• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

3ನೇ ಪೀಠ ಸ್ಥಾಪನೆಗೆ ತೆರೆಮರೆಯಲ್ಲೇ ಸಜ್ಜು : ಪಂಚಮಸಾಲಿ ಸಮಾಜದಲ್ಲಿ ಮತಷ್ಟು ಒಡಕು ಮೂಡುವ ಆತಂಕ

ರಾಕೇಶ್ ಬಿಜಾಪುರ್ by ರಾಕೇಶ್ ಬಿಜಾಪುರ್
January 13, 2022
in ಕರ್ನಾಟಕ
0
3ನೇ ಪೀಠ ಸ್ಥಾಪನೆಗೆ ತೆರೆಮರೆಯಲ್ಲೇ ಸಜ್ಜು : ಪಂಚಮಸಾಲಿ ಸಮಾಜದಲ್ಲಿ ಮತಷ್ಟು ಒಡಕು ಮೂಡುವ ಆತಂಕ
Share on WhatsAppShare on FacebookShare on Telegram

ರಾಜ್ಯದಲ್ಲಿ ಪ್ರಬಲ ಸಮುದಾಯಗಳ ಪೈಕಿ ಲಿಂಗಾಯತ ಸಮುದಾಯ ಕೂಡಾ ಒಂದಾಗಿದೆ. ಬಸವಾದಿ ಶರಣ ತತ್ವದ ಮೇಲೆ ನಂಬಿಕೆ ಇಟ್ಟಿರುವ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟ ರಾಜಕೀಯಶಕ್ತಿ ಪ್ರದರ್ಶನ ಮಾಡಿತ್ತು. ಆದರೆ ಅದೇ ಮೀಸಲಾತಿಯ ಹೋರಾಟ ಇದೀಗ ಸಮುದಾಯದ ಸ್ವಾಮೀಜಿಗಳಲ್ಲಿ ಭಿನ್ನಮತ ಉಂಟಾಗಲು ಕಾರಣವಾಗಿದೆ.

ADVERTISEMENT

ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮಿಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮಿಜಿ ವಿರುದ್ಧ ಇದೀಗ ಅದೇ ಸಮುದಾಯದ ಕೆಲವು ಸ್ವಾಮಿಜಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತ್ಯೇಕವಾಗಿ ಸಭೆಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಸ್ಥಾಪನೆ ಮಾಡುವ ಮೂಲಕ ಪಂಚಮಸಾಲಿ ಸಮುದಾಯದಲ್ಲೇ ಮತ್ತೊಂದು ಕದನಕ್ಕೆ ವೇದಿಕೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಎರಡು ಪಂಚಮಸಾಲಿ ಪೀಠಗಳು ಇದ್ದರೂ ಸಹ ಇದೀಗ ಈ ಎರಡೂ ಪೀಠಗಳಿಗೆ ಪರ್ಯಾಯ ಎಂಬಂತೆ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಇದನ್ನು ಪರ್ಯಾಯಪೀಠ, ಶಕ್ತಿಪೀಠ, ಶರಣ ಪೀಠ, ಬಸವ ಪೀಠ ಎಂದೆಲ್ಲ ಉಲ್ಲೇಖಿಸಲಾಗುತ್ತಿದೆ. ಸಮಾನ ಮನಸ್ಕ ಸ್ಬಾಮೀಜಿಗಳು ಒಂದುಗೂಡಿರುವ ಈ ಒಕ್ಕೂಟದಲ್ಲಿ ಸಮಾಜದ ಬಡವರಿಗಾಗಿ ಶ್ರಮಿಸುವ ಉದ್ದೇಶ ಹೊಂದಿದೆ. 80ಕ್ಕೂ ಅಧಿಕ ಸ್ವಾಮೀಜಿಗಳು ಇದಕ್ಕೆ ಕೈ ಜೋಡಿಸಿದ್ದಾರೆ. ಎರಡೂ ಪೀಠಗಳ ಮೇಲೆ ಅಸಮಾಧಾನಗೊಂಡವರು ಒಕ್ಕೂಟದಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚಮಸಾಲಿ ಎರಡು ಪೀಠಗಳ ನಡುವೆ ಮುಸುಕಿದ ಗುದ್ದಾಟಗಳು ನಡೆಯುತ್ತಲೇ ಇರುವಾಗ ಇದೀಗ ಈ ಎರಡೂ ಪೀಠಗಳಿಗೆ ಠಕ್ಕರ್ ಕೊಡಲು ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಸಿದ್ಧವಾಗಿದೆ.

