Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಅಪಾರ್ಟ್‌ಮೆಂಟ್ ಗಳಿಗೆ ವಿಶೇಷ ಮಾರ್ಗಸೂಚಿ ಪ್ರಕಟಿಸಿದ BBMP

ಬೆಂಗಳೂರು ನಗರದ ಅಪಾರ್ಟ್‌ಮೆಂಟ್ ಗಳು ರಾಜಧಾನಿಯ ಕೊರೋನಾ ಹಾಟ್ ಸ್ಪಾಟ್ ಗಳಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಅಪಾರ್ಟ್‌ಮೆಂಟ್ ಗಳಲ್ಲೇ ಪತ್ತೆಯಾಗುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ಇಂದ ಅಪಾರ್ಟ್‌ಮೆಂಟ್ ಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪ್ರತಿಧ್ವನಿ

ಪ್ರತಿಧ್ವನಿ

January 13, 2022
Share on FacebookShare on Twitter

ದಿನದಿಂದ ದಿನಕ್ಕೆ ಕೊರೋನಾ ಹಾಗೂ ಓಮೈಕ್ರಾನ್ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಗರದ ಅಪಾರ್ಟ್‌ಮೆಂಟ್ ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ‌ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈಗಾಗಲೇ ನಗರದ ಅಪಾರ್ಟ್‌ಮೆಂಟ್ ಗಳು ರಾಜಧಾನಿಯ ಕೊರೋನಾ ಹಾಟ್ ಸ್ಪಾಟ್ ಗಳಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪ್ರಕರಣಗಳು ಅಪಾರ್ಟ್‌ಮೆಂಟ್ ಗಳಲ್ಲೇ ಪತ್ತೆಯಾಗುತ್ತಿವೆ. ಈ ಹಿನ್ನೆಲೆ ಬಿಬಿಎಂಪಿ ಇಂದ ಅಪಾರ್ಟ್‌ಮೆಂಟ್ ಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೆಚ್ಚು ಓದಿದ ಸ್ಟೋರಿಗಳು

ಇಂದಿನಿಂದ 7 ದಿನ ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ

ಈ ಸರ್ಕಾರ ನಡೆಯುತ್ತಿಲ್ಲ, ಚುನಾವಣೆಗೆ ಏಳೆಂಟು ತಿಂಗಳಿದೆ ಅಂತ ಮ್ಯಾನೇಜ್​​ ಮಾಡುತ್ತಿದ್ದೇವೆ : ಸಚಿವ ಮಾಧುಸ್ವಾಮಿ ಆಡಿಯೋ ವೈರಲ್

ರಾಜ್ಯದ 1 ಕೋಟಿ 25 ಲಕ್ಷ ಮನೆಗಳಲ್ಲಿ ಧ್ವಜ ಹಾರಾಟ: ಸಿಎಂ ಬೊಮ್ಮಾಯಿ

ಅಪಾರ್ಟ್‌ಮೆಂಟ್ ಗಳಿಗೆ ಗೈಡ್ ಲೈನ್ಸ್

ನಗರದ ಎಲ್ಲಾ ಅಪಾರ್ಟ್‌ಮೆಂಟ್ ಗಳಲ್ಲಿ ಟೆಂಪ್ರೇಚರ್ ಚೆಕ್ ಮಾಡುವುದು ಕಡ್ಡಾಯ.‌ ಅಪಾರ್ಟ್‌ಮೆಂಟ್ ಗಳ ಕಾಮನ್ ಏರಿಯಾ ಅಗಾಗ್ಗೆ ಸ್ಯಾನಿಟೈಸ್ ಮಾಡಬೇಕು. ಪಾರ್ಕ್ ಗಳಲ್ಲಿ ಓಡಾಡುವಾಗ CAB ಪಾಲನೆಮಾಡುವಂತೆ ಸೂಚನೆ ಪಾಲಿಕೆ ನೀಡಿದೆ. ಲಸಿಕಾಕರಣ, ಟೆಸ್ಟಿಂಗ್ ಹಾಗೂ ಪಾಲಿಕೆ ಕೊಡುವ ಸೂಚನೆಗಳನ್ನು ನಿವಾಸಿಗಳಿಗೆ ತಿಳಿಸಲು ವ್ಯವಸ್ಥೆ ಮಾಡುವುದು. ಅಪಾರ್ಟ್‌ಮೆಂಟ್ ನ ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ ಬಂದ್ ಮಾಡುವುದು. ಅಪಾರ್ಟ್‌ಮೆಂಟ್ ನಲ್ಲಿರುವ ಮಕ್ಕಳ ಮೇಲೆ ಪೋಷಕರು ಹೆಚ್ಚು ನಿಗಾವಹಿಸಬೇಕು.

ಕಾರ್ಯಕ್ರಮಗಳಿಗೆ 50 ಮಂದಿಗಷ್ಟೇ ಅವಕಾಶ

ಕರ್ನಾಟಕ | 3 ಕ್ಕಿಂತ ಹೆಚ್ಚು #COVID19 ಪ್ರಕರಣಗಳ ಸಂದರ್ಭದಲ್ಲಿ ಸಂಪೂರ್ಣ ಅಪಾರ್ಟ್ಮೆಂಟ್ ಸಂಕೀರ್ಣವನ್ನು ಕನಿಷ್ಠ 7 ದಿನಗಳವರೆಗೆ 'ಕಂಟೋನ್ಮೆಂಟ್ ವಲಯ' ಎಂದು ಘೋಷಿಸಲಾಗುತ್ತದೆ; ಎಲ್ಲಾ ನಿವಾಸಿಗಳನ್ನು ಪರೀಕ್ಷಿಸಲಾಗುವುದು ಎಂದು BBMP ಆದೇಶ ಹೊರಡಿಸಿದೆ.@BBMPSplHealth @BBMPSWMSplComm@BSBommai #Covid19 #Corona #Omicron pic.twitter.com/hrImPPwzfT

— Pratidhvani (@PratidhvaniNews) January 13, 2022

ಇನ್ನು ಅಪಾರ್ಟ್‌ಮೆಂಟ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೆ 50 ಮಂದಿಗಷ್ಟೇ ಅವಕಾಶ ನೀಡಬೇಕು. ಮನೆಗಳಲ್ಲಿನ ತ್ಯಾಜ್ಯಗಳನ್ನು ಶಿಸ್ತು ಬದ್ಧವಾಗಿ ವಿಲೇವಾರಿ ಮಾಡಬೇಕು.‌ ಲಿಫ್ಟ್ ಗಳಲ್ಲಿನ ಬಟ್ ಗಳನ್ನು ಬಳಕೆಗೆ ತಕ್ಕಂತೆ ಸ್ಯಾನಿಟೈಸ್ ಮಾಡಬೇಕು. ಸತತವಾಗಿ ಹೊರಗಡೆ ಹೋಗಿ ಬರುವ ನಿವಾಸಿಗಳಿಗೆ ಆಗಾಗ್ಗೆ ಟೆಸ್ಟಿಂಗ್ ನಡೆಸಬೇಕು.‌ ಫ್ಲಾಟ್ ಒಂದರಲ್ಲಿ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ, ಇಡೀ ಮಹಡಿಯನ್ನು ಸೀಲ್ ಡೌನ್ ಮಾಡಬೇಕು. ಒಂದು ಸೋಂಕು ಪತ್ತೆಯಾದರೆ ಸೋಂಕು ಪತ್ತೆಯಾದ 100 ಮೀಟರ್ ಸುತ್ತಳತೆಯಲ್ಲಿರುವ ಎಲ್ಲವನ್ನೂ ಸೀಲ್ ಡೌನ್ ಮಾಡಿ ಸ್ವಯಂ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ಕಂಟೋನ್ಮೆಂಟ್ ಝೋನ್ ಘೋಷಿಸಬೇಕು.‌ಹತ್ತು ಅಥವಾ ಅದಕ್ಕೂ ಅಧಿಕ ಕೇಸ್ ಪತ್ತೆಯಾದರೆ ಇಡೀ ಅಪಾರ್ಟ್‌ಮೆಂಟ್ ಸೀಲ್ ಡೌನ್ ಮಾಡಲು ತಾಕೀತು ಮಾಡಲಾಗಿದೆ.

ಸೋಂಕು ಪತ್ತೆಯಾಗಿ ಕಂಟೋನ್ಮೆಂಟ್ ಝೋನ್ ಘೋಷಣೆಯಾದರೆ ಇಡೀ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಕೊರೋನಾ ಟೆಸ್ಟ್ ನಡೆಸುವುದು ಕಡ್ಡಾಯವಾಗಿದೆ. ಅಪಾರ್ಟ್‌ಮೆಂಟ್ ನಿವಾಸಿಗಳ ಸಂಬಂಧಿಕರು, ಗೆಳೆಯರು, ಡೆಲಿವರಿ ಬಾಯ್ ಅಥವಾ ಇತರೆ ವಿಸಿಟರ್ಸ್ ಗೂ ಎರಡು ಡೋಸ್ ಆಗಿದ್ದರೆ ಮಾತ್ರ ಒಳಗೆ ಪ್ರವೇಶ ಕಲ್ಪಿಸಬೇಕು. ಎಲ್ಲಾ ನಿವಾಸಿಗಳಿಗೂ ಎರಡು ಡೋಸ್ ಲಸಿಕೆ ಆಗುವಂತೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಗಳೇ ನೋಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ತಮಿಳುನಾಡು: ದಲಿತರ ತ್ರಿವಳಿ ಹತ್ಯೆ – 27 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ
ದೇಶ

ತಮಿಳುನಾಡು: ದಲಿತರ ತ್ರಿವಳಿ ಹತ್ಯೆ – 27 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

by ಪ್ರತಿಧ್ವನಿ
August 7, 2022
Uncategorized

The Different Types society Developers

by ಶ್ರುತಿ ನೀರಾಯ
August 11, 2022
ಮೈಸೂರಿನಲ್ಲಿ ಅಪ್ಪು ಆಂಬುಲೆನ್ಸ್‌ ಗೆ ಚಾಲನೆ ನೀಡಿದ ನಟ ಪ್ರಕಾಶ್‌ ರಾಜ್!
ಸಿನಿಮಾ

ಮೈಸೂರಿನಲ್ಲಿ ಅಪ್ಪು ಆಂಬುಲೆನ್ಸ್‌ ಗೆ ಚಾಲನೆ ನೀಡಿದ ನಟ ಪ್ರಕಾಶ್‌ ರಾಜ್!

by ಪ್ರತಿಧ್ವನಿ
August 6, 2022
ದೇಶದಲ್ಲಿ ಕರೋನಾ ಹೆಚ್ಚಳ : ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರದಿಂದ ಮಾರ್ಗಸೂಚಿ
ದೇಶ

ದೇಶದಲ್ಲಿ ಕರೋನಾ ಹೆಚ್ಚಳ : ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರದಿಂದ ಮಾರ್ಗಸೂಚಿ

by ಪ್ರತಿಧ್ವನಿ
August 13, 2022
ಲೋಕಾಯುಕ್ತಕ್ಕೆ ಮತ್ತಷ್ಟು ಬಲ ಬೇಕಿದೆ: ಎಚ್.ವಿಶ್ವನಾಥ್
ಕರ್ನಾಟಕ

ಲೋಕಾಯುಕ್ತಕ್ಕೆ ಮತ್ತಷ್ಟು ಬಲ ಬೇಕಿದೆ: ಎಚ್.ವಿಶ್ವನಾಥ್

by ಪ್ರತಿಧ್ವನಿ
August 12, 2022
Next Post
3ನೇ ಪೀಠ ಸ್ಥಾಪನೆಗೆ ತೆರೆಮರೆಯಲ್ಲೇ ಸಜ್ಜು : ಪಂಚಮಸಾಲಿ ಸಮಾಜದಲ್ಲಿ ಮತಷ್ಟು ಒಡಕು ಮೂಡುವ ಆತಂಕ

3ನೇ ಪೀಠ ಸ್ಥಾಪನೆಗೆ ತೆರೆಮರೆಯಲ್ಲೇ ಸಜ್ಜು : ಪಂಚಮಸಾಲಿ ಸಮಾಜದಲ್ಲಿ ಮತಷ್ಟು ಒಡಕು ಮೂಡುವ ಆತಂಕ

ಮೇಕೆದಾಟು ಪಾದಯಾತ್ರೆ : ಕಾವೇರಿ ನೀರು ಹೊತ್ತು 60 ಕಿಲೋವೀಟರ್‌ ನಡೆದ ಹುಸೇನ್‌! | Hussain | Ramanagara

ಮೇಕೆದಾಟು ಪಾದಯಾತ್ರೆ : ಕಾವೇರಿ ನೀರು ಹೊತ್ತು 60 ಕಿಲೋವೀಟರ್‌ ನಡೆದ ಹುಸೇನ್‌! | Hussain | Ramanagara

ಚುನಾವಣೆಯಲ್ಲಿ ಸೋತ ಹತಾಷೆಯಿಂದ ಪಾದಯಾತ್ರೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ : ಮಾಜಿ ಸಂಸದ DRUVA NARAYAN

ಚುನಾವಣೆಯಲ್ಲಿ ಸೋತ ಹತಾಷೆಯಿಂದ ಪಾದಯಾತ್ರೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ : ಮಾಜಿ ಸಂಸದ DRUVA NARAYAN

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist