ಬಿಜೆಪಿ(Bjp) ಸದಸ್ಯತ್ವವನ್ನೂ ಹೊಂದಿರದ ಡಾ.ಮಂಜುನಾಥ್ರಿಗೆ(Dr manjunath) ಟಿಕೆಟ್ ನೀಡಿರೋ ವಿಚಾರವಾಗಿ ಸಂಸದ ಡಿಕೆ ಸುರೇಶ್ (Dk suresh) ಪ್ರತಿಕ್ರಿಯೆ ನೀಡಿದ್ದಾರೆ. ದೇವೇಗೌಡರ (Devegowda)ಕುಟುಂಬದವರ ವಿರುದ್ಧ ಸ್ಪರ್ಧೆ ಮಾಡೋದು ನನಗೆ ಹಾಗೂ ನನ್ನ ಸಹೋದರ ಡಿಕೆ ಶಿವಕುಮಾರ್ಗೆ (Dk shivakumar)ಹೊಸದೇನಲ್ಲ. ಈ ಕ್ಷೇತ್ರದಲ್ಲಿ ಮತ್ತು ಈ ರಾಜ್ಯದಲ್ಲಿ ದೇವೇಗೌಡರ ಪಕ್ಷ ಜೆಡಿಎಸ್ (jds)ಜನಪ್ರೀಯತೆ ಕಳೆದುಕೊಂಡಿದೆ ಎಂಬುದನ್ನ ಅವರ ಅಳಿಯ ತೋರ್ಪಡಿಸಿದ್ದಾರೆ.. ಹಾಗಾಗೀ ಅವರು ಬೇರೆ ಪಕ್ಷ ಆಯ್ಕೆ ಮಾಡಿಕೊಂಡಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ.
![](https://pratidhvani.com/wp-content/uploads/2024/03/IMG_5800-1.jpeg)
ಚನ್ನಪಟ್ಟಣದ(chennapattana) ತಿಟ್ಟಮಾರನಹಳ್ಳಿಯಲ್ಲಿ ಸಂಸದ ಡಿ.ಕೆ.ಸುರೇಶ್ (dk suresh) ಈ ಬಗ್ಗೆ ಮಾತನಾಡಿದ್ರು. ನಾನು ಅವರ ಸ್ಪರ್ಧೆಯನ್ನ ಸ್ವಾಗತ ಮಾಡ್ತೇನೆ.ಡಾ.ಮಂಜುನಾಥ್ ಬಿಜೆಪಿಯಿಂದ(bjp) ಸ್ಪರ್ಧೆ ಮಾಡ್ತಿರುವ ಬಗ್ಗೆ ಬೆಂಗಳೂರು ಗ್ರಾಮಾಂತ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಯೋಚನೆ ಮಾಡಬೇಕಿದೆ ಎಂದು ಜೆಡಿಎಸ್(jds) ಕಾಲೆಳೆದ ಅವರು ಹೆಚಚ್ಡಿಡಿ (HDD) ಫ್ಯಾಮಿಲಿಗೆ ಟಾಂಗ್ ಕೊಟ್ರು.
![](https://pratidhvani.com/wp-content/uploads/2024/03/IMG_5796-1.jpeg)
ಇನ್ನು ಬಾಕಿ ಕ್ಷೇತ್ರಗಳ ಮಾತನಾಡಿದ ಡಿ.ಕೆಸುರೇಶ್ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಮೊದಲು ಅರ್ಜಿ ಹಾಕಲಿ ಆಮೇಲೆ ಮಾತನಾಡ್ತೀನಿ ಅಂದ್ರೆ, ಇನ್ನು ಬಿಜೆಪಿಯಲ್ಲಿ ಪ್ರತಾಪ್ ಸಿಂಹಗೆ(prathap simha) ಕೈಕೊಟ್ಟಿದ್ದಾರೆ, ಬಿಜೆಪಿ(bjp) ಪಕ್ಷ ಕಟ್ಟಿದ ಕಟೀಲ್ ರನ್ನ ಏನ್ ಮಾಡಿದ್ದಾರೋ ಗೊತ್ತಿಲ್ಲ.! ನನಗೆ ಗುಂಡಿಕ್ಕಿ ಕೊಲ್ತೀವಿ ಅಂದೋರು ಬಂಡಾಯ ಎನ್ನುತ್ತಿದ್ದಾರೆ, ಅವರ ಪುತ್ರನಿಗೂ ಟಿಕೆಟ್ ಸಿಕ್ಕಿಲ್ಲ ಎಂದು ಈಶ್ವರಪ್ಪನವರ (eshwarappa) ಬಗ್ಗೆಯೂ, ಸಂವಿಧಾನ ಬದಲಾವಣೆ ಮಾಡಲು ಹೋದವರ ಕಥೆ ಏನಾಗುತ್ತೋ ಗೊತ್ತಿಲ್ಲ ಎಂದು ಅನಂತ್ ಕುಮಾರ್ ಹೆಗ್ಡೆ (anant kumar hegde) ಬಗ್ಗೆಯೂ ಪರೋಕ್ಷವಾಗಿ ಡಿ.ಕೆ.ಸುರೇಶ್ (dk suresh) ಟೀಕಿಸಿದ್ದಾರೆ.