ಅಬ್ಬಬ್ಬಾ.. ಎಲ್ಲೆಲ್ಲೂ ಬೇಸಿಗೆಯ(Summer) ಉರಿ ಬಿಸಿಲು ವಿಪರೀತ ಆಗಿದೆ. ಭಯಂಕರ ಶೆಖೆ, ದಿನದಿಂದ ದಿನಕ್ಕೆ ಸೂರ್ಯನ ಶಾಖ ಜಾಸ್ತಿ ಆಗುತ್ತಾ ಹೋಗುತ್ತಿದೆ. ಕೆಲವು ಕಡೆಗಳಲ್ಲಿ ಬಿಸಿಲಿನ ಬೇಗೆ, ಧಗೆ ಏರುತ್ತಿದ್ದು, ಸೆಖೆಯ ಹೊಡೆತಕ್ಕೆ ಜನ ಸುಸ್ತಾಗಿ ಬಿಟ್ಟಿದ್ದಾರೆ.
![](https://pratidhvani.com/wp-content/uploads/2024/03/vijaykarnataka-1024x768.jpg)
ಅದರಲ್ಲೂ ಮಧ್ಯಾಹ್ನದ(Afternoon) ಸಮಯದಲ್ಲಿ ಕಂಡುಬರುವ ಅತಿಯಾದ ಬಿಸಿಲಿನಿಂದಾಗಿ ತಾಪಮಾನ ಏರುತ್ತಿದ್ದು, ಜನರು ಮನೆಯಿಂದ ಹೊರಬೀಳಲು ಹಿಂದೆ ಮುಂದೆ ನೋಡುವಂತಾಗಿದೆ. ಅತಿಯಾದ ಬಾಯಾರಿಕೆಯ ಜೊತೆಗೆ ಮೈಯಿಂದ ಬೆವರುವಿಕೆಯ ಸಮಸ್ಯೆ ಕೂಡ ಹೆಚ್ಚಾಗಿದೆ. ಕೆಲವೊಮ್ಮೆ ಇದೇ ಬೆವರುವಿಕೆ ಸಮಸ್ಯೆ, ದೇಹದ ಕೆಲವು ವಿಷಕಾರಿ ಅಂಶಗಳ ಜೊತೆಗೆ ಹೊರಗಿನ ಧೂಳು ಮತ್ತು ಕೊಳೆ ಸೇರಿ ಕೊಂಡು ಸೆಖೆ ಗುಳ್ಳೆಗಳು ಅಥವಾ ಬಿಸಿ ಗುಳ್ಳೆಗಳು ಉಂಟಾಗಲು ಪ್ರಾರಂಭವಾಗುತ್ತದೆ. ಸೆಖೆಯಿಂದ ಪಾರಾಗಲು ಪ್ರತಿಯೊಬ್ಬರು ಅನುಸರಿಸಲೇಬೇಕಾದ ಟಿಪ್ಸ್ಗಳೇನು(Tips) ಒಮ್ಮೆ ನೋಡಿ.
ದೇಹ ಡಿಹೈಡ್ರೇಟ್ ಆಗದ ರೀತಿ ನೋಡಿಕೊಳ್ಳಿ..
ಬಿಸಿಲು ಹೆಚ್ಚಾಗ್ತಿದ್ದಂತೆ ಹೃದಯಾಘಾತ ಹಾಗೂ ಸ್ಟ್ರೋಕ್ ಆಗುವ ಸಂಭವ ಹೆಚ್ಚು. ಹೀಗಾಗಿ ಎಲ್ಲರೂ ಪ್ರತಿನಿತ್ಯ 2.5 ಲೀಟರ್ ನೀರನ್ನ(Water) ಕುಡಿಯಲೇ ಬೇಕು. ಜೊತೆಗೆ ಹೆಚ್ಚಾಗಿ ಧ್ರವಾಹಾರ ಸೇವಿಸಿ ದೇಹ ಡಿಹೈಡ್ರೇಟ್ ಆಗದೇ ಇರೋ ರೀತಿ ನೋಡಿಕೊಳ್ಳಬೇಕು. ಇದ್ರಿಂದ ಆರೋಗ್ಯ ಸಮಸ್ಯೆ ಉದ್ಭವಿಸಲ್ಲ.
![](https://pratidhvani.com/wp-content/uploads/2024/03/summer34-2-15526440297-1614670605-1621335594.jpg)
ಹೊರಹೋಗುವಾಗ ಎಚ್ಚರ ಅಗತ್ಯ: ಸರಾಸರಿ ಬಿಸಿಲಿನ ತಾಪಮಾನ 35 ಡಿಗ್ರಿ(Degree) ಇದೆ. ಬಿಸಿಲಿನ ಧಗೆ ನೇರ ನೆತ್ತಿ ಮೇಲೆ ಬಿದ್ದರೆ ಸಾಕಷ್ಟು ತೊಂದರೆ ಆಗುತ್ತೆ. ಹೀಗಾಗಿ ಹೊರಹೋಗುವಾಗ ಟೊಪ್ಪಿ(Cap) ಹಾಗೂ ಕೊಡೆ ಬಳಸಿದ್ರೆ ಉತ್ತಮ. ಆದಷ್ಟು ತೆಳುವಿನ ಬಟ್ಟೆ ಬಳಸಿ ಹೊರಹೋದ್ರೆ ಒಳ್ಳೇದು.
![](https://pratidhvani.com/wp-content/uploads/2024/03/83410242.cms_-1024x768.webp)
ಹಣ್ಣುಗಳ ಸೇವನೆ ಒಳ್ಳೇದು..: ಹೆಚ್ಚಾಗಿ ನೀರಿನ ಅಂಶವಿರೋ ನಿಂಬೆಹಣ್ಣು, ಕಲ್ಲಂಗಡಿಹಣ್ಣು ಸೇವಿಸಿದ್ರೆ ಒಳ್ಳೇದು. ಇದರ ಜೊತೆಗೆ ರಾಗಿಗಂಜಿ, ಸಜ್ಜಿಗೆ ಎಂತಹ ಹಗು ಪದಾರ್ಥಗಳ ಹೆಚ್ಚಿನ ಸೇವನೆ ಹೊಟ್ಟೆಗೆ ಬಿದ್ರೆ ಆರೋಗ್ಯ ಚೆನ್ನಾಗಿರತ್ತೆ. ಗಟ್ಟಿ ಆಹಾರ ಸೇವನೆ ಜೀರ್ಣ ಕ್ರಿಯೆಗೆ ಕಷ್ಟ ಹೀಗಾಗಿ ಲಘು ಆಹಾರ ಸೇವಿಸಿದ್ರೆ ಆರಾಮಾಗಿರಬಹುದು.
![](https://pratidhvani.com/wp-content/uploads/2024/03/22-1419241162-14watermelon.jpg)
ಮಕ್ಕಳ ಬಗ್ಗೆ ಇರಲಿ ಕಾಳಜಿ: ಬೇಸಿಗೆಯಲ್ಲಿ ಶಿಶುಗಳ(Kids) ಪಾಲನೆ ಪ್ರಮುಖ ವಿಚಾರ. ಸೂರ್ಯನ ಶಾಖಕ್ಕೆ ಚರ್ಮಬಾಧೆ ಲಕ್ಷಣ ಗೋಚರಿಸುತ್ತೆ. ಈ ಬಗ್ಗೆ ಪೋಷಕರು ಹೆಚ್ಚು ನಿಗಾ ವಹಿಸಬೇಕು. ಮಕ್ಕಳಿಗೆ ಒಳ್ಳೆಯ ಗಾಳಿ ಸಿಗುವ ರೀತಿ ನೋಡಿಕೊಳ್ಳಬೇಕು. ಆದಷ್ಟು ತಂಪು ಬಟ್ಟೆಗಳನ್ನ ಕಿಟಕಿಗೆ ನೇತು ಹಾಕಬೇಕು. ಗ್ರಾಮೀಣ ಭಾಗದ ಜನ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರೋದ್ರಿಂದ ಕೊಳಚೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.
![](https://pratidhvani.com/wp-content/uploads/2024/03/sun-and-child2-270x300-1.jpg)
ಒಟ್ನಲ್ಲಿ ಮೇ(May) ಅಂತ್ಯದವರೆಗೂ ಬೇಸಿಗೆ ಇರಲಿದ್ದು, ಉಡಾಫೆ ಮನೋಭಾವ ತೋರದೇ ಜನರು ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಿ ಜಾಗೃತೆಯಾಗಿ ಇರಬೇಕು.
#Summer #SunBurn #Heat #Water #Childrens #Karnataka