Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಬಿಜೆಪಿ ಶಕ್ತಿ ಬಗ್ಗೆ ತಿಳಿಯದಿರುವುದೇ ರಾಹುಲ್‌ ಸಮಸ್ಯೆ, ಜನರ ಕೋಪ ಬಿಜೆಪಿಯನ್ನು ಸೋಲಿಸಲು ಸಾಕಾಗುವುದಿಲ್ಲ– ಪ್ರಶಾಂತ್‌ ಕಿಶೋರ್

ಪ್ರತಿಧ್ವನಿ

ಪ್ರತಿಧ್ವನಿ

October 28, 2021
Share on FacebookShare on Twitter

ಮುಂದಿನ ಕೆಲವು ದಶಕಗಳವರೆಗೆ ಬಿಜೆಪಿ (ಕೇಂದ್ರ ರಾಜಕಾರಣದಿಂದ) ಎಲ್ಲಿಗೂ ಹೋಗುವುದಿಲ್ಲ, ಆದರೆ ರಾಹುಲ್‌ ಗಾಂಧಿ ಅವರ ಸಮಸ್ಯೆ ಏನೆಂದರೆ ಅವರು ಈ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಚುನಾವಣಾ ಪ್ರಚಾರ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಭಾರತದ ವಿದೇಶಿ ವಿನಿಮಯ ಆಪದ್ಧನ ಏಕೆ ಕರಗುತ್ತಿದೆ?

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ರಾಜೀನಾಮೆ‌

ಗುಜರಾತ್‌ ನಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ

ಗೋವಾದಲ್ಲಿ ಬುಧವಾರ ಮಾತನಾಡಿದ ಪ್ರಶಾಂತ್ ಕಿಶೋರ್ ಅವರ ಈ ಹೇಳಿಕೆಯು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಸದಸ್ಯರೊಂದಿಗೆ ಅವರುೀ ಹಿಂದೆ ನಡೆಸಿದ ಮಾತುಕತೆಗಳು ಸಫಲವಾಗಿಲ್ಲ ಎಂಬ ಅನುಮಾನ ಹುಟ್ಟುವಂತೆ ಮಾಡಿದೆ.

ಭಾರತದ ರಾಜಕೀಯದಲ್ಲಿ ಇನ್ನು ಹಲವು ದಶಕಗಳ ಕಾಲ ಬಿಜೆಪಿ ಅಧಿಕಾರ ಮುಂದುವರೆಯಲಿದ್ದು, ಕೇಂದ್ರ ಬಿಂದುವಾಗಿ ಪಕ್ಷ ಇರಲಿದೆ. ಚುನಾವಣೆಯಲ್ಲಿ ಗೆಲ್ಲಲಿ, ಬಿಡಲಿ, ಬಿಜೆಪಿ ಭಾರತದ ರಾಜಕೀಯ ಪ್ರಮುಖ ಪಕ್ಷವಾಗಿ ಹೊರ ಹೊಮ್ಮಲಿದೆ. ಹೇಗೆಂದರೆ ಸ್ವಾಂತಂತ್ರ್ಯದ ಬಳಿಕ 40 ವರ್ಷಗಳ ಕಾಲ ಭಾರತದ ರಾಜಕೀಯದಲ್ಲಿ ಕಾಂಗ್ರೆಸ್ ಸಾಧಿಸಿದ ಹಿಡಿತದಂತೆ ಬಿಜೆಪಿ ಕೂಡ ಮುಂದಿನ ದಶಕಗಳ ಕಾಲ ತನ್ನ ಪ್ರಾಬಲ್ಯ ಮೆರೆಯಲಿದೆ. ಭಾರತದಲ್ಲಿ ಒಂದು ಸಲ ಶೇ 30 ರಷ್ಟು ಮತವನ್ನು ಪಡೆದರೆ ಸಾಕು, ಅಂತಹ ಪಕ್ಷಗಳು ರಾಜಕೀಯ ಪುಟದಿಂದ, ಜನರ ಮನಸ್ಸಿನಿಂದ ಅಷ್ಟು ಬೇಗ ಹೊರ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಕೆಲವು ನೀತಿಗಳ ಬಗ್ಗೆಗ್ಗೆ ಜನರು ಕೋಪಗೊಂಡಿದ್ದಾರೆ ಎಂಬ ಮಾತ್ರಕ್ಕೆ ಬಿಜೆಪಿ ರಾಜಕೀಯದಿಂದ ಹೊರಗುಳಿಯಲಿದೆ ಎಂಬ ಭ್ರಮೆಗೆ ಸಿಲುಕಬೇಡಿ. ಜನರ ಅಸಮಾಧಾನದಿಂದ ಮೋದಿ ಅವರು ಅಧಿಕಾರ ಕಳೆದುಕೊಳ್ಳಬಹುದು. ಆದರೆ, ಬಿಜೆಪಿ ರಾಜಕೀಯ ಅಸ್ತಿತ್ವದಲ್ಲಿ ಇರಲಿದೆ. ಈ ಸತ್ಯವನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಂಡಿಲ್ಲ. ಜನರು ನರೇಂದ್ರ ಮೋದಿಯವರನ್ನು ದೂರ ತಳ್ಳುತ್ತಾರೆ. ಮೋದಿ ಬಗ್ಗೆ ಜನರಿಗೆ ಕೋಪ ಇದೆ ಎಂದು ರಾಹುಲ್‌ ಗಾಂಧಿ ಭಾವಿಸಿಕೊಂಡಿದ್ದಾರೆ. ಆದರೆ, ಆ ರೀತಿ ಎಂದಿಗೂ ಆಗುವುದಿಲ್ಲ ಎಂದು ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಮತ್ತು ಬಿಜೆಪಿಯ ಶಕ್ತಿಯನ್ನು ಪರೀಕ್ಷಿಸಿ, ಅರ್ಥಮಾಡಿಕೊಳ್ಳಿ. ಅದನ್ನು ಅರಿಯದಿದ್ದರೆ, ಅವರನ್ನು ಸೋಲಿಸಲು ಎಂದಿಗೂ ಪ್ರತಿತಂತ್ರ ಹೂಡಲು ಸಾಧ್ಯವಾಗುವುದಿಲ್ಲ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಶಾಂತ್ ಕಿಶೋರ್ ಅವರ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ತಮಿಳೂನಾಡಿನಲ್ಲಿ ಎಂಕೆ ಸ್ಟಾಲಿನ್ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕಿಶೋರ್, ಕಾಂಗ್ರೆಸ್ ಸೇರುವ ಬಗ್ಗೆ ವದಂತಿಗಳು ಹಬ್ಬಿದ್ದವು. ಪ್ರಶಾಂತ್‌ ಅವರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಪಕ್ಷದ ಇತರೆ ನಾಯಕರ ಜತೆ ಹಲವು ಬಾರಿ ಮಾತುಕತೆ ನಡೆಸಿರುವುದು ಈ ವದಂತಿಗಳಿಗೆ ಪುಷ್ಟಿ ನೀಡಿದ್ದವು. ಆದರೆ ಅದರಲ್ಲಿ ಯಾವುದೇ ಫಲ ಕಂಡಿಲ್ಲ ಅನ್ನುವ ಅನುಮಾನ ಪ್ರಶಾಂತ್‌ ಅವರ ಈ ಹೇಳಿಕೆಯಿಂದ ವ್ಯಕ್ತವಾಗಿದೆ.

ಸುದೀರ್ಘ ರೈತ ಹೋರಾಟ, ನಿರಂತರ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಜ್ವಲಂತ ಸಮಸ್ಯೆಗಳು ನರೇಂದ್ರ ಮೋದಿ ಅಲೆಯನ್ನು ಕುಗ್ಗಿಸಿದೆ ಹಾಗೂ ಮುಂದಿನ ಬಾರಿ ಬಿಜೆಪಿಗೆ ಇದರಿಂದ ಹಿನ್ನಡೆಯಾಗಲಿದೆ ಎಂಬ ಪ್ರತಿಪಕ್ಷಗಳ ನಂಬಿಕೆಯನ್ನೇ ಪ್ರಶಾಂತ್‌ ಕಿಶೋರ್‌ ಅವರ ಈ ಹೇಳಿಕೆ ಬುಡಮೇಲುಗೊಳಿಸಿದೆ.

RS 500
RS 1500

SCAN HERE

don't miss it !

ದಲಿತ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಿಲ್ಲವಾ? ಬರೀ ಚರ್ಚೆಗಷ್ಟೇ ಸೀಮಿತನಾ?
ಕರ್ನಾಟಕ

ದಲಿತ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಿಲ್ಲವಾ? ಬರೀ ಚರ್ಚೆಗಷ್ಟೇ ಸೀಮಿತನಾ?

by ಮಂಜುನಾಥ ಬಿ
May 18, 2022
ಅರ್ಧಗಂಟೆಗೆ ಮುಗಿದ ಮಳೆ ಹಾನಿ ಪ್ರದೇಶ ಭೇಟಿ: ಸಿಎಂ ಬೊಮ್ಮಾಯಿ ಕಾಟಾಚಾರ ವೀಕ್ಷಣೆ!
ಕರ್ನಾಟಕ

ಅರ್ಧಗಂಟೆಗೆ ಮುಗಿದ ಮಳೆ ಹಾನಿ ಪ್ರದೇಶ ಭೇಟಿ: ಸಿಎಂ ಬೊಮ್ಮಾಯಿ ಕಾಟಾಚಾರ ವೀಕ್ಷಣೆ!

by ಪ್ರತಿಧ್ವನಿ
May 18, 2022
ಮೇ 9ರಿಂದ ಮೈಕ್‌ ನಲ್ಲಿ ಮಹಾ ಆರತಿ ಅಭಿಯಾನ: ಪ್ರಮೋದ್‌ ಮುತಾಲಿಕ್
ಕರ್ನಾಟಕ

ಸನ್ಯಾಸಿಗಳ ಮೇಲೆ ಹಲ್ಲೆ ಅಕ್ಷಮ್ಯ ಅಪರಾಧ: ಪ್ರಮೋದ್‌ ಮುತಾಲಿಕ್

by ಪ್ರತಿಧ್ವನಿ
May 13, 2022
KSRTC ಬಸ್ ಬಾಡಿಗೆ ಪಡೆಯೋರಿಗೆ ಕಹಿ ಸುದ್ದಿ : ಕಿಲೋಮೀಟರ್ ದರ ಹೆಚ್ಚಳ
ಕರ್ನಾಟಕ

KSRTC ಬಸ್ ಬಾಡಿಗೆ ಪಡೆಯೋರಿಗೆ ಕಹಿ ಸುದ್ದಿ : ಕಿಲೋಮೀಟರ್ ದರ ಹೆಚ್ಚಳ

by ಪ್ರತಿಧ್ವನಿ
May 17, 2022
ಶೀನಾ ಬೋರಾ ಹತ್ಯೆ ಪ್ರಕರಣ; ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು
ಇದೀಗ

ಶೀನಾ ಬೋರಾ ಹತ್ಯೆ ಪ್ರಕರಣ; ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು

by ಪ್ರತಿಧ್ವನಿ
May 18, 2022
Next Post
ಸವಾಲಿನ ಸಮರಕ್ಕೆ ಮುಂದಾದ ಸಮೀರ್ ವಾಂಖೆಡೆ ಮತ್ತು ನವಾಬ್ ಮಲಿಕ್

ಸವಾಲಿನ ಸಮರಕ್ಕೆ ಮುಂದಾದ ಸಮೀರ್ ವಾಂಖೆಡೆ ಮತ್ತು ನವಾಬ್ ಮಲಿಕ್

ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಈ ವೈರಸ್ ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಏನಿದು ಪೆಗಾಸಸ್ ಸ್ಪೈವೇರ್ ವಿವಾದ: ಈ ವೈರಸ್ ಹೇಗೆ ಕಾರ್ಯನಿರ್ವಹಿಸುತ್ತೇ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಎರಡು ಕ್ಷೇತ್ರಗಳ ಉಪ ಚುನಾವಣೆ ನಿಜಕ್ಕೂ ನಿರ್ಣಾಯಕವಾಗುವುದು ಯಾಕೆ?

ಎರಡು ಕ್ಷೇತ್ರಗಳ ಉಪ ಚುನಾವಣೆ ನಿಜಕ್ಕೂ ನಿರ್ಣಾಯಕವಾಗುವುದು ಯಾಕೆ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist