ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ ಒಂದೂವರೆ ವರ್ಷ ಆಗುತ್ತಿದೆ. ಆದರೆ ಇನ್ನೂ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಆದರ ನಡುವೆ ರಷ್ಯಾ ವಿರುದ್ಧ ತಿರುಗಿ ಬಿದ್ದಿದ್ದ ರಷ್ಯಾದ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್ನ ಮುಖ್ಯಸ್ಥ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾನೆ. ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಸಡ್ಡು ಹೊಡೆದಿದ್ದ ಪ್ರಿಗೊಜಿನ್, ರಷ್ಯಾ ಸೇನೆ ವಿರುದ್ಧ ತೊಡೆ ತಟ್ಟಿ ಯುದ್ಧ ಶುರು ಮಾಡಿತ್ತು. ಇದೀಗ ವಿಮಾನ ದುರಂತದಲ್ಲಿ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಪ್ರಿಗೊಜಿನ್ ಸಾವನ್ನಪ್ಪಿದ್ದು ರಷ್ಯಾಗೆ ಎದುರಾಗಿದ್ದ ಆಂತರಿಕ ಯುದ್ಧ ಭೀತಿ ಶುರು ಆಗಿದೆ.
ರಷ್ಯಾ ತಂತ್ರಗಾರಿಕೆಯಿಂದ ಪ್ರಿಗೊಜಿನ್ನನ್ನು ಮುಗಿಸಿತೇ..?
2023ರ ಜೂನ್ನಲ್ಲಿ ವ್ಯಾಗ್ನರ್ ಖಾಸಗಿ ಸೇನಾಪಡೆ ಮುಖಸ್ಥ ಯೆವೆಗೆನ್ಸಿ ಪ್ರಿಗೊಜಿನ್ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಬಂಡೆದ್ದಿದ್ದ. ಒಂದು ಕಾಲದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಪ್ತನಾಗಿದ್ದ ಪ್ರಿಗೊಜಿನ್, ಅಧ್ಯಕ್ಷರ ಖಾಸಗಿ ಅಂಗರಕ್ಷಕ ಪಡೆಯ ಮುಖ್ಯಸ್ಥನಾಗಿದ್ದ. ಆದರೆ ಅಧ್ಯಕ್ಷ ಪುಟಿನ್ ವಿರುದ್ಧ ಹಾಗು ರಷ್ಯಾ ಸೇನೆ ವಿರುದ್ಧವೇ ಪ್ರಿಗೊಜಿನ್ ತಿರುಗಿ ಬಿದ್ದು ಯುದ್ಧ ಸಾರಿದ್ದನ್ನು. ಬಳಿಕ ಶಾಂತಿ ಸಂಧಾನ ನಡೆದ ಬಳಿಕ ಬಂಡಾಯ ಶಮನ ಆಗಿತ್ತು. ಇದಾಗಿ ಮೂರೇ ತಿಂಗಳಲ್ಲಿ ಪ್ರಿಗೊಜಿನ್ ಇದ್ದ ವಿಮಾನ ಪತನ ಆಗಿದೆ. ಪ್ರಿಗೊಜಿನ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ದುರುಂತದ ಬಗ್ಗೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಇದೀಗ ಮತ್ತೆ ಖಾಸಗಿ ಸೇನಾಪಡೆ ತಿರುಗಿ ಬೀಳುತ್ತಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ವಿಮಾನ ದುರಂತದಲ್ಲಿ 10 ಪ್ರಯಾಣಿಕರ ದುರ್ಮರಣ..!
ಖಾಸಗಿ ವಿಮಾನ ಪತನ ಆಗಿದ್ದರಿಂದ ಒಟ್ಟು 10 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ರಷ್ಯಾದ ಟಿವೆರ್ ಪ್ರಾಂತ್ಯದಲ್ಲಿ ಖಾಸಗಿ ಜೆಟ್ ಪತನಗೊಂಡಿದೆ. ಪ್ರಿಗೊಜಿನ್ ಇದ್ದ ವಿಮಾನ ಪತನದ ಹಿಂದೆ ಹತ್ತಾರು ಅನುಮಾನಗಳು ಶುರುವಾಗಿದೆ. ಮಾಸ್ಕೋನಿಂದ ಸೇಂಟ್ ಪೀಟರ್ಸ್ಬರ್ಗ್ಗೆ ಹೋಗುವಾಗ ಈ ದುರಂತ ನಡೆದಿದೆ ಎಂದು ರಷ್ಯಾದ The Associated Press reports ಮಾಹಿತಿ ನೀಡಿದೆ. ವಿಮಾನ ನಭಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡಿತು. ಈ ದುರಂತ ಗ್ರಾಮೀಣ ಪ್ರದೇಶದಲ್ಲಿ ನಡೆದಿದ್ದು, ರಷ್ಯಾ ಸರ್ಕಾರದ ಸ್ವಯಂಕೃತ ದುರಂತವೇ..? ಅನ್ನೋ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪ್ರಿಗೊಜಿನ್ ವಿಮಾನದಲ್ಲೇ ಇರಲಿಲ್ಲ ಅನ್ನೋ ಶಂಕೆ..!
ವ್ಯಾಗ್ನರ್ ಖಾಸಗಿ ಸೇನಾಪಡೆ ಮುಖಸ್ಥ ಯೆವೆಗೆನ್ಸಿ ಪ್ರಿಗೊಜಿನ್ ಸಾವನ್ನಪ್ಪಿರುವ ಬಗ್ಗೆ ವರದಿ ಆಗುತ್ತಿರುವ ಜೊತೆ ಜೊತೆಗೆ ರಷ್ಯಾ ಮಾಧ್ಯಮಗಳು ಖಾಸಗಿ ಸೇನಾಪಡೆ ಮುಖಸ್ಥ ಪ್ರಿಗೊಜಿನ್ ವಿಮಾನದಲ್ಲಿ ಇರಲಿಲ್ಲ ಅನ್ನೋ ವರದಿಯೂ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಅಪಘಾತದ ವಿಡಿಯೋ ಹರಿದಾಡುತ್ತಿದ್ದು, ಅದರಲ್ಲಿ ಒಂದು ದೇಹ ಸುಟ್ಟುಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ. plane number RA-02795 ಬುಧವಾರ ಸಂಜೆ 6:11ರ ವೇಳೆಗೆ ರಾಡಾರ್ನಿಂದ ಸಂಪರ್ಕ ಕಳೆದುಕೊಂಡು ದುರಂತಕ್ಕೀಡಾಗಿದೆ. ರಷ್ಯಾದಲ್ಲಿ ಈ ಬಗ್ಗೆ ತತ್ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸೇನಾಪಡೆ ಸೂಚನೆ ನೀಡಿದೆ. ಆದರೆ ಈ ದುರಂತಕ್ಕೆ ರಷ್ಯಾ ಮಾಡಿದ ತಂತ್ರವೇ ಕಾರಣ ಎನ್ನುವುದಾದರೆ ಆಂತರಿಕ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗ್ತಿದೆ.
ಕೃಷ್ಣಮಣಿ