Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸುದೀಪ್ ಸಿನಿಮಾ, ರಿಯಾಲಿಟಿ ಶೋ ಪ್ರಸಾರ-ಮರುಪ್ರಸಾರಕ್ಕೆ ತಡೆ ನೀಡಿ : ವಕೀಲ ದೂರು

ಪ್ರತಿಧ್ವನಿ

ಪ್ರತಿಧ್ವನಿ

April 6, 2023
Share on FacebookShare on Twitter

ಶಿವಮೊಗ್ಗ: ಏ.೦6: ನೀತಿ ಸಂಹಿತೆ ಅಂಶಗಳನ್ನ ಆಧಾರವಾಗಿಟ್ಟುಕೊಂಡು ಕಿಚ್ಚ ಸುದೀಪ್ ಸಿನಿಮಾ, ಜಾಹೀರಾತು, ರಿಯಾಲಿಟಿ ಶೋ ಪ್ರಸಾರ ನಿಲ್ಲಿಸಲು ಶಿವಮೊಗ್ಗ ಖ್ಯಾತ ವಕೀಲ ಶ್ರೀಪಾಲ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅವರಿಗೆ ಸ್ಪಂದನೆ ಸಿಕ್ಕಿದ್ದು ಮುಖ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲು ಕೋರಲಾಗಿದ್ದು ವಕೀಲರ ದೂರು ಸುದೀಪ್ ಗೆ ಕಂಟಕಪ್ರಾಯವಾಗಲಿದೆ ಎನ್ನಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಸ್ವಾತಂತ್ರ್ಯ ದೊರೆತು 76 ವರ್ಷಗಳಾದರೂ ಅನೇಕ ಜಾತಿಗಳು ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು ಸುತ್ತಮುತ್ತ “ಭಗೀರಥ” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂಸಾಚಾರ: 60 ಮಂದಿ ಬಂಧನ

ವಕೀಲ ಶ್ರೀಪಾಲ್ ಮಾತನಾಡಿ, ಮೇ 10ನೇ ತಾರೀಕು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮೊದಲೇ ಸಾಕಷ್ಟು ಚುನಾವಣೆ ತಯಾರಿಗಳು ನಡೆದಿದೆ. ಬಹಳ ಮುಖ್ಯವಾಗಿ ನಟ ನಟಿಯರನ್ನು ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಯಾವುದೇ ಒಂದು ಪಕ್ಷ ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ಪ್ರಚಾರ ಮಾಡಬೇಕಾದರೆ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಪಾಲಿಸಬೇಕು. ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಖ್ಯಾತ ನಟರಾದಂತಹ ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದಲ್ಲದೆ ಸಿಎಂ ಬಸವರಾಜ್ ಬೊಮ್ಮಾಯಿ ಪರ ಪ್ರಚಾರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಮಾಧ್ಯಮಗಳಲ್ಲೂ ಕೂಡ ಈಗಾಗಲೇ ಪ್ರಸಾರವಾಗಿದೆ. ಜನರನ್ನ ತಲುಪಿದೆ‌.

ಅವರ ಕೋಟ್ಯಾಂತರ ಅಭಿಮಾನಿಗಳಿರುವುದರಿಂದ ಚುನಾವಣಾ ನೀತಿ ಸಮಿತಿಯು ಜಾರಿಯಲ್ಲಿರುವದರಿಂದ ಇದು ಚುನಾವಣಾ ಆಯೋಗ ನೀಡಿರುವಂತಹ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಅವರ ತೀರ್ಮಾನ ಅವರಿಗೆ ಬಿಟ್ಟಿದ್ದು, ವೈಯಕ್ತಿಕವಾದದ್ದು. ಅದನ್ನು ನಾವು ಪ್ರಶ್ನೆ ಮಾಡುವುದಿಲ್ಲ. ಆದರೆ ಅವರ ಚಲನಚಿತ್ರಗಳನ್ನ ಪ್ರಸಾರ ಮಾಡುವುದು ಚಿತ್ರಮಂದಿರಗಳಲ್ಲಿ ಅವರ ಸಿನಿಮಾ ಪ್ರಸಾರವಾಗುವುದು ಅಥವಾ ಟಿವಿಯಲ್ಲಿ ಅವರ ಹಳೆ ಸಿನಿಮಾಗಳನ್ನು ತೋರಿಸುವುದು ಅವರು ಈಗಾಗಲೇ ಮಾಡಿರುವ ರಿಯಾಲಿಟಿ ಶೋಗಳ ರೀ ಟೆಲಿಕಾಸ್ಟಿಂಗ್ ಮಾಡುವುದನ್ನು ನಿರ್ಬಂಧಿಸಬೇಕು. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ. ಈ ದೂರನ್ನ ಪರಿಗಣಿಸಿ ನನಗೆ ಮರು ಇ-ಮೇಲ್ ಸಂದೇಶ ರವಾನೆ ಮಾಡಿದ್ದಾರೆ. ನನ್ನ ದೂರನ್ನು ಮುಖ್ಯ ಚುನಾವಣಾ ಅಧಿಕಾರಿಗೆ ಕಳುಹಿಸಲು ಕೂಡ ಸೂಚಿಸಿದ್ದಾರೆ. ಈಗಾಗಲೇ ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿಗೂ ಕೂಡ ನಾನು ನೀಡಿದ್ದೇನೆ. ಇದನ್ನ ನಾನು ಫಾಲೋ ಮಾಡುತ್ತೇನೆ. ಸಾಮಾನ್ಯ ಜನರಿಗೆ ಚುನಾವಣಾ ಸಮಿತಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗುತ್ತೋ ಅಷ್ಟೇ ಪರಿಣಾಮಕಾರಿಯಾಗಿ ನಟನಿಗೂ ಆಗಬೇಕು.

ಉದಾಹರಣೆ ಶಿವಮೊಗ್ಗದಲ್ಲಿ ಮಾಜಿ ಪಿಎಂಎಸ್ ಬಂಗಾರಪ್ಪ ಅವರ ಪ್ರತಿಮೆಯನ್ನು ಮುಚ್ಚಿದ್ದಾರೆ. ಜನರಿಗೆ ಅವರ ಮುಖ ಕಾಣಬಾರದು ನೀತಿ ಸಂಹಿತೆ ವಿರುದ್ಧವಾಗಿದೆ ಎಂದು ಕ್ರಮ ಕೈಗೊಳ್ಳಲಾಗಿದೆ. ಯಾಕೆಂದರೆ ಬಂಗಾರಪ್ಪನವರಿಗೂ ಕೂಡ ಅಭಿಮಾನಿಗಳಿದ್ದರೂ ಇಷ್ಟೇ ಪ್ರಮಾಣದ ಇದಕ್ಕೂ ಹೆಚ್ಚಿಗೆ ಅಭಿಮಾನಿಗಳನ್ನ ಸಂಪಾದಿಸಬಹುದಾದಂತಹ ಒಬ್ಬ ನಟ ಸುದೀಪ್ ಗೆ ಈ ನಿಯಮಗಳು ಯಾಕೆ ಜಾರಿಯಾಗಬಾರದು..? ಆತ ಈಗ ಒಂದು ಪಕ್ಷದ ಪರ ಪ್ರಚಾರಕ್ಕೆ ನಿಂತಿದ್ದಾರೆ ಹೆಚ್ಚು ಜಾಹಿರಾತುಗಳನ್ನು ಮಾಡಿದ್ದಾರೆ. ಇವುಗಳನ್ನೆಲ್ಲ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಶ್ರೀಪಾಲ್ ಹೇಳಿದರು. ಹಾಗೆ ತಮಗೆ ಬಂದ ಇ-ಮೇಲ್ ಸಂದೇಶವನ್ನು ತೋರಿಸಿ ತಾವು ತಾರ್ಕಿಕ ಅಂತ್ಯ ಕಾಣುವವರೆಗೆ ಇದನ್ನ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

RS 500
RS 1500

SCAN HERE

Pratidhvani Youtube

«
Prev
1
/
5600
Next
»
loading
play
Jaipur’s ‘Money Heist’ moment as mask man throws notes in air Ascene #latestnews #viral #viralshorts
play
Shivaraj Tangadagi :ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಯವರಿಗೆ ಹಿಂದೂಗಳು ನೆನಪಾಗ್ತಾರಾ?
«
Prev
1
/
5600
Next
»
loading

don't miss it !

ನಮಗಿಂತ ದೊಡ್ಡ ಧ್ವಜ ಹಾರಿಸಿದ್ರೆ ಬಹಳ ದೊಡ್ಡವರಾದ್ರಾ? ಹಾವೇರಿಯಲ್ಲಿ ಯತ್ನಾಳ್‌ ಪ್ರಶ್ನೆ
Top Story

ನಮಗಿಂತ ದೊಡ್ಡ ಧ್ವಜ ಹಾರಿಸಿದ್ರೆ ಬಹಳ ದೊಡ್ಡವರಾದ್ರಾ? ಹಾವೇರಿಯಲ್ಲಿ ಯತ್ನಾಳ್‌ ಪ್ರಶ್ನೆ

by ಪ್ರತಿಧ್ವನಿ
September 28, 2023
ಡಿಸೆಂಬರ್ 22ಕ್ಕೆ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ ಹೊಂಬಾಳೆ ಫಿಲಂಸ್‍ನ ‘ಸಲಾರ್’
Top Story

ಡಿಸೆಂಬರ್ 22ಕ್ಕೆ ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ ಹೊಂಬಾಳೆ ಫಿಲಂಸ್‍ನ ‘ಸಲಾರ್’

by ಪ್ರತಿಧ್ವನಿ
September 29, 2023
ಚರಿತ್ರೆ ಮತ್ತು ವರ್ತಮಾನಕ್ಕೆ ಸೇತುವೆಯಾಗಿ ಭಗತ್‌ ಸಿಂಗ್
ಅಂಕಣ

ಚರಿತ್ರೆ ಮತ್ತು ವರ್ತಮಾನಕ್ಕೆ ಸೇತುವೆಯಾಗಿ ಭಗತ್‌ ಸಿಂಗ್

by ನಾ ದಿವಾಕರ
September 28, 2023
ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್
Top Story

ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್

by ಪ್ರತಿಧ್ವನಿ
October 1, 2023
ನಿಜಗುಣಾನಂದ ಸ್ವಾಮೀಜಿ ಸೇರಿದಂತೆ 3 ಸಚಿವರಿಗೆ ಜೀವ ಬೆದರಿಕೆ; ಪತ್ರದಲ್ಲಿ ಏನಿತ್ತು ಗೊತ್ತಾ..?
Top Story

ನಿಜಗುಣಾನಂದ ಸ್ವಾಮೀಜಿ ಸೇರಿದಂತೆ 3 ಸಚಿವರಿಗೆ ಜೀವ ಬೆದರಿಕೆ; ಪತ್ರದಲ್ಲಿ ಏನಿತ್ತು ಗೊತ್ತಾ..?

by ಪ್ರತಿಧ್ವನಿ
September 30, 2023
Next Post
ಹಯವದನರಾಯರ ಹಿಂದೂ ಧರ್ಮ ಪ್ರೇಮ

ಹಯವದನರಾಯರ ಹಿಂದೂ ಧರ್ಮ ಪ್ರೇಮ

ದರ್ಶನ್ ಧ್ರುವನಾರಾಯಣ್‌ಗೆ ಒಂದು ಲಕ್ಷ ರೂ. ದೇಣಿಗೆ  ಕೊಟ್ಟ ಬೆಂಬಲಿಗರು

ದರ್ಶನ್ ಧ್ರುವನಾರಾಯಣ್‌ಗೆ ಒಂದು ಲಕ್ಷ ರೂ. ದೇಣಿಗೆ ಕೊಟ್ಟ ಬೆಂಬಲಿಗರು

ಬಿಜೆಪಿ ಕಚೇರಿ ಬಳಿಯೇ ನೂತನ ಕಚೇರಿ ತೆಗೆದ ಬಿಜೆಪಿ ಮುಖಂಡ ಆಯನೂರು ಮಂಜುನಾಥ್

ಬಿಜೆಪಿ ಕಚೇರಿ ಬಳಿಯೇ ನೂತನ ಕಚೇರಿ ತೆಗೆದ ಬಿಜೆಪಿ ಮುಖಂಡ ಆಯನೂರು ಮಂಜುನಾಥ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist