ಅರಿಶಿನ ಬಹಳ ಹಿಂದಿನಿಂದಲು ಬಂದಿದ್ದು ,ತನ್ನದೆ ಆದ ಹಿನ್ನಲೆ ಹಾಗು ಪ್ರಾಮುಖ್ಯತೆಯಿದೆ.ಹೆಚ್ಚು ಅಡುಗೆಯಲ್ಲಿ ಅರಿಶಿನವನ್ನ ಬಳಸುತ್ತಾರೆ.ತನ್ನದೆ ಬಣ್ಣ ಹಾಗೂ ವಿಶೇಷ ರುಚಿಯನ್ನು ಅರಿಶಿನ ಹೊಂದಿದ್ದು ಸಾಕಷ್ಟು ಮಸಾಲೆಗೆ ಇದನ್ನ ಉಪಯೋಗಿಸುತ್ತಾರೆ.ಇದೆಲ್ಲದರ ಜೊತೆಗೆ ಅರಿಶಿನ ಆಯುರ್ವೇದ ಮೂಲಿಕೆಯಾಗಿದ್ದು ಸಾಕಷ್ಟು ಔಷದಿ ಗುಣಗಳನ್ನು ಹೊಂದಿದೆ.ಹಾಗೂ ಪ್ರತಿಯೊಂದು ಶುಭ ಕಾರ್ಯದಲ್ಲಿಯು ಅರಿಶಿನವನ್ನು ಬಳಸುತ್ತಾರೆ. ಮಧುವೆ ಸಮಾರಂಭದಲ್ಲಿ ಅರಿಶಿನ ಶಾಸ್ತ್ರ ಅಂತಾನೆ ಒಂದು ಆಚರಣೆಯನ್ನ ಮಾಡ್ತಾರೆ.ಹೀಗೆ ಪ್ರತಿಯೊಂದರಲ್ಲು ಅರಿಶಿನ ಬೇಕು.
![](https://pratidhvani.com/wp-content/uploads/2024/05/IMG_7395-1.jpeg)
ಸಾಕಷ್ಟು ಜನ ಅರಿಶಿನವನ್ನು ಬಳಸ್ತಾರೆ ಆದರೆ ಅದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಅನ್ನುವುದರ ಮಾಹಿತಿ ತಿಳಿದೆಯಿರುವವರ ಸಂಖ್ಯೆ ಕಡಿಮೆ. ಹಾಗಾದ್ರೆ ನಮ್ಮ ದೇಹ/ಆರೋಗ್ಯಕ್ಕೆ ಅರಿಶಿನದಿಂದಿರು ಪ್ರಯೋಜನವೇನು ಅನ್ನೊದರ ಡಿಟೇಲ್ಸ್ ಹೀಗಿದೆ.
ಮಧುಮೇಹ
ಮಧುಮೇಹ ಇದ್ದವರು ತಮ್ಮ ಆಹಾರದಲ್ಲಿ ಅರಿಶಿನವನ್ನು ಬಳಸಿದ್ರೆ ಡಯಾಬಿಟೀಸ್ ನ ಕಂಟ್ರೋಲ್ ಮಾಡಬಹುದು.
ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತದ ಸೈಟೊಕಿನ್ಗಳ ರಚನೆಯನ್ನು ಪ್ರತಿಬಂಧಿಸುವ ಮೂಲಕ ಟೈಪ್ 2 ಮಧುಮೇಹವನ್ನ ನಾರ್ಮಲ್ ಆಗಿ ಇರೊದಕ್ಕೆ ಸಹಕಾರಿ. ದಶಕಗಳ ಹಿಂದಿನಿಂದಲು ಮಧುಮೇಹಕ್ಕೆ ಅರಿಶಿನವನ್ನ ಔಷದಿಯಾಗಿ ಬಳಸುತ್ತಾರೆ.
![](https://pratidhvani.com/wp-content/uploads/2024/05/IMG_7396-1.jpeg)
ಅರಿಶಿನ ಮತ್ತು ಹಾಲು
ಒಂದು ಲೋಟ ಹಾಲಿಗೆ ಚಿಟಕಿ ಅರಿಶಿನವನ್ನು ಹಾಕಿ ಕುಡಿಯುವುದರಿಂದ ಮೂಳೆಗಳಿಗೆ ತುಂಬಾನೆ ಒಳೆಯದು.ಕಾರಣ ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುತ್ತದೆ ಹಾಗೂ ಅರಿಶಿನ ಮೂಳೆಗಳಿಗೆ ಸಂಭಂದಿಸಿದ ತೊಂದರೆಗಳನ್ನ ದೂರ ಮಾಡುತ್ತದೆ. ಇದೆರಡನ್ನು ಒಟ್ಟಿಗೆ ಸೇವಿಸಿದ್ರೆ ಮೂಳೆಗಳು ಬಲವಾಗುತ್ತವೆ, ಜಾಂಟ್ ಪೈನ್ ನಿವಾರಣೆ ಆಗುತ್ತದೆ, ಹಾಗೂ ಮೂಳೆಗಳು ಸವೇಯೊದು ಕೂಡಾ ಕಮೆಯಾಗುತ್ತದೆ.
![](https://pratidhvani.com/wp-content/uploads/2024/05/IMG_7399-1.jpeg)
ಶೀತ,ಕೆಮ್ಮಿಗೆ ರಾಮಬಾಣ
ನೆಗಡಿ ,ಶೀತಾ,ಕೆಮ್ಮು ಹೆಚ್ಚಾದರೆ ಒಂದು ಲೋಟ ಹಾಲಿಗೆ ಅರಿಶಿನ ಬೆಸರಿ ಚನ್ನಾಗಿ ಕುದಿಸಿ ನಂತ್ರ ಕುಡಿಯುವುದರಿಂದ ತಟ್ ಅಂತ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ.ಇದರಲ್ಲಿ ಆಂಟಿಬ್ಯಾಕ್ಟಿರಿಯಲ್ ಅಂಶ ಹೆಚ್ಚಿದ್ದು ವೈರಸ್ಗಳನ್ನ ವಿರೋಧಿಸುತ್ತದೆ.
![](https://pratidhvani.com/wp-content/uploads/2024/05/IMG_7394-2.jpeg)
ಜೀರ್ಣಕ್ರಿಯೆಗೆ ಉತ್ತಮ
ನಮ್ಮ ದೇಹದ ಚಯಪಚಯವನ್ನು ಸುಲಭ ಮಾಡುತ್ತದೆ ಮತ್ತು ಹೆಚ್ಚಿನ ಆಹಾರ ತಿಂದಾಗ ಚಿಟಿಕಿಯಷ್ಟು ಅರಿಶನವನ್ನು ಬಾಯಿಗೆ ಹಾಕಿ ಬಿಸಿ ನೀರನ್ನ ಕುಡಿಯುವದರಿಂದ ಬೇಗನೆ ಡೈಜೆಶನ್ ಆಗುತ್ತದೆ. ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿದ್ರು ಸಹ ನಿವಾರಣೆ ಮಾಡುತ್ತದೆ.
ಬಿದ್ದ ಗಾಯಕ್ಕೆ ಒಳ್ಳೆಯದು
ಬಹಳ ಹಿಂದಿನಿಂದಲು ಈ ಒಂದು ಮದ್ದನ್ನು ಮಾಡಿಕೊಂಡು ಬಂದಿದ್ದಾರೆ,ಮಕ್ಕಳು ಅಥವ ದೊಡ್ಡವರು ಬಿದ್ದಾಗ ಗಾಯವಾಗಿ ರಕ್ತ ಬರ್ತಾಯಿದೆ, ಆ ಜಾಗದಮೇಲೆ ಅರಿಶಿನ ಪುಡಿಯನ್ನ ಹಾಕುವುದರಿಂದ ಬ್ಲೀಡ್ ಆಗುವುದು ತಕ್ಷಣಕ್ಕೆ ನಿಲ್ಲುತ್ತದೆ. ಹಾಗೂ ಗಾಯಾದಿಂದಾಗುವ ಸೆಪ್ಟಿಕ್ ನ ತಡೆಗಟ್ಟುವುದಕ್ಕೆ ಇದು ಸಹಕಾರಿ.
![](https://pratidhvani.com/wp-content/uploads/2024/05/IMG_7401.jpeg)
ತ್ವಜೆಯ ಆರೋಗ್ಯಕ್ಕೆ ಉತ್ತಮ
ಅರಿಶಿನವನ್ನು ನಿಮ್ಮ ಮುಖ ಅಥವ ದೇಹದ ಯಾವೂದೆ ಭಾಗಕ್ಕೆ ಹಚ್ಚುವುದರಿಂದ ತ್ವಜೆಯ ಹೊಳಪನ್ನು ಹೆಚ್ಚಿಸುತ್ತದೆ.ಮುಖದಲ್ಲಿರುವಂತ ಕಪ್ಪು ಕಲೆಗಳು ಅಥವ ಮೊಡವೆಯ ಕಲೆಗಣನ್ನು ನಿವಾರಣೆ ಮಾಡುತ್ತದೆ.ಸುಕ್ಕುಗಳನ್ನ ಹೋಗಲಾಡಿಸುವುದಕ್ಕೆ ಅರಿಶಿನ ಉತ್ತಮ.ಹಾಲಿನ ಕೆನೆಯೊಂದಿಗೆ ಅರಿಶಿನ ಬೆರಸಿ ಹಚ್ಚಬಹುದು, ಟೊಮೇಟೊ ರಸ ಮತ್ತು ಅರಿಶಿನ ತ್ವಜೆಗೆ ಉತ್ತಮ.ಕಾಫಿ ಪುಡಿ ಮತ್ತು ಅರಿಶಿನ ಒಳ್ಳೆಯದು.ಹೀಗೇ ತ್ವಜೇಯ ಹೆಚ್ಚು ಸಮಸ್ಯೆಗಳಿಗೆ ಅರಿಶಿನ ಒಳ್ಳೆಯದು.
![](https://pratidhvani.com/wp-content/uploads/2024/05/IMG_7398-1.jpeg)
ಒಟ್ಟಿನಲ್ಲಿ ಅರಿಶಿನದಿಂದಿರು ಲಾಭಗಳು ಬಹಳ.ನಮ್ಮ ಆರೋಗ್ಯಕ್ಕೆ ಸಂಭಂದಿಸಿದ ಸಾಕಷ್ಟು ಕಾಯಿಲೆಗಳನ್ನ ನೀವಾರಿಸೊದಕ್ಕೆ ಅರಿಶಿನ ಪ್ರಮುಖ ಸ್ಥಾನವನ್ನು ವಹಿಸುತ್ತದೆ. ಸರ್ವ ರೋಗಕ್ಕು ಅರಿಶಿನ ಮದ್ದು.