavi region. https://t.co/RlVLZgkZFm

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 6, 2021

“ಬಿಐಇಸಿಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವುದು ಸಾಧ್ಯವಿದ್ದರೆ, ಇದು ಯಾಕೆ ಸಾಧ್ಯವಿಲ್ಲ” ಎಂದು ಪ್ರಶ್ನಿಸಿರುವ ಮತ್ತೊಬ್ಬ ಹಿರಿಯ ನಾಯಕ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಭಾವಿ ರಾಜಕಾರಣಿ ಡಾ ಎಂ ಬಿ ಪಾಟೀಲ್, “ಸೂಕ್ತ ಸೌಲಭ್ಯ ಮತ್ತು ಮೂಲಸೌಕರ್ಯಗಳೊಂದಿಗೆ ಉತ್ತಮ ಆಸ್ಪತ್ರೆಯಾಗಿ ಅದನ್ನು ಮಾಡಬಹುದು. ಈ ಸಲಹೆಯನ್ನು ಜಾರಿಗೊಳಿಸುವಂತೆ ನಾನು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ” ಎಂದು ಮುಖ್ಯಮಂತ್ರಿಗಳನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

Urge the government to consider implementing this.

With proper facilities and infrastructure in place.

When BIEC can be converted why not this? @BSYBJP @mla_sudhakar @drashwathcn https://t.co/0Oxr3iFf2a

— M B Patil (@MBPatil) May 6, 2021

ಮತ್ತೊಬ್ಬ ಕಾಂಗ್ರೆಸ್ ನಾಯಕಿ, ಹಾಗೂ ಬೆಳಗಾವಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕೂಡ ರೀ ಟ್ವೀಟ್ ಮಾಡಿದ್ದು, “ಈ ಸಲಹೆಯನ್ನು ಆದಷ್ಟು ಬೇಗ ಪರಿಗಣಿಸಿ, ಉತ್ತರ ಕರ್ನಾಟಕದ ಜನರಿಗೆ ನೆರವಾಗಬೇಕು. ಬೆಳಗಾವಿಯಲ್ಲಿ ನಿನ್ನೆ ಒಂದೇ ದಿನ 920 ಕೋವಿಡ್ ಪ್ರಕರಣಗಳು ವರದಿಯಾಗಿರುವುದನ್ನು ಗಮನಿಸಿದರೆ, ಆ ಭಾಗಕ್ಕೆ ಇಂತಹ ಆಸ್ಪತ್ರೆಯ ಅಗತ್ಯ ಎಷ್ಟಿದೆ ಎಂಬುದು ಅರಿವಾಗುತ್ತದೆ” ಎಂದು ಹೇಳಿದ್ದಾರೆ.

Sir @CMofKarnataka if the worst is yet to come please atleast now start preparing.
Listen to the Scientific Community.
Cases have increased in BELGAVI.
Consider CCC at Vidhan Soudha BELGAVI 🙏🏻. @RahulGandhi @rssurjewala @kcvenugopalmp @IYCKarnataka @KPCCKarnataka @siddaramaiah pic.twitter.com/rUjBzIfIfh

— Dr. Anjali Hemant Nimbalkar (@DrAnjaliTai) May 6, 2021

ಒಟ್ಟಾರೆ, ಕೋವಿಡ್ ಬಿಕ್ಕಟ್ಟಿನ ನಡುವೆ, ಒಂದು ಕಡೆ ರೋಗಿಗಳು ಆಸ್ಪತ್ರೆಯಲ್ಲಿ ಹಾಸಿಗೆಗಳು ಸಿಗದೆ, ಸಕಾಲದಲ್ಲಿ ಆಮ್ಲಜನಕ ಸಿಗದೆ, ಔಷಧಿ, ಚಿಕಿತ್ಸೆ ಸಿಗದೆ ಜೀವಬಿಡುತ್ತಿರುವ ಸಂದರ್ಭದಲ್ಲಿ, ಜನರ ತೆರಿಗೆ ಹಣದ ಸಾವಿರಾರು ಕೋಟಿ ವೆಚ್ಚದ ಕಟ್ಟಡವೊಂದು ಖಾಲಿ ಬಿದ್ದಿರುವುದನ್ನು ಆಡಳಿತದ ಚುಕ್ಕಾಣಿ ಹಿಡಿದವರ ಗಮನಕ್ಕೆ ತಂದು, ಆ ಬೃಹತ್ ಸೌಧವನ್ನು ಜನರ ಜೀವ ಉಳಿಸಲು ಬಳಸಿ ಎಂಬ ಕೂಗು ಎದ್ದಿದೆ. ಅಂತಹದ್ದೊಂದು ಜನಪರ ರಚನಾತ್ಮಕ ನಿರ್ಧಾರಕ್ಕೆ ರಾಜ್ಯ ಸರ್ಕಾರ ಕೂಡಲೇ ಮುಂದಾಗಬೇಕು ಮತ್ತು ಉತ್ತರ ಕರ್ನಾಟಕದ ಜನರ ಜೀವ ರಕ್ಷಣೆಯ ನಿಟ್ಟಿನಲ್ಲಿ ದೇಶಕ್ಕೇ ಮಾದರಿಯಾದ ಒಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಬೇಕು ಎಂಬ ಒತ್ತಾಯ ಬಲವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಕರ್ನಾಟಕದ ಜನರ ಹಕ್ಕೊತ್ತಾಯವಾಗಿ ಈ ಸಲಹೆ ಇದೀಗ ಮಾರ್ದನಿಸತೊಡಗಿದೆ.

ಉತ್ತರ ಕರ್ನಾಟಕದ ಜನತೆಯ ವಿಶ್ವಾಸ ಮತ್ತು ಬೆಂಬಲದ ಮೇಲೆ ನಿಂತಿರುವ ಬಿಜೆಪಿ ಪಕ್ಷ ಮತ್ತು ಸಿ ಎಂ ಯಡಿಯೂರಪ್ಪ ಅವರ ಕಡೆಯಿಂದ ಈ ದಿಸೆಯಲ್ಲಿ ಯಾವ ಪ್ರತಿಕ್ರಿಯೆ ಬರಲಿದೆ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ

Previous Post

ಸಾಂವಿಧಾನಿಕ ಸಂಸ್ಥೆಗಳು ಮಾಧ್ಯಮಗಳನ್ನು ದೂರುವುದನ್ನು ನಿಲ್ಲಿಸಬೇಕು: ಸುಪ್ರೀಂ ಕೋರ್ಟ್

Next Post

ಕರ್ನಾಟಕಕ್ಕೆ ಹೆಚ್ಚುವರಿ ಆಮ್ಲಜನಕ ಪೂರೈಕೆ ಆದೇಶ: ಸುಪ್ರೀಂ ಮೊರೆ ಹೋದ ಕೇಂದ್ರಕ್ಕೆ ಹಿನ್ನೆಡೆ

Related Posts

Top Story

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

by ಪ್ರತಿಧ್ವನಿ
July 9, 2025
0

https://youtube.com/live/i9mkXF_1kPE

Read moreDetails
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

July 9, 2025
ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

July 9, 2025
ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

July 9, 2025
ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

July 9, 2025
Next Post
ಕರ್ನಾಟಕಕ್ಕೆ ಹೆಚ್ಚುವರಿ ಆಮ್ಲಜನಕ ಪೂರೈಕೆ ಆದೇಶ: ಸುಪ್ರೀಂ ಮೊರೆ ಹೋದ ಕೇಂದ್ರಕ್ಕೆ ಹಿನ್ನೆಡೆ

ಕರ್ನಾಟಕಕ್ಕೆ ಹೆಚ್ಚುವರಿ ಆಮ್ಲಜನಕ ಪೂರೈಕೆ ಆದೇಶ: ಸುಪ್ರೀಂ ಮೊರೆ ಹೋದ ಕೇಂದ್ರಕ್ಕೆ ಹಿನ್ನೆಡೆ

Please login to join discussion

Recent News

Top Story

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

by ಪ್ರತಿಧ್ವನಿ
July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 
Top Story

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

by Chetan
July 9, 2025
ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 
Top Story

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

by Chetan
July 9, 2025
ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 
Top Story

ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

by Chetan
July 9, 2025
ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 
Top Story

ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

by Chetan
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada