Tag: ಬಿಹಾರ ಚುನಾವಣೆ

ಬಿಹಾರದಲ್ಲಿ ಕಾಂಗ್ರೆಸ್‌ – ಆರ್‌ಜೆಡಿ ಗೆಳತನದಲ್ಲಿ ಬಿರುಕು: ಲಾಲೂ ಜೊತೆ ಸೋನಿಯಾ ಗಾಂಧಿ ಗೌಪ್ಯ ಚರ್ಚೆ!

ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (RJD) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮುರಿಯಲಿದೆ ಎಂಬ ಊಹಾಪೋಹಗಳ ಮಧ್ಯೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಸೋನಿಯಾ ಗಾಂಧಿ ಅವರು ಲಾಲು ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದು, ಉಭಯ ನಾಯಕರು ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. https://twitter.com/ANI/status/1453217657621209089?s=20 ತಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಬಿಹಾರ ಉಸ್ತುವಾರಿ ಮತ್ತು ಬಿಹಾರದ ರಾಜ್ಯಾಧ್ಯಕ್ಷರೊಂದಿಗೆ ದೆಹಲಿಯಲ್ಲಿ ನಡೆದ ಅತ್ಯಂತ ಮಹತ್ವದ ಸಭೆಯ ನಂತರ ಸೋನಿಯಾ ಗಾಂಧಿಯವರು ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಫೋನ್ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಬಿಹಾರ ಕಾಂಗ್ರೆಸ್‌ನ ಉಸ್ತುವಾರಿ ಭಕ್ತ ಚರಣ್ ದಾಸ್ ಮತ್ತು ಇತರ ನಾಯಕರು ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಹೈಕಮಾಂಡ್ ಇದಕ್ಕೆ ಸಿದ್ಧವಿಲ್ಲ ಎಂಬುದು ಉಭಯ ನಾಯಕರ ಫೋನ್ ಮಾತುಕತೆ ಮೂಲಕ ತಿಳಿದುಬಂದಿದೆ. ಬಿಹಾರದ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವಉಪಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಈ ಸಂಭಾಷಣೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತಿದೆ. ಅದಾಗ್ಯೂ, ಉಭಯ ನಾಯಕರ ನಡುವಿನ ಮಾತುಕತೆ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ವಾಸ್ತವವಾಗಿ, ಬಿಹಾರದ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ವಿಚಾರದಲ್ಲಿ ಮಹಾಘಟಬಂಧನ್‌ನ ಎರಡು ಮಿತ್ರಪಕ್ಷಗಳಾದ ರಾಷ್ಟ್ರೀಯ ಜನತಾ ದಳ (RJD) ಮತ್ತು ಕಾಂಗ್ರೆಸ್ ನಡುವೆ ಒಡಕು ಏರ್ಪಟ್ಟಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್‌ಗೆ ಎರಡು ಸ್ಥಾನಗಳಲ್ಲಿ ಒಂದನ್ನು ಸಹ ನೀಡದಿರುವ ನಿರ್ಧಾರವನ್ನೂ ತೆಗೆದುಕೊಂಡಿರುವುದರ ಬಗ್ಗೆ ಬಹಿರಂವಾಗಿ ಹೇಳಿಕೆ ನೀಡಿದ್ದರು. ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯನ್ನು ಭಕ್ಚೋನ್‌ಹರ್ ಎಂದು ಸಂಬೋಧಿಸಿದ್ದರು. ಅಂದಿನಿಂದ,  ಮಹಾಮೈತ್ರಿಕೂಟದಲ್ಲಿ ಕಹಿ ವಿಷಯಗಳು ಮುನ್ನೆಲೆಗೆ ಬರಲು ಪ್ರಾರಂಭಿಸಿದವು ಮತ್ತು ತಮ್ಮ ಈ ಹೇಳಿಕೆಯನ್ನು ಹಿಂಪಡೆಯುವಂತೆ ಲಾಲು ಯಾದವ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿತು. ಇದಾದ ನಂತರ, ಇತ್ತೀಚಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಮಾಡಿದಷ್ಟು ಯಾರೂ ಕಾಂಗ್ರೆಸ್‌ಗೆ ಸಹಾಯ ಮಾಡಿಲ್ಲ ಎಂದು ಹೇಳಿದ್ದರು. ಇದರೊಂದಿಗೆ, ದೇಶಕ್ಕೆ ಅಗತ್ಯವಿರುವ ರಾಷ್ಟ್ರೀಯ ಪರ್ಯಾಯವಾಗಿ ಕಾಂಗ್ರೆಸ್ ಅನ್ನು ಈಗಲೂ ಪರಿಗಣಿಸುವುದಾಗಿಯೂ ಸ್ಪಷ್ಟಪಡಿಸಿದ್ದರು. 