ಕಳೆದ ತಿಂಗಳು ಅಥಣಿ ತಾಲೂಕಿನ ಕಕ್ಕಮರಿಯಲ್ಲಿ ಮೊದಲ ಸಭೆ ಹಾಗೂ ಜಮಖಂಡಿಯಲ್ಲಿ 2ನೇ ಸಭೆಯನ್ನು ನಡೆಸಲಾಗಿತ್ತು. ಬಳಿಕ ಒಕ್ಕೂಟದ ಕಾರ್ಯ ಚಟುವಟಿಕೆ ಚುರುಕಾಗಿದ್ದು, ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಮೂರನೇ ಸಭೆ ಮಾಡಿದ್ದಾರೆ. ಇಲ್ಲಿನ ಹಿರೇಮಠದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 35ಕ್ಕೂ ಅಧಿಕ ಸ್ವಾಮೀಜಿಗಳು ಆಗಮಿಸಿ ಭಾಗವಹಿಸಿದ್ದರು. ಪಂಚಮಸಾಲಿ ಸಮಾಜದ ಏಳಿಗೆಗಾಗಿ ಶ್ರಮಿಸಲು ಮುಂದಾಗಿರುವ ಈ ಒಕ್ಕೂಟ ಪಂಚಮಸಾಲಿ ಸಮಾಜದ ಮತ್ತೊಂದು ಶಕ್ತಿಪೀಠ ಎಂದೇ ಬಿಂಬಿತವಾಗಿದೆ. ಹೀಗಾಗಿ ಈಗಾಗಲೇ ಇರುವ ಎರಡೂ ಪೀಠಗಳಿಗೆ ಸೆಡ್ಡು ಹೊಡೆಯಲು ನಿರ್ಮಾಣವಾಗಿರುವ ಈ ಒಕ್ಕೂಟದಿಂದ ಪಂಚಮಸಾಲಿ ಒಗ್ಗಟ್ಟಿನಲ್ಲಿ ವಿಭಜನೆ ಆಗುವುದು ಖಂಡಿತ ಎಂಬಂತಾಗಿದೆ.

ಪಂಚಮಸಾಲಿ ಪರ್ಯಾಯ ಒಕ್ಕೂಟದ ಬಗ್ಗೆ ಮಾತನಾಡಿದ ಮನಗೂಳಿಯ ಹಿರೇಮಠದ ಸಂಗನಬಸವ ಶ್ರೀಗಳು, “ಸಮಾಜದಲ್ಲಿನ ಬಡವರಿಗೆ ಹಿಂದುಳಿದವರಿಗೆ ಸಹಾಯಹಸ್ತ ಚಾಚಲು ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಹೊರತಾಗಿ ಇದರಲ್ಲಿ ಯಾವುದೇ ರಾಜಕೀಯವಾಗಲಿ ಅಥವಾ ಕೂಡಲಸಂಗಮ ಮತ್ತು ಹರಿಹರ ಪೀಠಗಳಿಗೆ ಸೆಡ್ಡು ಹೊಡೆಯುವುದಾಗಲಿ ಇಲ್ಲ ಎಂದಿದ್ದಾರೆ. ಆದರೆ ಇದೇ ಮನಗೂಳಿಯ ಸಂಗನ ಬಸವ ಶ್ರೀಗಳು, ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಾನೇ ಶ್ರೇಷ್ಠ ಎನ್ನುವುದು ಸರಿಯಲ್ಲ. ರಾಜಕೀಯ ಮಾಡುವುದನ್ನು ಬಿಟ್ಟು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಮೊದಲು ಪಂಚಮಸಾಲಿ ಸಮುದಾಯದವರಿಗಾಗಿ ಹರಿಹರ ಪೀಠದ ಒಬ್ಬರೇ ಜಗದ್ಗುರುಗಳು ಇದ್ದರು, ನಂತರದಲ್ಲಿ ಕೂಡಲ ಸಂಗಮದಲ್ಲಿ ಮತ್ತೊಂದು ಪೀಠ ರಚಿತವಾಗಿ ಇಬ್ಬರು ಜಗದ್ಗುರುಗಳು ಇದ್ದಾರೆ. ಈ ಎರಡೂ ಪೀಠಗಳ ನಡುವೆ ಸಮನ್ವಯತೆ ಸಾಧಿಸಿ ದೊಡ್ಡ ಪಂಚಮಸಾಲಿ ಜನಾಂಗವನ್ನೂ ಒಂದುಗೂಡಿಸಿಕೊಂಡು ಹೋಗಬೇಕು ಎಂದು ಹಲವರು ಶತಪ್ರಯತ್ನ ನಡೆಸಿದರು ಆಗಿಲ್ಲ. ಇದೀಗ ಈ ಪೀಠಗಳಿಗೆ ಸವಾಲಾಗಿ ಮತ್ತೊಂದು ಒಕ್ಕೂಟ ಜನ್ಮ ತಾಳಿದ್ದು, ಸಮಾಜವನ್ನು ಮತ್ತಷ್ಟು ಒಡೆಯಲಿದೆಯಾ ಎಂಬ ಆತಂಕ ಆ ಸಮುದಾಯದ ಜನರಲ್ಲಿ ಕಾಡುತ್ತಿದೆ.
ಇದರ ಜೊತೆಗೆ ಪಂಚಮಸಾಲಿ ಎರಡೂ ಪೀಠಗಳ ಜಗದ್ಗುರುಗಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಸಮಾಧಾನವಿದ್ದ ಸ್ವಾಮೀಜಿಗಳೆಲ್ಲ ಒಂದುಗೂಡಿ ಹೀಗೆ ಒಕ್ಕೂಟ ರಚಿಸಿ ಪೀಠಗಳಿಗೆ ಪಾಠ ಕಲಿಸಲು ಹೊರಟಿದ್ದಾರೆ. ಇದರ ಭಾಗವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಬಳಿ ಪೀಠ ಸ್ಥಾಪನೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಪಂಚಮಸಾಲಿ ಮಠಾಧೀಶರ ಒಕ್ಕೂಟ ಅಧ್ಯಕ್ಷರಾಗಿರುವ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮತ್ತು ಹಲವು ಮುಖಂಡರಿಂದ ಸ್ಥಳ ಪರಿಶೀಲನೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಅದು ಈ ಬಗ್ಗೆ ಅಧಿಕೃತವಾದ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ.

ರಾಜಕೀಯ ನಾಯಕರ ಪರವಾಗಿ ಪೀಠಗಳ ವಾದ

ಪಂಚಮಸಾಲಿ ಸಮುದಾಯದ ಪ್ರಬಲ ನಾಯಕರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಸಚಿವ ಮುರುಗೇಶ್ ನಿರಾಣಿ ಪರವಾಗಿ ಒಬ್ಬಬ್ಬ ಸ್ವಾಮೀಜಿ ಬೆಂಬಲ ಸೂಚಿಸುತ್ತಿದ್ದಾರೆ. ಹರಿಹರ ಪೀಠದ ವಚನಾನಂದ ಸ್ವಾಮೀಜಿ ನೇರವಾಗಿ ಮುರುಗೇಶ್ ನಿರಾಣಿ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ಅಂದಿನ ಸಿಎಂ ಯಡಿಯೂರಪ್ಪ ಅವರಿಗೆ ವೇದಿಕೆ ಮೇಲೆಯೇ ಬಹಿರಂಗವಾಗಿ ಆಗ್ರಹಿಸಿದ್ದರು. ಕೂಡಲ ಸಂಗಮ ಪೀಠದ ಜಯ ಮೃತುಂಜಯ ಸ್ವಾಮೀಜಿಗಳ ಶಾಸಕ ಬಸನಗೌಡ ಪಾಟೀಲ್ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ ಎರಡು ಪೀಠಗಳು ರಾಜಕಾರಣಿಗಳ ಜೊತೆ ಗುರುತಿಸಿಕೊಂಡ ಕಾರಣ ಅವುಗಳಿಂದ ದೂರವಿರಲು ಮೂರನೇ ಪೀಠ ಸ್ಥಾಪನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಇಬ್ಬರೂ ನಾಯಕರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಉಳಿದ ನಾಯಕರು ಈ ಮೂರನೇ ಪೀಠಕ್ಕೆ ಬೆಂಬಲವಾಗಿ ನಿಲ್ಲಲಿದ್ದಾರೆ ಎನ್ನಲಾಗಿದೆ.

ಇದೀಗ ಮೂರನೇ ಪೀಠ ಸ್ಥಾಪನೆಯಾದರೆ ಪಂಚಮಸಾಲಿ ಸಮಾಜದಲ್ಲಿ ಮತಷ್ಟು ಒಡಕು ಮೂಡುವ ಆತಂಕ ಹಲವರಲ್ಲಿ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.

Tags: BJPCovid 19ಕರೋನಾಕೋವಿಡ್-19ಪಂಚಮಸಾಲಿಪಂಚಮಸಾಲಿ ಸಮುದಾಯಪಂಚಮಸಾಲಿ. ಮೀಸಲಾತಿ ಹೋರಾಟಪೀಠ ಸ್ಥಾಪನೆಬಿಜೆಪಿ
Previous Post

ಅಪಾರ್ಟ್‌ಮೆಂಟ್ ಗಳಿಗೆ ವಿಶೇಷ ಮಾರ್ಗಸೂಚಿ ಪ್ರಕಟಿಸಿದ BBMP

Next Post

ಮೇಕೆದಾಟು ಪಾದಯಾತ್ರೆ : ಕಾವೇರಿ ನೀರು ಹೊತ್ತು 60 ಕಿಲೋವೀಟರ್‌ ನಡೆದ ಹುಸೇನ್‌! | Hussain | Ramanagara

Related Posts

ರೇಣುಕಾಸ್ವಾಮಿ ಕೊಲೆ ಕೇಸ್‌: ಡಿ ಗ್ಯಾಂಗ್‌ ಇಂದು ಬಿಗ್‌ ಡೇ..
Top Story

ರೇಣುಕಾಸ್ವಾಮಿ ಕೊಲೆ ಕೇಸ್‌: ಡಿ ಗ್ಯಾಂಗ್‌ ಇಂದು ಬಿಗ್‌ ಡೇ..

by ಪ್ರತಿಧ್ವನಿ
November 3, 2025
0

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಇಂದು ಮಹತ್ವದ ದಿನವಾಗಿದ್ದು, ಇಂದು ಎಲ್ಲಾ ಆರೋಪಿಗಳ ಮೇಲೆ ದೋಷಾರೋಪ ನಿಗದಿಯಾಗಲಿದೆ. ಈ ಹಿನ್ನಲೆಯಲ್ಲಿ ನಟ...

Read moreDetails
ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

November 2, 2025
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕನ್ನಡ ರಾಜ್ಯೋತ್ಸವ ಭಾಷಣ

November 2, 2025
ಪಂಚ ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪಂಚ ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 2, 2025
Next Post
ಮೇಕೆದಾಟು ಪಾದಯಾತ್ರೆ : ಕಾವೇರಿ ನೀರು ಹೊತ್ತು 60 ಕಿಲೋವೀಟರ್‌ ನಡೆದ ಹುಸೇನ್‌! | Hussain | Ramanagara

ಮೇಕೆದಾಟು ಪಾದಯಾತ್ರೆ : ಕಾವೇರಿ ನೀರು ಹೊತ್ತು 60 ಕಿಲೋವೀಟರ್‌ ನಡೆದ ಹುಸೇನ್‌! | Hussain | Ramanagara

Please login to join discussion

Recent News

Top Story

by ಪ್ರತಿಧ್ವನಿ
November 3, 2025
ರೇಣುಕಾಸ್ವಾಮಿ ಕೊಲೆ ಕೇಸ್‌: ಡಿ ಗ್ಯಾಂಗ್‌ ಇಂದು ಬಿಗ್‌ ಡೇ..
Top Story

ರೇಣುಕಾಸ್ವಾಮಿ ಕೊಲೆ ಕೇಸ್‌: ಡಿ ಗ್ಯಾಂಗ್‌ ಇಂದು ಬಿಗ್‌ ಡೇ..

by ಪ್ರತಿಧ್ವನಿ
November 3, 2025
ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .
Top Story

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

by ಪ್ರತಿಧ್ವನಿ
November 2, 2025
ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.
Top Story

ದುನಿಯಾ ವಿಜಯ್ – ರಚಿತರಾಮ್ ಅಭಿನಯದ ಬಹು ನಿರೀಕ್ಷಿತ “ಲ್ಯಾಂಡ್ ಲಾರ್ಡ್” ಚಿತ್ರ 2026ರ ಜನವರಿ 23ಕ್ಕೆ ಬಿಡುಗಡೆ.

by ಪ್ರತಿಧ್ವನಿ
November 2, 2025
ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿ.ಎಂ ಘೋಷಣೆ
Top Story

ಚೆನ್ನಡ ಹಾಕಿ ಪಂದ್ಯಾವಳಿಗೆ ಒಂದು ಕೋಟಿ ಅನುದಾನ: ಸಿ.ಎಂ ಘೋಷಣೆ

by ಪ್ರತಿಧ್ವನಿ
November 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

November 3, 2025
ರೇಣುಕಾಸ್ವಾಮಿ ಕೊಲೆ ಕೇಸ್‌: ಡಿ ಗ್ಯಾಂಗ್‌ ಇಂದು ಬಿಗ್‌ ಡೇ..

ರೇಣುಕಾಸ್ವಾಮಿ ಕೊಲೆ ಕೇಸ್‌: ಡಿ ಗ್ಯಾಂಗ್‌ ಇಂದು ಬಿಗ್‌ ಡೇ..

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada