ರೇಣುಕಾಸ್ವಾಮಿ (renuka swamy) ಕೊಲೆ ಪ್ರಕರಣದ ಆರೋಪಿಗಳನ್ನ ಸ್ಥಳ ಮಹಜರು ಮಾಡಿಸಲು ಕಾಮಾಕ್ಷಿಪಾಳ್ಯ ಪೊಲೀಸರು ಚಿತ್ರದುರ್ಗಕ್ಕೆ (chitradurga) ಕರೆದುಕೊಂಡು ಹೋಗಲಿದ್ದಾರೆ ಅನ್ನೋ ಮಾಹಿತಿ ಇದೆ. ಪ್ರಕರಣದ ನಾಲ್ವರು ಆರೋಪಿಗಳನ್ನ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಲಿದ್ದಾರೆ.
![](https://pratidhvani.com/wp-content/uploads/2024/06/DARSHAN_-RENUKASWAMY.png)
ಕೊಲೆಯಾದ ರೇಣುಕಾ ಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ (Kidnap) ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ರು. ಪ್ರಕರಣದ ಎ3 ಆರೋಪಿ ಸಲಹೆ ಮೇರೆಗೆ ಕಿಟ್ರ್ಯಾಪ್ ಮಾಡಿದ್ದ ರಾಘವೇಂದ್ರ, ಕಾರ್ತೀಕ್, ನಂದಿಶ್, ಪವನ್ನನ್ನ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಲಿದ್ದಾರೆ.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಈ ಟೀಂ ಯಾವ ರೀತಿ ಕಿಟ್ರ್ಯಾಪ್ ಮಾಡಿಕೊಂಡು ಬಂದ್ರು ಎಂಬುದರ ಬಗ್ಗೆ ಸಾಕ್ಷ ಕಲೆಹಾಕುವಲ್ಲಿ ಈ ಸ್ಪಾಟ್ ಮಹಜರ್ ಮುಖ್ಯ ಪಾತ್ರ ವಹಿಸಲಿದೆ.