• Home
  • About Us
  • ಕರ್ನಾಟಕ
Saturday, January 24, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮಂಡ್ಯದಲ್ಲಿ ಸಾಹಿತ್ಯ ಜಾತ್ರೆ.. ಇಂದಿನ ತಪ್ಪು ನಾಳೆ.. ನಾಡಿದ್ದು ಮರುಕಳಿಸದಿರಲಿ..

ಪ್ರತಿಧ್ವನಿ by ಪ್ರತಿಧ್ವನಿ
December 21, 2024
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
Share on WhatsAppShare on FacebookShare on Telegram

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್​.ಚಲುವರಾಯಸ್ವಾಮಿ ಮುಂದಾಳತ್ವದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಮೊದಲ ದಿನ ರಾಜಕಾರಣದ ಜಾತ್ರೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿದಂತೆ ಸಚಿವ ಸಂಪುಟದ ಬಹುತೇಕ ಜನರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಗೋ.ರು ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಮೂರು ದಿನದ ಸಾಹಿತ್ಯ ಹಬ್ಬ ನಡೆಯುತ್ತಿದ್ದು, ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇವತ್ತು ಮೊದಲ ದಿನ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಆದರೆ ಇನ್ನುಳಿದ ಎರಡು ದಿನಗಳ ಕಾಲ ಆ ತಪ್ಪುಗಳಾಗದಿದ್ದರೆ ಮಂಡ್ಯದ ಸಾಹಿತ್ಯ ಜಾತ್ರೆಗೆ ಮೆರಗು ಬರುವುದರಲ್ಲಿ ಅನುಮಾನವಿಲ್ಲ.

ADVERTISEMENT
DK Shivakumar on CT Ravi : ಸಿಟಿ ರವಿ ಆಡಿರೋ ಅಶ್ಲೀಲ ಪದ  ರೊಚ್ಚಿಗೆದ್ದ ಡಿಕೆಶಿ #pratidhvani

ಮೊದಲ ತಪ್ಪನ್ನು ಸರಿ ಮಾಡುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಮಂಡ್ಯ ನಗರದಿಂದ ಬರೋಬ್ಬರಿ 6 ಕಿಲೋ ಮೀಟರ್​ ದೂರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ ಕಾರ್ಯಕ್ರಮಕ್ಕೆ ದೂರದ ಊರುಗಳಿಂದ ಬರುವ ಜನರು, ಕಾರ್ಯಕ್ರಮದ ಸ್ಥಳಕ್ಕೆ ತಲುಪುವುದು ಕಷ್ಟ ಸಾಧ್ಯ. ಹೆದ್ದಾರಿಯಲ್ಲಿ ಸಂಚಾರ ಮಾಡುವ ಕೆಎಸ್​ಆರ್​ಟಿಸಿ ಬಸ್​ಗಳು ಅಲ್ಲಿ ಸ್ಟಾಪ್​ ಕೊಡುವುದಿಲ್ಲ, ಹೀಗಾಗಿ ಮಂಡ್ಯ ನಿಲ್ದಾಣದಿಂದ ಜನರನ್ನು ಹತ್ತಿಸಿಕೊಳ್ಳುವುದಿಲ್ಲ. ಇನ್ನು ಕಾರ್ಯಕ್ರಮದ ಸ್ಥಳದಲ್ಲಿ ಬಸ್​ಗಳು ನಿಲ್ಲಿಸುತ್ತವೆ. ಆದರೆ ಮಂಡ್ಯಕ್ಕೆ ಬರುವ ಬಸ್​ಗಳು ಜನರಿಗೆ ಸಿಗ್ತಿಲ್ಲ. ನೇರವಾಗಿ ಮೈಸೂರು, ಮಡಿಕೇರಿಗೆ ಹೋಗುವ ಬಸ್​ಗಳು ಜನರನ್ನು ಹತ್ತಿಸಿಕೊಳ್ತಿವೆ.

ಎರಡನೇ ಸಮಸ್ಯೆ ಎಂದರೆ ಊಟದ ಕೌಂಟರ್​ಗಳನ್ನು ಸಾಕಷ್ಟು ಮಾಡಲಾಗಿದೆ. ಆದರೆ ಅನ್ನ ಇದ್ದರೆ ಸಾಂಬಾರ್​ ಇರಲ್ಲ, ಸಾಂಬಾರ್​ ಇರುವ ಕಡೆ ಅನ್ನ ಇರಲ್ಲ. ಜೋಳದ ರೊಟ್ಟಿ ಹಾಕ್ತಾರೆ, ಆದರೆ ಅದಕ್ಕೆ ಬೇಕಾದ ಪಲ್ಯ ಇರುವುದಿಲ್ಲ. ಅಲ್ಲಿರುವ ಬಾಣಸಿಗರು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೇಲ್ವಿಚಾರಕರ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ತಟ್ಟೆಗೆ ಮುದ್ದೆ ಹಾಕಿದ ಬಳಿಕ ಸಾಂಬಾರ್​ ಇಲ್ಲದೆ ಜನರು ಹೋಗುತ್ತಿದ್ದನ್ನು ಕಣ್ಣಾರೆ ಕಂಡು ಅಯ್ಯೋ ಎನಿಸಿತು. ಇನ್ನು ಸ್ವೀಟ್​ ಏನು ಮಾಡಿಸಿದ್ದರು..? ಯಾರಿಗೆ ಬಡಿಸಿದರು ಅನ್ನೋದು ಗೊತ್ತಾಗಲಿಲ್ಲ. ಒಂದು ಹೋಳಿಗೆ ಸಿಕ್ಕಿತ್ತು. ಆದರೆ ಬೇರೆ ಬೇರೆಯವರ ತಟ್ಟೆಯಲ್ಲಿ ಬಾದುರ್ಷ ಕೂಡ ಕಾಣಿಸಿದಾಗ ಯಾಕೆ ಸರಿಯಾಗಿ ಬಡಿಸ್ತಿಲ್ಲ ಎನಿಸಿತು. ಇನ್ನು ಕೆಲವರ ತಟ್ಟೆಯಲ್ಲಿ ಪಲಾವ್​ ಕೂಡ ಕಂಡೆ..

ಜನರು ಮಾತನಾಡಿಕೊಳ್ತಿದ್ದು ಏನಪ್ಪ ಅಂದ್ರೆ ಮಂಡ್ಯ ನಿಲ್ದಾಣದಿಂದ 15 ನಿಮಿಷಕ್ಕೆ ಒಂದು ಬಸ್ ಬರುತ್ತೆ ಎಂದಿದ್ದರು, ಅದು ಪೇಪರ್​ನಲ್ಲಿ ಬರಿಯೋದಕ್ಕೆ ಮಾತ್ರ ಎಂದು ಮಾತನಾಡಿಕೊಳ್ತಿದ್ರು. ಕಾರ್ಯಕ್ರಮ ಮುಗಿಸಿ ಸಂಜೆ ಬಸ್​ಗಳು ಇಲ್ಲದೆ ಕಾಲ್ನಡಿಗೆಯಲ್ಲಿ ಸಾಗುವಾಗ ನಡೆಯಲಾಗದ ಜನರು ಹಿಡಿಶಾಪ ಹಾಕುತ್ತಿದ್ದರು. ಇನ್ನು ವೇದಿಕೆ ನಿರ್ಮಾಣ, ಮ್ಯೂಸಿಯಂ, ಪುಸ್ತಕ ಮಳಿಗೆ ತಣ್ಣಗಿತ್ತು. ಜರ್ಮನ್​ ಟೆಂಟ್​ಗಳಲ್ಲಿ ಪ್ಯಾನ್​ಗಳನ್ನು ಹಾಕಿದ್ದರು. ಆದರೆ ಊಟದ ಹಾಲ್​ನಲ್ಲಿ ಶೀಟ್​ಗಳನ್ನು ಹಾಕಿದ್ದರು, ಜನರು ಬಿಸಿಲ ತಾಪದಲ್ಲಿ ನಿಲ್ಲಲಾಗದೆ ಒದ್ದಾಡುತ್ತಿದ್ದರು. ಸೂಕ್ತ ಮಾರ್ಗದರ್ಶನ ಇಲ್ಲದೆ ಮೊದಲ ನಾಲ್ಕೈದು ಕ್ಯೂಗಳಲ್ಲಿ ಜನರ ನೂಕಾಟ.. ತಳ್ಳಾಟ ಮಿತಿಮೀರಿತ್ತು. ಯಾಕಾದ್ರೂ ಸಾಹಿ​ತ್ಯ ಸಮ್ಮೇಳನಕ್ಕೆ ಬಂದೆವು ಎನಿಸುವಂತಿತ್ತು. ನಾಳೆ ಶನಿವಾರ, ನಾಡಿದ್ದು ಭಾನುವಾರ ಜನರು ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಕನಿಷ್ಠಪಕ್ಷ ಬರುವ ಸಾಹಿತ್ಯ ಪ್ರಿಯರಿಗೆ ಉತ್ತಮ ಊಟದ ವ್ಯವಸ್ಥೆ, ಮಂಡ್ಯ ಬಸ್​ ನಿಲ್ದಾಣದಿಂದ, ರೈಲು ನಿಲ್ದಾಣದಿಂದ ಬಸ್​ಗಳ ವ್ಯವಸ್ಥೆ ಮಾಡಿದರೆ ಉತ್ತಮ. ನೀವು ಉಚಿತ ಕೊಡುವ ಅವಶ್ಯಕತೆಯಿಲ್ಲ, ಟಿಕೆಟ್​ ಪಡೆದಾದರೂ ಸಾರಿಗೆ ವ್ಯವಸ್ಥೆ ಮಾಡಿ, ಇಲ್ಲದಿದ್ರೆ ಆಟೋ, ಕಾರು, ಟೆಂಪೋಗಳಲ್ಲಿ 50 ರೂಪಾಯಿ ಕೊಟ್ಟರೂ ಜನರು ಅಪಾಯಕಾರಿಯಾಗಿ ಕುಳಿತು ಹೋಗುತ್ತಿದ್ದಾರೆ.

Tags: BJPChaluvarayaswamyCongress PartyDKShivakumarKannada Sahithya SammelanaNirmalananda SwamijisiddaramaiahUT khaderಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮಡಿಕೇರಿ:ರೈತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

Next Post

C.T ರವಿಗೆ ಹೈಕೋರ್ಟ್​ನಿಂದ ಜಾಮೀನು.. ಸರ್ಕಾರಕ್ಕೆ ಮುಜುಗರನಾ..?

Related Posts

ಬ್ಯಾನರ್ ಗಲಾಟೆ ಬೆನ್ನಲ್ಲೆ ಮಾಡೆಲ್ ಹೌಸ್ ಗೆ ಬೆಂಕಿ
ಇದೀಗ

ಬ್ಯಾನರ್ ಗಲಾಟೆ ಬೆನ್ನಲ್ಲೆ ಮಾಡೆಲ್ ಹೌಸ್ ಗೆ ಬೆಂಕಿ

by ಪ್ರತಿಧ್ವನಿ
January 24, 2026
0

ಬಳ್ಳಾರಿ: ನಗರದಲ್ಲಿ ನಡೆದಿದ್ದ ಬ್ಯಾನರ್ ಗಲಾಟೆ ಕಿಚ್ಚು ಆರುವ ಮುನ್ನವೇ ಮತ್ತೊಂದು ಕಿಚ್ಚು ಹೊತ್ತುಕೊಂಡಿದೆ. ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದ ಸೇರಿದ ಜಿ ಸ್ಕೈರ್ ಲೇಔಟ್​ನಲ್ಲಿರುವ...

Read moreDetails
ಬೆದರಿಕೆ ಹಾಕಿ ಬೆಂಕಿ ಹಚ್ಚಿತಾ ಕಾಂಗ್ರೆಸ್‌..? : ಹೊತ್ತಿ ಉರಿದ ಜನಾರ್ದನ ರೆಡ್ಡಿ ಮಾಡೆಲ್‌ ಹೌಸ್..!

ಬೆದರಿಕೆ ಹಾಕಿ ಬೆಂಕಿ ಹಚ್ಚಿತಾ ಕಾಂಗ್ರೆಸ್‌..? : ಹೊತ್ತಿ ಉರಿದ ಜನಾರ್ದನ ರೆಡ್ಡಿ ಮಾಡೆಲ್‌ ಹೌಸ್..!

January 24, 2026
ಆ್ಯಸಿಡ್ ಬೆದರಿಕೆ: ಮತ್ತೊಮ್ಮೆ ಪೊಲೀಸ್ ಮೆಟ್ಟಿಲೇರಿದ ಅಮೃತಾಗೌಡ..!!

ಆ್ಯಸಿಡ್ ಬೆದರಿಕೆ: ಮತ್ತೊಮ್ಮೆ ಪೊಲೀಸ್ ಮೆಟ್ಟಿಲೇರಿದ ಅಮೃತಾಗೌಡ..!!

January 24, 2026
Kumaraswamy:ಹೆಚ್‌ಡಿಕೆ ಎಂಬ ಗೊಂದಲದ ಗೂಡು: ಅವಸಾನದ ಅಂಚಿನಲ್ಲಿ ಜೆಡಿಎಸ್‌ ಹೆಮ್ಮರ!

Kumaraswamy:ಹೆಚ್‌ಡಿಕೆ ಎಂಬ ಗೊಂದಲದ ಗೂಡು: ಅವಸಾನದ ಅಂಚಿನಲ್ಲಿ ಜೆಡಿಎಸ್‌ ಹೆಮ್ಮರ!

January 24, 2026
Daily Horoscope: ಇಂದು ಸರ್ವಾರ್ಥ ಸಿದ್ಧಿ ಯೋಗ ಇರುವ ರಾಶಿಗಳಿವು..!

Daily Horoscope: ಇಂದು ಸರ್ವಾರ್ಥ ಸಿದ್ಧಿ ಯೋಗ ಇರುವ ರಾಶಿಗಳಿವು..!

January 24, 2026
Next Post

C.T ರವಿಗೆ ಹೈಕೋರ್ಟ್​ನಿಂದ ಜಾಮೀನು.. ಸರ್ಕಾರಕ್ಕೆ ಮುಜುಗರನಾ..?

Recent News

ಆ್ಯಸಿಡ್ ಬೆದರಿಕೆ: ಮತ್ತೊಮ್ಮೆ ಪೊಲೀಸ್ ಮೆಟ್ಟಿಲೇರಿದ ಅಮೃತಾಗೌಡ..!!
Top Story

ಆ್ಯಸಿಡ್ ಬೆದರಿಕೆ: ಮತ್ತೊಮ್ಮೆ ಪೊಲೀಸ್ ಮೆಟ್ಟಿಲೇರಿದ ಅಮೃತಾಗೌಡ..!!

by ಪ್ರತಿಧ್ವನಿ
January 24, 2026
Kumaraswamy:ಹೆಚ್‌ಡಿಕೆ ಎಂಬ ಗೊಂದಲದ ಗೂಡು: ಅವಸಾನದ ಅಂಚಿನಲ್ಲಿ ಜೆಡಿಎಸ್‌ ಹೆಮ್ಮರ!
Top Story

Kumaraswamy:ಹೆಚ್‌ಡಿಕೆ ಎಂಬ ಗೊಂದಲದ ಗೂಡು: ಅವಸಾನದ ಅಂಚಿನಲ್ಲಿ ಜೆಡಿಎಸ್‌ ಹೆಮ್ಮರ!

by Shivakumar
January 24, 2026
Daily Horoscope: ಇಂದು ಸರ್ವಾರ್ಥ ಸಿದ್ಧಿ ಯೋಗ ಇರುವ ರಾಶಿಗಳಿವು..!
Top Story

Daily Horoscope: ಇಂದು ಸರ್ವಾರ್ಥ ಸಿದ್ಧಿ ಯೋಗ ಇರುವ ರಾಶಿಗಳಿವು..!

by ಪ್ರತಿಧ್ವನಿ
January 24, 2026
ಅರ್ಧಕ್ಕೆ ನಿಂತ ಕರ್ನಾಟಕದ ʼಮಿಲೆಟ್ಸ್ ಟು ಮೈಕ್ರೋಚಿಪ್ʼ ಕನಸು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಾರತಮ್ಯ?
Top Story

ಅರ್ಧಕ್ಕೆ ನಿಂತ ಕರ್ನಾಟಕದ ʼಮಿಲೆಟ್ಸ್ ಟು ಮೈಕ್ರೋಚಿಪ್ʼ ಕನಸು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ತಾರತಮ್ಯ?

by ಪ್ರತಿಧ್ವನಿ
January 23, 2026
ನಗರ ಜೀವನದ ವ್ಯಾಮೋಹ: ಮದುವೆಯಾದ ಎರಡೇ ತಿಂಗಳಿಗೆ ಯುವತಿ ಸಾ**
Top Story

ನಗರ ಜೀವನದ ವ್ಯಾಮೋಹ: ಮದುವೆಯಾದ ಎರಡೇ ತಿಂಗಳಿಗೆ ಯುವತಿ ಸಾ**

by Rachita
January 23, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬ್ಯಾನರ್ ಗಲಾಟೆ ಬೆನ್ನಲ್ಲೆ ಮಾಡೆಲ್ ಹೌಸ್ ಗೆ ಬೆಂಕಿ

ಬ್ಯಾನರ್ ಗಲಾಟೆ ಬೆನ್ನಲ್ಲೆ ಮಾಡೆಲ್ ಹೌಸ್ ಗೆ ಬೆಂಕಿ

January 24, 2026
ಬೆದರಿಕೆ ಹಾಕಿ ಬೆಂಕಿ ಹಚ್ಚಿತಾ ಕಾಂಗ್ರೆಸ್‌..? : ಹೊತ್ತಿ ಉರಿದ ಜನಾರ್ದನ ರೆಡ್ಡಿ ಮಾಡೆಲ್‌ ಹೌಸ್..!

ಬೆದರಿಕೆ ಹಾಕಿ ಬೆಂಕಿ ಹಚ್ಚಿತಾ ಕಾಂಗ್ರೆಸ್‌..? : ಹೊತ್ತಿ ಉರಿದ ಜನಾರ್ದನ ರೆಡ್ಡಿ ಮಾಡೆಲ್‌ ಹೌಸ್..!

January 24, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada