ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬಿಜೆಪಿ (BJP), ಜೆಡಿಎಸ್(JDS) ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ( congress ) ವಿರುದ್ಧ ಸೆಣಸಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ನ ನಾಯಕರು ಯಾವುದೇ ರೀತಿಯಾದ ಸ್ಪಷ್ಟನೆ ನೀಡ್ತಾ ಇಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆಗಳನ್ನ ಕೇಳಿದಾಗಲೂ ಈ ಎರಡೂ ಪಕ್ಷದ ನಾಯಕರು ಯಾವುದೇ ಸ್ಪಷ್ಟನೆಯನ್ನ ಸರಿಯಾಗಿ ನೀಡುತ್ತಿಲ್ಲ.
ಇನ್ನು ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಂಸದ ಶಿವರಾಮೇಗೌಡ( L. R. Shivarame Gowda ) ಅವರು ಮಾತನಾಡಿದ್ದು ಪರೋಕ್ಷವಾಗಿ ಈ ಹೊಂದಾಣಿಕೆಯ ಬಗ್ಗೆ ಹಾಗೂ ಜೆಡಿಎಸ್ ಬಗ್ಗೆ ಆಕ್ರೋಶವನ್ನ ಹೊರ ಹಾಕಿದ್ದಾರೆ. ಹೌದು ಜರನ್ನ ಉದ್ದೇಶಿಸಿ ಮಾತನಾಡುತ್ತಿದ್ದ ಶಿವರಾಮೇಗೌಡ ಅವರು, “ ಮುಂದಿನ ದಿನಗಳಲ್ಲಿ ಬಿಜೆಪಿಯ ಜೊತೆ ಯಾರೇ ಹೊಂದಾಣಿಕೆಗೆ ಬಂದ್ರೂ ಕೂಡ ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು” ಎಂಬ ಹೇಳಿಕೆಯನ್ನ ನೀಡುವ ಮೂಲಕ ಜೆಡಿಎಸ್ ವಿರುದ್ಧ ಆಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ.
ಇದರ ಜೊತೆಗೆ ಬಿಜೆಪಿಯ ನಾಯಕರನ್ನ ಕೂಡ ಟೀಕೆ ಮಾಡಿದ ಅವರು, ಈ ಬಾರಿ ಬಿಜೆಪಿ ಹೀನಾಯವಾಗಿ ಸೊಲೋದಕ್ಕೆ ನಾಯಕರ ಅಸಮರ್ಥ ನಿರ್ಧಾರಗಳು ಕಾರಣ ಎಂಬ ಅರ್ಥದಲ್ಲಿ ಮಾತನಾಡಿದ್ದು, ಬಿಜೆಪಿಯ ಒಳಗೆ ಶಿವರಾಮೇಗೌಡರ ಮಾತಿಗೆ ಅಸಮಧಾನಗಳು ಕೂಡ ಹೆಚ್ಚಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಶಿವರಾಮೇ ಗೌಡ ಅವರ ನಡೆ ಏನು ಎಂಬ ಕುತೂಹಲ ಕೂಡ ಇದೀಗ ಸಾರ್ವಜನಿಕರ ಮನಸ್ಸಿನಲ್ಲಿ ಮೂಡೋದಕ್ಕೆ ಶುರುವಾಗಿದೆ.