Read moreDetails

ತಮಿಳುನಾಡು ಮೇಲೆ ಅಮಿತ್ ಶಾ ಹದ್ದಿನ ಕಣ್ಣು; ದ್ರಾವಿಡರ ನೆಲದಲ್ಲಿ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ

ಬಿಹಾರದಲ್ಲಿ ಬಿಜೆಪಿ ಉತ್ತಮ ಸಾಧನೆಯೇ ಮಾಡಿದೆ. ಹಾಗಾಗಿ ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆ ಗೆದ್ದು ಕಮಲ ಅರಳಿಸುವ ಕನಸು ಬಿಜೆಪಿಯದ್ದು

Read moreDetails

ಬಿಹಾರ: ಯಾವುದೇ ಪಕ್ಷದ ‘ಬಿ’ ಟೀಂ ಆಗದೆ ಗೆಲುವು ಸಾಧಿಸಿರುವ ಓವೈಸಿಯ AIMIM

ಈ ವಿಶ್ಲೇಷಣೆಯಿಂದ AIMIM ಯಾವುದೇ ಪಕ್ಷದ B ಟೀಂ ಆಗಿರಲಿಲ್ಲ, ಇದರ ಸ್ಪರ್ದೆಯಿಂದ NDA ಗೆಲುವಿಗೆ ಯಾವುದೇ ರೀತಿಯಲ್ಲೂ ಅನುಕೂಲವಾಗಿಲ್ಲ

Read moreDetails

ಬಿಹಾರದ ಗದ್ದುಗೆ ಹಿಡಿಯುವತ್ತ ಬಿಜೆಪಿ, ಮಹಾಘಟಬಂಧನಕ್ಕೆ ಅನಿರೀಕ್ಷಿತ ಹಿನ್ನಡೆ

ಫಲಿತಾಂಶದ ಚಿತ್ರಣದ ಪ್ರಕಾರ BJP ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದ್ದು, JDU ತೀರಾ ಹೀನಾಯ ಸೋಲು ಕಾಣುವ ಮೂಲಕ NDA ಮೈತ್ರಿಯಲ್

Read moreDetails

ಬಿಹಾರ ಚುನಾವಣೋತ್ತರ ಸಮೀಕ್ಷೆ: ತೇಜಸ್ವಿ ಯಾದವ್‌ ಮುಖ್ಯಮಂತ್ರಿಯಾಗುವ ಸಾಧ್ಯತೆ

ಒಟ್ಟು 243 ವಿಧಾನಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಸರಳ ಬಹುಮತ ಸಾಬೀತು ಪಡಿಸಲು 123 ಸ್ಥಾನಗಳು ಅಗತ್ಯವಿದ್ದು, ಸಮೀಕ್ಷೆಯ ಪ್ರಕಾರ

Read moreDetails

ಬಿಹಾರ ಚುನಾವಣೆ: ಫಲಿತಾಂಶದ ಮೊದಲು ಲಾಲೂಗಿಲ್ಲ ಬಿಡುಗಡೆ ಭಾಗ್ಯ!

ಹೈಕೋರ್ಟ್ ವಿಚಾರಣೆಯಲ್ಲಿ, ವಾದ ಮಂಡಿಸಿದ ಲಾಲೂ ಪರ ವಕೀಲ ಕಪಿಲ್ ಸಿಬಲ್ ಸಿಬಿಐ ಜಾಮೀನು ಅರ್ಜಿಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿ

Read moreDetails

ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!

ತಮ್ಮ 69ನೇ ವಯಸ್ಸಿನಲ್ಲೇ ರಾಜಕೀಯ ನಿವೃತ್ತಿಯ ಮಾತನಾಡಿರುವ ನಿತೀಶ್ ಕುಮಾರ್ ಅವರ ಈ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸ ಒದಗಿಸಿದೆ.

Read moreDetails

ಬಿಹಾರ ಚುನಾವಣಾ ದಿಕ್ಕುದೆಸೆ ನಿರ್ಧರಿಸುತ್ತಿರುವ ಇಬ್ಬರು ಯುವ ನಾಯಕರು!

ಎರಡನೇ ತಲೆಮಾರಿನ ನಾಯಕರ ನಡುವೆ ಸಿಕ್ಕು ನಿತೀಶ್ ತರಗೆಲೆಯಾಗುವರೋ ಅಥವಾ ಇನ್ನಷ್ಟು ಬಲಿಷ್ಟ ಬೇರುಗಳನ್ನು ಚಾಚುವರೋ ಎಂಬುದನ್ನು ಕಾದುನೋಡಬೇಕು

Read moreDetails

ಬಿಹಾರ: ಮತ ಎಣಿಕೆಯಂದು ಲಾಲೂ ಪ್ರಸಾದ್ ಯಾದವ್‌ ಜಾಮೀನಿನ ಮೇಲೆ ಬಿಡುಗಡೆಯಾಗುವ ಸಾಧ್ಯತೆ

ನವೆಂಬರ್‌ 9 ರಂದು ಲಾಲೂ ಪ್ರಸಾದ್‌ ಯಾದವ್‌ರಿಗೆ ಜಾಮೀನಾಗುತ್ತದೆ, ನವೆಂಬರ್‌ 10 ರಂದು ನಿತೀಶ್‌ ಕುಮಾರ್‌ ಮನೆಗೆ ತೆರಳಬೇಕಾಗುತ್ತದೆ ಎಂದು

Read moreDetails

ಉದ್ಯೋಗ ಸೃಷ್ಟಿಯ ಭರವಸೆ ಮೂಲಕ ಬಯಲಾದ ಬಿಜೆಪಿಯ ನಿರ್ಲಜ್ಜ ಅಧಿಕಾರ ರಾಜಕಾರಣ

ಬಿಜೆಪಿ ಪ್ರಣಾಳಿಕೆಯು ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ ಮತ್ತು ಎಷ್ಟಾದರೂ ಸುಳ್ಳು ಭರವಸೆ ನೀಡಲು ಸಿದ್ದವಾಗಿದೆ

Read moreDetails

ಬಿಹಾರ ಚುನಾವಣಾ ಕಣದಲ್ಲಿ ‌ʼರಾವಣʼನ ಪ್ರವೇಶ: ದಲಿತ ರಾಜಕಾರಣದಲ್ಲಿ ಸಂಚಲನ

ಹಥ್ರಾಸ್‌ ಪ್ರಕರಣದ ಬಳಿಕ ಯೋಗಿಯ ʼಠಾಕೂರ್ʼ ಹಿನ್ನೆಲೆ ಬಿಜೆಪಿಯಿಂದ ದಲಿತರನ್ನು ವಿಮುಖಗೊಳಿಸಿದರೂ, ಅದರ ಪ್ರಯೋಜನವನ್ನು ಮಾಯಾವತಿಗಿಂತ ಹೆಚ

Read moreDetails

ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!

ಕರ್ನಾಟಕದ ಉಪಚುನಾವಣೆ ಎದುರಿಸುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ಕನ್ನಡಿಗರೆಲ್ಲರೂ ಮುಂದೊಂದು ದಿನ ವ್ಯಾಕ್ಸಿನ್ ಲಭ್ಯವಾದಾಗ

Read moreDetails

ಬಿಹಾರ ಚುನಾವಣೆ: ಬಿಜೆಪಿ ನಾಯಕರಿಗೆ ಮಗ್ಗುಲ ಮುಳ್ಳಾದ ಚಿರಾಗ್‌ ಪಾಸ್ವಾನ್‌

ಎಲ್‌ಜೆಪಿಯು ಈ ಬಾರಿ ಚುನಾವಣೆಯಲ್ಲಿ ಒಟ್ಟು 143 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಹೆಚ್ಚಿನ ಕಡೆಗಳಲ್ಲಿ ಜೆಡಿಯು ಅದರ ನಿಕಟ ಪ್ರತಿಸ್ಪರ್ಧಿ

Read moreDetails

ಬಿಹಾರದಲ್ಲಿ ಪಕ್ಷಾಂತರ ಪರ್ವ: ಬಿಜೆಪಿ ತೊರೆದ ಮೂವರು ಮುಖಂಡರು

ಇನ್ನೂ ಹಲವು ಬಿಜೆಪಿ ನಾಯಕರು ಎಲ್‌ಜೆಪಿ ಸೇರುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಎಂದು, ಎಲ್‌ಜೆಪಿ ವಕ್ತಾರ ಅಶ್ರಫ್‌ ಅನ್ಸಾರಿ ಹೇಳಿದ್ದಾರೆ.

Read moreDetails

ಬಿಹಾರ ಚುನಾವಣೆ: ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯ

ಜೆಡಿಯು ಮತ್ತು ಬಿಜೆಪಿ ಎಷ್ಟೇ ಆತ್ಮವಿಶ್ವಾಸದಿಂದ ಇದ್ದರೂ, ಎಲ್‌ಜೆಪಿಯು ಎನ್‌ಡಿಎದಿಂದ ಹೊರಗೆ ನಡೆದಿರುವುದು ಚುನಾವಣೆಯ ಫಲಿತಾಂಶದ ಮೇಲೆ

Read moreDetails

ಬಿಹಾರ ಚುನಾವಣೆ: NDA ಮೈತ್ರಿಕೂಟದಿಂದ ಹೊರನಡೆದ LJP ಏನು ಸಾಧಿಸಬಲ್ಲದು?

ಈಗಿನ ಪರಿಸ್ಥಿತಿಯಲ್ಲಿ, ಚಿರಾಗ್ ಪಾಸ್ವಾನ್ ಅವರ ಹೆಜ್ಜೆ ಖಂಡಿತವಾಗಿಯೂ ಬಿಜೆಪಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ರಾಜಕೀಯ ತಜ್ಞರು ಅಭಿಪ್

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!