ಈ ಹಿಂದೆ ಹಿಂದೂಗಳು (Hindus) ಅನ್ಯ ಧರ್ಮಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದ ವಾಗ್ಮಿ, ಹಿಂದೂವಾದಿ ಚಕ್ರವರ್ತಿ ಸುಲಿಬೆಲೆ (Chakravarty sulibele) ಇದೀಗ ಅಂಥದ್ದೇ ಮತ್ತೊಂದು ಹೇಳಿಕೆಯ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಹೌದು ಸದಾ ಹಿಂದೂ ಧರ್ಮದ ವಿಚಾರಕ್ಕೆ, ಒಂದಲ್ಲ ಒಂದು ಹೇಳಿಕೆಯ ಮೂಲಕ ಸುದ್ದಿಯಲ್ಲಿರುವ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ಮತ್ತೊಂದು ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಮಂಗಳೂರಿನ (Mangalore) ಉಜಿರೆಯ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸುಲಿಬೆಲೆ ಮತಾಂತರದ ಬಗ್ಗೆ ಮಾತನಾಡಿದ್ದಾರೆ.ಅನ್ಯ ಧರ್ಮದವರು ನಮಗೆ ಮತಾಂತರ ಆಗಬೇಕು ಅಂದರೆ, ನಮ್ಮ ಸಮಾಜ ಅವರನ್ನ ಪ್ರೀತಿಯಿಂದ ಸ್ವಾಗತಿಸಿ ಎಂದಿದ್ದಾರೆ.

ಅನ್ಯ ಧರ್ಮೀಯರನ್ನು ನಮ್ಮ ಧರ್ಮಕ್ಕೆ ಬನ್ನಿ ಎಂದು ಕರೆಯಿರಿ ಎಂದು ಹೇಳುವ ಮೂಲಕ ಹಿಂದೂಗಳು ಅನ್ಯಧರ್ಮೀಯರನ್ನು ಮತಾಂತರ ಮಾಡುವಂತೆ ಬಹಿರಂಗ ಕರೆ ಕೊಟ್ಟಿದ್ದಾರೆ. ಅವರ ಈ ಹೇಳಿಕೆ ಈಗ ಹಿಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.