ವಾಲ್ಮೀಕಿ ನಿಗಮದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಸಿದ್ದು ಸರ್ಕಾರಕ್ಕೆ ಟೆನ್ಸನ್ ಶುರುವಾಗಿದೆ. ಮೈತ್ರಿ ನಾಯಕರಿಂದ ಸಿಎಂ ಸಿದ್ದರಾಮಯ್ಯ (M Siddaramiah) ರಾಜೀನಾಮೆಗೆ ಒತ್ತಡ ಹೆಚ್ಚಾಗ್ತಿದೆ. ಹೀಗಾಗಿ ನಿಗಮದ ಭ್ರಷ್ಟಾಚಾರದ ವಿಚಾರದಲ್ಲಿ ಪಾರಾಗಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ.
![](https://pratidhvani.com/wp-content/uploads/2024/06/b-nagendra-1-1024x576.webp)
ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ (Basanagowda daddal) ರಾಜೀನಾಮೆ ಮೂಲಕ ಪ್ರಕರಣದಿಂದ ಜಾರಿಕೊಳ್ಳುವ ಸಾಧ್ಯತೆಯಿದೆ. ಇನ್ನು ವಿಪಕ್ಷಕ್ಕೆ ಅಸ್ತ್ರವಾಗಿರುವ ಈ ಪ್ರಕರಣದಿಂದ ಹೊರ ಬರಲು ಸಿದ್ದರಾಮಯ್ಯ ಕಸರತ್ತು ನಡೆಸ್ತಿದ್ದಾರೆ.
ಇನ್ನು ಹಗರಣ ಬಗ್ಗೆ ಎಸ್ಐಟಿ (SIT) ತಂಡ ತನಿಖೆಯನ್ನು ಚುರುಕುಗೊಳಿಸಿದೆ. ತಲೆಮರಿಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. 18 ನಕಲಿ ಖಾತೆಗಳ ಲಿಸ್ಟ್ ಹಾಗೂ ಆ ಅಕೌಂಟ್ ಹೋಲ್ಡರ್ ಗಳ ಲಿಸ್ಟ್ ರೆಡಿ ಮಾಡಿಕೊಂಡು ಬ್ಯಾಂಕ್ಗಳಿಂದ ಮಾಹಿತಿ ಕಲೆ ಹಾಕಿದ್ದಾರೆ.