ಇತ್ತೀಚೆಗಷ್ಟೇ ರಾಷ್ಟ್ರಕವಿ ಕುವೆಂಪು ಅವರ ಘೋಷವಾಕ್ಯ ಬದಲಿಸಿದ ಆರೋಪಕ್ಕೆ ಸಿಲುಕುವ ಮೂಲಕ ಮುಜುಗರಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ರಾಜ್ಯದ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಇದೀಗ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ. ರಾಜ್ಯ ಸರ್ಕಾರದ ಈ ಆದೇಶವನ್ನು ಖಂಡಿಸಿರುವ ರಾಜ್ಯ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಕುರಿತು ಪಕ್ಷದ ಅಧಿಕೃತ ʻಎಕ್ಸ್ʼ ಖಾತೆಯಲ್ಲಿ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿದೆ.
![](https://pratidhvani.com/wp-content/uploads/2024/02/11-2-jpg.webp)
ಕರ್ನಾಟಕ ಮತ್ತು ಕನ್ನಡದ ಆಸ್ಮಿತೆಯನ್ನೇ ಅಳಿಸಿ ಹಾಕಲು ಅವಿವೇಕಿ INC Karnataka ಸರ್ಕಾರ ಜಿದ್ದಿಗೆ ಬಿದ್ದಿದೆ. ಮೊನ್ನೆಯಷ್ಟೇ ರಾಷ್ಟ್ರಕವಿ ಕುವೆಂಪು ಅವರ ಘೋಷ ವಾಕ್ಯವನ್ನೇ ಬದಲಾಯಿಸಿ ಸಮಸ್ತ ಕನ್ನಡಿಗರಿಗೆ ಅವಮಾನ ಮಾಡಿತ್ತು. ಇದೀಗ ರಾಜ್ಯದಲ್ಲಿ ಶೇಕಾಡ 90 ಖಾಸಗಿ ಶಾಲೆಗಳನ್ನು ನಡೆಸುತ್ತಿರುವ ಮಿಷನರಿಗಳಿಗೆ ಮಣಿದು ನಾಡ ಗೀತೆಯನ್ನೇ ಐಚ್ಛಿಕಗೊಳಿಸಿ ಆದೇಶಿಸಿದೆ. ಡೋಂಗಿ ಕನ್ನಡ ಪ್ರೇಮಿ Siddaramaiah ಸರ್ಕಾರ ವಿಶ್ವ ಮಾತೃಭಾಷಾ ದಿನದಂದೇ ಕನ್ನಡವನ್ನು ಕೊಲೆ ಮಾಡಲು ಇಂತಹದೊಂದು ಫತ್ವಾ ಹೊರಡಿಸಿದೆ. ನಾಚಿಕೆ ಮಾನ ಮಾರ್ಯದೆ ಎನ್ನುವುದು ಏನಾದರೂ ಇದ್ದರೆ, ನಾಡಿನ ಅನ್ನ ತಿನ್ನುತ್ತಿರುವ ನಿಯತ್ತಿದ್ದರೆ ಕೂಡಲೇ ಈ ಆದೇಶವನ್ನು ಹಿಂಪಡೆದು ಎಲ್ಲಾ ಶಾಲೆಗಳಲ್ಲೂ ನಾಡಗೀತೆ ಜತೆಗೆ ರಾಷ್ಟ್ರಗೀತೆಯನ್ನು ಕಡ್ಡಾಯವೆಂದು ಆದೇಶಿಸಬೇಕು. ಇಲ್ಲದೆ ಹೋದರೆ, ಕನ್ನಡ ವಿರೋಧಿ, ಕುವೆಂಪು ವಿರೋಧಿ, ನಾಡ ವಿರೋಧಿ ಮಜಾವಾದಿ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಚಳಿ ಬಿಡಿಸುವುದು ನಿಶ್ಚಿತ! ಎಂದು KannadaVirodhiSiddaramaiah NaadaVirodhiCongress ಎಂಬ ಹ್ಯಾಶ್ಟ್ಯಾಗ್ ಬಳಸಿ ವಿರೋಧ ವ್ಯಕ್ತಪಡಿಸಿದೆ.
![](https://pratidhvani.com/wp-content/uploads/2024/02/BJP-2.png)
#Siddaramaiah #Congress #Kuvempu #Naadageethe #BJPKarnataka