ದಾವಣಗೆರೆಯ ಚನ್ನಗಿರಿ (Chennagiri) ಠಾಣೆಯ ಮೇಲೆ ಉದ್ರಿಕ್ತರು ದಾಳಿ ನಡೆಸಿ ಪೋಲಿಸ್ ವಾಹನಗಳನ್ನ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉದ್ರಿಕ್ತರ ಕಿಡಿಗೇಡಿ ಕೃತ್ಯವನ್ನ ಚನ್ನಗಿರಿಯ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಾಂಗ (Basavaraj shivaganga) ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಉಡಾಫೆ ಉತ್ತರ ನೀಡಿದ್ದಾರೆ.ಇಂತಹ ಗಲಭೆಗಳು ಸಹಜ ಪ್ರಕ್ರಿಯೆ. ಉದ್ದೇಶ ಪೂರ್ವಕವಾಗಿ ಗಲಭೆ ಮಾಡಿಲ್ಲ ಅಂತ ಕಿಡಿಗೇಡಿಗಳ ಕೃತ್ಯಕ್ಕೆ ಶಾಸಕ ಸಬೂಬು ಹೇಳಿದ್ದಾರೆ.
![](https://pratidhvani.com/wp-content/uploads/2024/05/IMG_7946.jpeg)
ಸಾವು ಆಗಿರೋರು ನಮ್ಮವರೆ, ಗಲಾಟೆ ಮಾಡಿರೋರು ನಮ್ಮವರೆ. ಸಾವಾಗಿರೋದ್ರಿಂದ ಉದ್ರೇಕಗೊಂಡು ಗಲಾಟೆ ಮಾಡಿದ್ದಾರಷ್ಟೆ ಎಂದು ಹೇಳುವ ಮೂಲಕ ಇಂಥ ಹೀನ ಕೃತ್ಯವನ್ನೂ ಶಾಸಕರು ಸಮರ್ಥಿಸಿಕೊಂಡಿರುವುದಕ್ಕೆ ಕ್ಷೇತ್ರದ ಜನ ಶಾಸಕ ಬಸವರಾಜ್ ಶಿವಗಂಗಾಗೆ ಛೀಮಾರಿ ಹಾಕ್ತಿದ್ದಾರೆ.
ಮತ ಬ್ಯಾಂಕ್ ರಾಜಕಾರಣ (Vote bank), ಸಮುದಾಯದ ತುಷ್ಠಿಕರಣ ಎಲ್ಲದಕ್ಕೂ ಒಂದು ಮಿತಿಯಿರಬೇಕು. ಗೃಹಸಚಿವರು(Home Minister) ನೋಡಿದ್ರೆ, ಕೇವಲ ಮಾತಿಗಷ್ಟೇ ಪೋಲಿಸ್ರ ತಲೆ ಕತ್ತರಿಸ್ತೀವಿ ಅಂದ್ರೆ ಸುಮ್ಮನೆ ಬೀಡೋದಕ್ಕಾಗುತ್ತಾ ಅಂತಾರೆ, ಇತ್ತ ಸರ್ಕಾರ ಕಿಡಿಗೇಡಿಗಳನ್ನ ಬಿಟ್ಟು ಪೋಲಿಸರ(Police) ಮೇಲೆ ಕ್ರಮ ಕೈಗೊಂಡಿದೆ. ಈ ಮಧ್ಯೆ ಶಾಸಕರ ಈ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.