ಪ್ರಸಕ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ (Congress) ದುರಾಡಳಿತದಿಂದ ಕರ್ನಾಟಕದ (Karnataka)ಪರಿಸ್ಥಿತಿ ಲಾಲು ಪ್ರಸಾದ್ ಯಾದವ್ (Lalu prasad yadav) ಅವರ ಬಿಹಾರ (Bihar) ರೀತಿ ಆಗ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ. ದಾವಣಗೆರೆಯ (Davanagere) ಚನ್ನಗಿರಿಯಲ್ಲಿ ಉದ್ರಿಕ್ತರು ಪೋಲಿಸ್ ಠಾಣೆ ಮೇಲೆ ದಾಳಿ ಮಾಡಿದ ಪ್ರಕರಣದ ಬಗ್ಗೆ ಬಿವೈವಿ ಆಕೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಯಾವ ರೀತಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಈ ಪ್ರಕರಣದಿಂದ ಅರ್ಥವಾಗುತ್ತದೆ ಎಂದ ಅವರು, ನಮ್ಮ ರಾಜ್ಯದಲ್ಲಿ ಕಾನೂನು, ಆಡಳಿತ, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇದ್ದಾರಾ? ಎಂದು ವ್ಯಂಗ ಮಾಡಿದ್ದಾರೆ.
ಚನ್ನಗಿರಿ (Chennagiri) ಠಾಣೆ ಧ್ವಂಸ ಪ್ರಕರಣದ ಬಗ್ಗೆ ವಿಜಯೇಂದ್ರ (Vijayendra) ಬಹಳ ಗರಂ ಆಗಿಯೇ ರಿಯಾಕ್ಟ್ ಮಾಡಿದ್ದು, ರಾಜ್ಯವನ್ನ ಬಿಹಾರ ಮಾಡಲು ಹೊರಟಿರುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂ ಮತ್ತು ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ರು.