ಮಂಗಳೂರು :ಯುತ್ ಕಾಂಗ್ರೆಸ್ ಸಮಯದಿಂದಲೂ ನಾನು ಇಲ್ಲಿಗೆ ಬಂದಿದ್ದೇನೆ, ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನರ ನಾಡಿಮಿಡಿತ ಸ್ವಲ್ಪ ನನಗೂ ಗೊತ್ತಿದೆ. ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಭಂಗ ತರುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದ ಅವರು, ಬೆಂಕಿ ಹಚ್ಚುವ ಕೆಲಸ ಮಾಡೋದು ಸುಲಭ ಆದರೆ ಅದನ್ನ ಆರಿಸೋದು ಕಷ್ಟ, ಹೀಗಾಗಿ ಅಧಿಕಾರಿಗಳು ಚುರುಕಾಗಿ ಇರಬೇಕು. ಇಲ್ಲಿ ಪ್ರತಿಯೊಬ್ಬರೂ ಯಾವುದೇ ಜಾತಿ , ಧರ್ಮ ತಾರತಮ್ಯ ಇಲ್ಲದೆಯೇ ಬದುಕಬೇಕು ಎಂದು ಹೇಳಿದರು.
![](https://pratidhvani.com/wp-content/uploads/2023/06/DINESH-GUNDURAO-1200x720-2.jpg)
ಅಲ್ಲದೇ ಗೃಹಸಚಿವರು ಈಗಾಗಲೇ ದಕ್ಷಿಣ ಕನ್ನಡದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡೋದ್ರ ಬಗ್ಗೆ ಹೇಳಿದ್ದಾರೆ. ಆದರೆ ಇದು ದ್ವೇಷ ಸಾಧಿಸುವ ವಿಂಗ್ ಆಗಬಾರದು. ಪಕ್ಷ ಬೇಧವಿಲ್ಲದೇ ಬದುಕಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.