ಕಾಶ್ಮೀರಕ್ಕೆ ವಿಶೇಷ ಹಕ್ಕುಗಳನ್ನು ನೀಡಿದ 370 ನೇ ವಿಧಿಯನ್ನು ತೆಗೆದುಹಾಕುವ ಬಗ್ಗೆ ಭಯೋತ್ಪಾದಕ ಗುಂಪು ಇಂಡಿಯನ್ ಮುಜಾಹಿದ್ದೀನ್ ನಿಂದ ತಮಗೆ ಬೆದರಿಕೆ ಕರೆಗಳು ಬಂದಿವೆ ಎಂದು ಹಲವಾರು ಸುಪ್ರೀಂ ಕೋರ್ಟ್ ವಕೀಲರು ಇಂದು ಆರೋಪಿಸಿದ್ದಾರೆ. ಜೊತೆಗೆ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಕಾಶ್ಮೀರದ ಧ್ವಜ ಹಾರಿಸುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಒಂದು ತಿಂಗಳಲ್ಲಿ ಇದು ಮೂರನೇ ಬಾರಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ವಕೀಲರು ಹೇಳಿಕೊಂಡಿದ್ದಾರೆ. ಈ ಹಿಂದೆ ಪಂಜಾಬ್ನ ಫ್ಲೈಓವರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದ ಭದ್ರತಾ ಲೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ತನಿಖಾ ಸಮಿತಿಯ ಕುರಿತು ನ್ಯಾಯಾಧೀಶರಿಗೆ ಬೆದರಿಕೆ ಕರೆಗಳು ಬಂದಿದ್ದವು. ಕಳೆದ ವಾರ ಅವರಿಗೆ ಎರಡನೇ ಬೆದರಿಕೆ ಕರೆ ಬಂದಿದ್ದು, ಖಲಿಸ್ತಾನ್ ಪರವಾದ ಸಿಖ್ಸ್ ಫಾರ್ ಜಸ್ಟಿಸ್ ಗುಂಪಿನಿಂದ ಕರೆ ಬಂದಿದೆ.
ಇಂದು ಕರೆ ಮಾಡಿದವರು ಖಲಿಸ್ತಾನ್ ಗುಂಪಿನ ಪರವಾಗಿ ಬೆದರಿಕೆಗಳನ್ನು ಹಾಕಿದ್ದಾರೆ. ಈ ಹೋರಾಟವನ್ನು ದೆಹಲಿಗೆ ಕೊಂಡೊಯ್ಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

“ನಾವು ಈ ಹೋರಾಟವನ್ನು ದೆಹಲಿಗೆ ಕೊಂಡೊಯ್ಯುತ್ತೇವೆ. 370 ನೇ ವಿಧಿಯನ್ನು ತೆಗೆದುಹಾಕುವ ವಿಧಾನವು ಕಾಶ್ಮೀರದ ಜನರ ಹಕ್ಕುಗಳಿಗೆ ವಿರುದ್ಧವಾಗಿದೆ. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತದೆ. ಇದನ್ನು ಜಗತ್ತು ನೋಡಲಿದೆ… ಖಲಿಸ್ತಾನ್ ಕಲ್ಪನೆಯನ್ನು ಬೆಂಬಲಿಸುವ ‘ಸಿಖ್ಸ್ ಫಾರ್ ಜಸ್ಟೀಸ್’ ಸಂಘಟನೆಯು ಸಹ ದೆಹಲಿಗೆ ಹೋರಾಟವನ್ನು ಕೊಂಡೊಯ್ಯುತ್ತಿದೆ,” ಎಂದು ಕರೆಯಲ್ಲಿ ಹೇಳಲಾಗಿದೆ.
ಕರೆಗಳಲ್ಲಿ ಜನವರಿ 26 ರ ಗಣರಾಜ್ಯೋತ್ಸವದಂದು ಪಿಎಂ ಮೋದಿಯನ್ನು ನಿರ್ಬಂಧಿಸುತ್ತೇವೆ. ಹಾಗೂ ನಾವು ಜಸ್ಟಿಸ್ ಇಂದೂ ಮಲ್ಹೋತ್ರಾ ಅವರಿಗೆ ಪ್ರಧಾನಿ ಭದ್ರತಾ ಉಲ್ಲಂಘನೆ ಪ್ರಕರಣವನ್ನು ತನಿಖೆ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ.