• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಸಬ್ಕಾ ಸಾಥ್ˌ ಸಿರ್ಫ್ ದೋ ಕಾ ವಿಕಾಸ್

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
May 26, 2023
in ಅಂಕಣ
0
ಸಬ್ಕಾ ಸಾಥ್ˌ ಸಿರ್ಫ್ ದೋ ಕಾ ವಿಕಾಸ್
Share on WhatsAppShare on FacebookShare on Telegram

ಸಿಂಹಾಸನದಲ್ಲಿ ಗಜ ಗಾಂಭೀರ್ಯದಿಂದ ವಿರಾಜಮಾನ್ ಮಹಾರಾಜ ತನ್ನ ಮಂತ್ರಿಯನ್ನು ಕುರಿತು ಹೀಗೆ ಪ್ರಶ್ನಿಸುತ್ತಾನೆ:

ADVERTISEMENT

ಮಹಾರಾಜಾ: ರಾಜ್ಯದಲ್ಲಿ ಎಲ್ಲರೂ ಸೌಖ್ಯವೇ ಮಂತ್ರಿ?

ಮಂತ್ರಿ: ಎಲ್ಲಾ ಜನರು ಸುಖವಾಗಿದ್ದಾರೆ ಪ್ರಭು. ಪ್ರತಿಯೊಬ್ಬ ನಾಗರಿಕನು ಗರಿಷ್ಠ ತೆರಿಗೆ ಪಾವತಿಸಿ ಕನಿಷ್ಠ ಗಾಳಿ ಉಸಿರಾಡುತ್ತಿದ್ದಾನೆ.

ಮಹಾರಾಜಾ: ಮಂತ್ರಿ ˌ ಜನರು ಮೊದಲು ತೆರಿಗೆ ಕಟ್ಟುತ್ತಿದ್ದಾರೊ ಅಥವ ಮೊಡಲು ಉಸಿರಾಡುತ್ತಿದ್ದಾರೊ?

ಮಂತ್ರಿ: ಇಲ್ಲ ಮಹಾರಾಜಾˌ (ನಗುತ್ತ) ಜನರು ಮೊದಲು ತೆರಿಗೆ ಕಟ್ಟಿ ಆಮೇಲೆ ಉಸಿರಾಡುತ್ತಿದ್ದಾರೆ. ನಿಮ್ಮ ರಾಜ್ಯದಲ್ಲಿ ಮೊದಲು ಉಸಿರಾಡುವುದು ಸಾಧ್ಯವೇ ಪ್ರಭು!? (ಸೆಕ್ಯೂರಿಟಿ ಕಡೆಗೆ ಕೈಮಾಡಿ) ನಿಮ್ಮ ರಾಜ್ಯದಲ್ಲಿ ಈ ರೀತಿಯ ಜನರು ಇರುವಾಗ ಜನರು ತೆರಿಗೆ ಕಟ್ಟದೆ ಉಸಿರಾಡುವುದು ಹೇಗೆ ಸಾಧ್ಯ ಪ್ರಭು?

ಮಹಾರಾಜಾ: ಈ ರೀತಿಯ ಜನರು ಅಂದರೇನು ಮಂತ್ರಿ?

ಮಂತ್ರಿ: ಮಹಾರಾಜಾˌ ಈ ಸೆಕ್ಯೂರಿಟಿ ಗಾರ್ಡ್ ನನ್ನು ಸೆಕ್ಯೂರಿಟಿ ಎಡ್ವೈಜರ್ ಎಂದು ಕರೆಯುವ ತಮ್ಮ ಅದ್ಭುತ ಕಲೆ ಜಗತ್ತಿನಲ್ಲಿ ಯಾರಲ್ಲೂ ಇಲ್ಲ. ಸಣ್ಣ ಕೆಲಸˌ ಹುದ್ದೆಯ ಹೆಸರು ದೊಡ್ಡದು, ಆತ ಮುಂದೆಂದೂ ಬಡ್ತಿ ˌ ಇನ್ಕ್ರಿಮೆಂಟ್ ಕೇಳಲು ಸಾಧ್ಯವೇಯಿಲ್ಲ.

