ಕಳೆದ ಕೆಲವು ವಾರಗಳಿಂದ ಗರಿಗೆದರಿದ ಸಿಎಂ ಬದಲಾವಣೆ ಚರ್ಚೆಗೆ ತಾತ್ವಿಕ ಅಂತ್ಯ ಬಂದಿದೆ. ನಿರೀಕ್ಷೆಯಂತೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ಧಾರೆ . ಬಿಎಸ್ವೈ ಅವರ ರಾಜಿನಾಮೆ ಬೆನ್ನಲ್ಲೆ ಶಿಕಾರಿಪುರದಲ್ಲಿ ಆಕ್ರೋಶ ಭುಗಿಲೆದ್ದಿದೆ. ರಾಜೀನಾಮೆ ಸುದ್ದಿ ಕೇಳುತ್ತಲೇ ಶಿಕಾರಿಪುರದ ಹೃದಯಭಾಗದಲ್ಲಿ ಬೀದಿಗಿಳಿದ ಬಿಎಸ್ವೈ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಹೊಸ ಸಿಎಂ ಘೋಷಣೆಗೆ ಬಿಜೆಪಿ ವರಿಷ್ಠರ ಮೀನಾಮೇಷ ಏಕೆ?
ಬಿಜೆಪಿ ಇನ್ನು ಸರ್ವನಾಶ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಕಾರ್ಯಕರ್ತರು ಸೈಕಲ್ನಲ್ಲಿ ಓಡಾಡಿ ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ. ನಿಮಗೆ ತಾಕತ್ತಿದ್ದರೆ, ನಿಮ್ಮ ಆಸ್ತಿಯನ್ನೆಲ್ಲಾ ಹಾಕಿ ಪಕ್ಷ ಕಟ್ಟಿ ತೋರಿಸಿ ಎಂದು ಬಿಎಸ್ವೈ ವಿರೋಧಿ ನಾಯಕರಿಗೆ ಸವಾಲು ಹಾಕಿದ್ದಾರೆ. ಇದು ಯಡಿಯೂರಪ್ಪರಿಗೆ ಮಾಡಿದ ಅನ್ಯಾಯ ಮಾತ್ರವಲ್ಲ, ಜನಸಾಮಾನ್ಯರಿಗೆ ಮಾಡಿದ ಅನ್ಯಾಯವಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಯಕತ್ವ ಬದಲಾವಣೆ; ಲಿಂಗಾಯತರು, ಬ್ರಾಹ್ಮಣರ ನಡುವೆ ತೀವ್ರ ಪೈಪೋಟಿ;…
ಬಿಎಸ್ವೈ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರೇ ಬಿಜೆಪಿ ವಿರುದ್ಧ ದಿಕ್ಕಾರ ಕೂಗಿದ್ದು, ಯಡಿಯೂರಪ್ಪ ಅವರಿಗಿದ್ದ ಜನಬೆಂಬಲಕ್ಕೆ ಸಾಕ್ಷಿ ಎಂಬಂತಿದೆ. ಶಿಕಾರಿಪುರದ ಪ್ರತಿಯೊಂದು ವ್ಯಾಪಾರ-ವಹಿವಾಟಿನ ಸ್ಥಳದಲ್ಲಿಯು, ಸಾರ್ವಜನಿಕರು ಯಡಿಯೂರಪ್ಪನವರಿಗೆ ಹೀಗಾಗಬಾರದಿತ್ತು ಎನ್ನುವ ಕನಿಕರದ ಮಾತುಗಳು ಕೇಳಿಬಂದಿವೆ.
ಸಿಎಂ ಪುತ್ರ ವಿಜಯೇಂದ್ರಗೆ ದೆಹಲಿಯಲ್ಲಿ ಸಿಕ್ಕ ಸೂಚನೆ ಏನು?
ಬಿಎಸ್ವೈ ರಾಜಿನಾಮೆ ಶಿಕಾರಿಪುರದಲ್ಲಿ ಮಾತ್ರವಲ್ಲದೆ, ಹಲವೆಡೆ ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರೇ ಯಡಿಯೂರಪ್ಪ ಅವರಿಗೆ ಅನ್ಯಾಯವಾಗಿದ ಎಂದು ಹೇಳಿಕೆ ನೀಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಕಡೆಗೆ ಅನುಕಂಪದ ಅಲೆಯೇ ಹರಿದು ಬಂದಿದ್ದು, ತನ್ನ ಕಾರ್ಯಕರ್ತರ ಅಸಮಾಧಾನವನ್ನು ಬಿಜೆಪಿ ಹೇಗೆ ನಿರ್ವಹಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.