
ತೆಲಂಗಾಣ: ಮುಸ್ಲಿಂ ವ್ಯಕ್ತಿಯೊಬ್ಬ ತಡರಾತ್ರಿ ದೇವಸ್ಥಾನವೊಂದಕ್ಕೆ ನುಗ್ಗಿ ದೇವಿಯ ವಿಗ್ರಹವನ್ನು ಕಾಲಿನಿಂದ ತುಳಿದು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ತೆಲಂಗಾಣದ ಕೂರ್ಮಗುಡ ಪ್ರದೇಶದ ಮುತ್ಯಾಲಮ್ಮ ದೇವಸ್ಥಾನದ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ.
CCTV footage of vandalism and murti desecration by Islamists at the Mutyalamma Temple in Secunderabad pic.twitter.com/rOg380QeSQ
— Organiser Weekly (@eOrganiser) October 14, 2024
ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಘಟನೆ ಬೆಳಕಿಗೆ ಬರುತ್ತಿದ್ದ ಹಾಗೇ ಸಿಕಂದರಾಬಾದ್ನಲ್ಲಿ ಉದ್ವಿಗ್ನತೆ ಉಂಟಾಗಿದೆ. ಹಿಂದೂಗಳು ಆಕ್ರೋಶವನ್ನು ಹೊರಹಾಕಿ, ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಘಟನೆಯು ಪಾಸ್ಪೋರ್ಟ್ ಕಚೇರಿಯ ಬಳಿ ಸಂಭವಿಸಿದೆ ಎಂದು ನಂಬಲಾಗಿದ್ದು, ಉಗ್ರರಲ್ಲಿ ಒಬ್ಬನನ್ನು ಸ್ಥಳೀಯರು ತಕ್ಷಣವೇ ಸೆರೆಹಿಡಿದಿದ್ದಾರೆ. ಬಳಿಕ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆಯ ನಂತರ, ಅಧಿಕಾರಿಗಳು ಭದ್ರತೆಯನ್ನು ಬಲಪಡಿಸಿದರು ಮತ್ತು ಶಾಂತಿ ಪುನಃಸ್ಥಾಪಿಸಲು ಕೆಲಸ ಮಾಡುತ್ತಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗಮನಾರ್ಹ ಸಂಖ್ಯೆಯ ನಿವಾಸಿಗಳು ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು ಮತ್ತು ಬಿಜೆಪಿ ನಾಯಕರೂ ಅವರೊಂದಿಗೆ ಸೇರಿಕೊಂಡರು. ಮಾಧವಿ ಲತಾ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಜೈಲು ಪಾಲಾದರು. ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ದೇವಸ್ಥಾನಕ್ಕೆ ತೆರಳಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು.