ಮಹಾರಾಜಾ: ಮಂತ್ರಿ, ನಿಮ್ಮೊಳಗೆ ಆ ಕೌಟಿಲ್ಯನಿಗಿಂತ ಶ್ರೇಷ್ಠ ಅರ್ಥಶಾಸ್ತ್ರಜ್ಞನಿದ್ದಾನೆ ನೋಡಿ. ಅಂದ್ಹಾಗೆˌ ರಾಜ್ಯದಲ್ಲಿ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಮಂತ್ರಿ?

ಮಂತ್ರಿ: ಮಾಧ್ಯಮಗಳು ಬಹಳ ಚನ್ನಾಗಿ ಕೆಲಸ ಮಾಡ್ತಿವೆ ಪ್ರಭು. ಅವು ಸತ್ಯವನ್ನೇ ಪ್ರಸಾರ ಮಾಡ್ತಿವೆ. ಅವುಗಳನ್ನು ನೀವು ಶಂಖಗಳಾಗಿ ಪರಿವರ್ತಿಸಿದ್ದಿರಿ. ನೀವು ಊದಿದಾಗಲೇ ಅವುಗಳ ಧ್ವನಿ ಹೊರಡುತ್ತದೆ ಪ್ರಭು.

ಮಹಾರಾಜಾ: ದೇಶದ ಆರ್ಥಿಕತೆ ಹೇಗಿದೆ ಮಂತ್ರಿ?

ಮಂತ್ರಿ: ದೇಶದ ಆರ್ಥಿಕತೆಯ ಸಂಕೇತವಾಗಿರುವ ಮತ್ತು ತಮ್ಮನ್ನು ರಾಜ ಸಿಂಹಾಸನದ ಮೇಲೆ ತಂದು ಪ್ರತಿಷ್ಠಾಪಿಸಿರುವ ಇಬ್ಬರು ಕುಬೇರೋದ್ಯಮಿಗಳ ಆರ್ಥಿಕ ಸ್ಥಿತಿ ದ್ವಿಗುಣವಾಗಿದೆ ಪ್ರಭು.

ಮಹಾರಾಜಾ: (ಸಿಟ್ಟಿನಿಂದ ತನ್ನ ಬಿಳಿ ಗಡ್ಡದ ಮೇಲೆ ಕೈಯಾಡಿಸುತ್ತ) ಕೇವಲ ದ್ವಿಗುಣವಾಗಿದೆಯೆ ಮಂತ್ರಿ? ನಾನು ಅಧಿಕಾರದ ಗದ್ದುಗೆ ಏರಿದರೆ ಅವರ ಆರ್ಥಿಕತೆಯನ್ನು ಹತ್ತು ಪಟ್ಟು ಹೆಚ್ಚಿಸುತ್ತೇನೆಂದು ಆಶ್ವಾಸನೆ ಕೊಟ್ಟಿದ್ದೇನೆ.

ಮಂತ್ರಿ: ಆದರೆ ಮಹಾರಾಜಾˌ ತಮ್ಮ ಶರವೇಗದ ಆರ್ಥಿಕ ಪ್ರಗತಿಯ ಪಥದಲ್ಲಿ ದೇಶದ ರೈತರು ಟ್ರ್ಯಾಕ್ಟರ್ ಗಳನ್ನು ತಂದು ನಿಲ್ಲಿಸದಿದ್ದರೆ ದೇಶದ ಆ ಇಬ್ಬರು ಕುಬೇರರ ಆರ್ಥಿಕತೆ ಈಗಾಗಲೇ ಹತ್ತು ಪಟ್ಟು ಹೆಚ್ಚುತ್ತಿತ್ತು.

ಮಹಾರಾಜಾ: ಅದು ಹೇಗೆ ಮಂತ್ರಿ?

ಮಂತ್ರಿ: ಪ್ರಭುˌ ಕೃಷಿ ಮಸೂದೆ ಅಂಗಿಕಾರಗೊಳ್ಳುವ ಮೊದಲೆ ಆ ಇಬ್ಬರು ಕುಬೇರೋದ್ಯಮಿಗಳು ಅಸಂಖ್ಯಾತ ಗೋದಾಮುಗಳನ್ನು ಕಟ್ಟಿಸಿ ರಾಜ್ಯದ ಆಹಾರ-ಧಾನ್ಯ ಮಾರುಕಟ್ಟೆ ವಶಪಡಿಸಿಕೊಳ್ಳಲು ಸಿದ್ದಗೊಂಡಿದ್ದರು. ಆ ರಾಜದ್ರೋಹಿ ರೈತರು ನಿಮ್ಮ ಯೋಜನೆಗೆ ಎಳ್ಳು-ನೀರು ಬಿಟ್ಟರು.

ಮಹಾರಾಜಾ: ಇದರಿಂದ ನನ್ನ ಭಕ್ತರು ನನ್ನ ಮೇಲಿಟ್ಟಿರುವ ಶ್ರದ್ಧೆಗೆ ಕೊರತೆಯಾಗಿದೆಯೆ ಮಂತ್ರಿ?

ಮಂತ್ರಿ: ಇಲ್ಲ ಪ್ರಭು. ಭಕ್ತರು ತಮ್ಮ ಮೇಲಿಟ್ಟಿರುವ ಶ್ರದ್ಧೆಯಲ್ಲಿ ಸಾಸಿವೆ ಕಾಳಿನಷ್ಟೂ ಕಡಿಮೆಯಾಗಿಲ್ಲ. ಏಕೆಂದರೆˌ ೧೦೦೦ ರೂಪಾಯಿ ನೋಟು ನಿಷೇಧಿಸಿ ೨೦೦೦ ರೂಪಾಯಿ ನೋಟು ಜಾರಿಗೆ ತರುವ ಮೂಲಕ ಕಪ್ಪು ಹಣ ಕೊನೆಗೊಳಿಸಬಹುದೆಂದು ಹಾಗು ನೀವೇ ಪರಿಚಯಿಸಿದ ೨೦೦೦ ರೂಪಾಯಿ ನೋಟನ್ನು ನೀವೇ ನಿಷೇಧಿಸಿˌ ಅದಕ್ಕೂ ಕಪ್ಪುಹಣ ಕೊನೆಗೊಳಿಸಲೆಂದೇ ನೋಟನ್ನು ನಿಷೇಧಿಸಿಲಾಗುತ್ತಿದೆ ಎಂದು ಭಕ್ತರ ತಲೆಯಲ್ಲಿ ಗಿಡ ನೆಟ್ಟವರು ತಮ್ಮನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ ಪ್ರಭು.

ಮಹಾರಾಜಾ: (ಟಿವಿ ನೋಡುತ್ತ) ಇದೇನಿದು ಮಂತ್ರಿ ˌ ಒಬ್ಬ ಯುವಕ ಚಪ್ಪಲಿಗಳನ್ನು ಕೊರಳಿನಲ್ಲಿ ನೇತಾಕಿಕೊಂಡು ಬರಿಗಾಲಲ್ಲಿ ರಸ್ತೆಯಲ್ಲಿ ಓಡುತ್ತಿರುವುದನ್ನು ಟಿವಿಯವರು ಏಕೆ ತೋರಿಸುತ್ತಿದ್ದಾರೆ? ನನ್ನನ್ನು ಬಿಟ್ಟು ಟಿವಿಯಲ್ಲಿ ಬೆರೆಯವರನ್ನು ತೋರಿಸಬಾರದೆಂದು ಮಾಧ್ಯಮದವರಿಗೆ ನೀವು ತಿಳಿಸಿಲ್ಲವೆ?

ಮಂತ್ರಿ: ಆತ ಒಬ್ಬ ಯುವ ಸೆಲೆಬ್ರಿಟಿ ಪ್ರಭು. ಯಾವುದೊ ಉತ್ಪನ್ನಗಳ ಜಾಹಿರಾತಿನಲ್ಲಿ ನಟಿಸಿದ್ದಾನೆ. ಆತ ತಾನು ಯಾವತ್ತೂ ಉಪಯೋಗಿಸದ ವಸ್ತುಗಳ ಕುರಿತೇ ಹೆಚ್ಚು ಜಾಹಿರಾತು ನೀಡ್ತಾನೆ. ನೀವು ಹೇಗೆ ನಿಮ್ಮ ಭಾಷಣದಲ್ಲಿ ಸತ್ಯವನ್ನು ಪ್ರತಿಪಾದನೆ ಮಾಡ್ತಿರಿ ಮತ್ತು ಅದನ್ನು ಯಾವತ್ತು ಪಾಲಿಸುವುದಿಲ್ಲವೊ ಥೇಟ್ ಅದೇ ರೀತಿ ಆ ಸೆಲೆಬ್ರಿಟಿ ಪ್ರಭು!

ಮಹಾರಾಜ: ಅರ್ಥವಾಯಿತು ಬಿಡಿ ಮಂತ್ರಿ!

~ಡಾ. ಜೆ ಎಸ್ ಪಾಟೀಲ.

Tags: BJPCentral Governmentnew ParliamentNote ChangeOld ParliamentPrime Minister ModiRs 2000 Ban
Previous Post

ಇದೇ ರಿಯಲ್ ಕೇರಳ ಸ್ಟೋರಿ ಎಂದ ಪ್ರೇಕ್ಷಕ.! 2018 ಸಿನಿಮಾ ದಾಖಲೆಯ ಗಳಿಕೆ..!

Next Post

ಈ ಸರ್ಕಾರ ನ್ಯಾಯಯುತ ಆಳ್ವಿಕೆ ನೀಡುತ್ತದೆಯೇ ?..ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಕೆಲವು ಜನವಿರೋಧಿ ಕಾಯ್ದೆಗಳನ್ನೂ ರದ್ದುಪಡಿಸಬೇಕಿದೆ

Related Posts

Top Story

ಬಹು ನಿರೀಕ್ಷಿತ “45” ಚಿತ್ರದ ಹಾಡಿಗೆ ಉಗಾಂಡದಿಂದ ಬಂದ ನೃತ್ಯಗಾರರು..

by ಪ್ರತಿಧ್ವನಿ
June 13, 2025
0

ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ....

Read moreDetails

ಕರ್ನಾಟಕದ AI-ಸಿದ್ಧ ಭವಿಷ್ಯವನ್ನು ಎತ್ತಿ ತೋರಿಸಿದ ಪ್ರಿಯಾಂಕ್ ಖರ್ಗೆ

June 13, 2025

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

June 12, 2025

Bangalore Stampede: ಬಿಜೆಪಿಗರು ಐಸಿಸಿ ಅಧ್ಯಕ್ಷ ಜಯ್ ಶಾ ವಿರುದ್ಧ ಹೋರಾಟ ಮಾಡಲಿ : ಬಿ.ಕೆ.ಹರಿಪ್ರಸಾದ್..!!

June 11, 2025
ಹಿಂದೂ ವಿರೋಧಿಯಾಗಿದ್ದ ಸಿದ್ದರಾಮಯ್ಯ ಈಗ ಪೊಲೀಸ್‌ ಇಲಾಖೆ ವಿರೋಧಿಯಾಗಿದ್ದಾರೆ.: ಪ್ರತಾಪ್‌ ಸಿಂಹ..

ಹಿಂದೂ ವಿರೋಧಿಯಾಗಿದ್ದ ಸಿದ್ದರಾಮಯ್ಯ ಈಗ ಪೊಲೀಸ್‌ ಇಲಾಖೆ ವಿರೋಧಿಯಾಗಿದ್ದಾರೆ.: ಪ್ರತಾಪ್‌ ಸಿಂಹ..

June 9, 2025
Next Post
ಈ ಸರ್ಕಾರ ನ್ಯಾಯಯುತ ಆಳ್ವಿಕೆ ನೀಡುತ್ತದೆಯೇ ?..ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಕೆಲವು ಜನವಿರೋಧಿ ಕಾಯ್ದೆಗಳನ್ನೂ ರದ್ದುಪಡಿಸಬೇಕಿದೆ

ಈ ಸರ್ಕಾರ ನ್ಯಾಯಯುತ ಆಳ್ವಿಕೆ ನೀಡುತ್ತದೆಯೇ ?..ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಕೆಲವು ಜನವಿರೋಧಿ ಕಾಯ್ದೆಗಳನ್ನೂ ರದ್ದುಪಡಿಸಬೇಕಿದೆ

Please login to join discussion

Recent News

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada