“ತಕ್ಷಣ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ” ಎಂದು ರಷ್ಯಾ ಮಂಗಳವಾರ ಉಕ್ರೇನಿಯನ್ ಪಡೆಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಹೌದು, ರಷ್ಯಾ ಮಂಗಳವಾರ ಉಕ್ರೇನಿಯನ್ ಪಡೆಗಳಿಗೆ “ತಕ್ಷಣ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು” ಕರೆ ನೀಡಿದೆ ಮತ್ತು ಮಾರಿಯುಪೋಲ್ನ ಡಿಫೆಂಡರ್ಸ್ ತಮ್ಮ ಪ್ರತಿರೋಧವನ್ನು ನೊಲ್ಲಿಸುವಂತೆ ಕರೆ ನೀಡುತ್ತು ಆದರೆ ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸಲಹೆಗಾರ ಓಲೆಕ್ಸಿ ಅರೆಸ್ಟೋವಿಚ್, ಕೊನೆಯ ಕ್ಷಣದವರೆಗೂ ಪ್ರತಿರೋಧವನ್ನು ಹೊಡ್ಡತ್ತೇವೆ ಎಂಬ ಪ್ರತಿಜ್ಞೆ ಮಾಡಿದ ಬೆನ್ಬಲೇ ಈ ಬೆಳವಣಿಕೆ ಕಂಡಿದೆ.
ರಷ್ಯಾದ ರಕ್ಷಣಾ ಸಚಿವಾಲಯ, “ಯೋಧರಿಗೆ ತಮ್ಮ ಪ್ರಜ್ಞಾಶೂನ್ಯ ಪ್ರತಿರೋಧವನ್ನು ನಿಲ್ಲಿಸಲು ಅನುಗುಣವಾದ ಆದೇಶಗಳನ್ನು ನೀಡಲು” ಕೈವ್ಗೆ ಕರೆ ನೀಡಿತು, ಮಾರಿಯುಪೋಲ್ನ ಯೋಧರು ಮಧ್ಯಾಹ್ನದಿಂದ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ “ಉಳಿವಿನ ಖಾತರಿ” ಇಲ್ಲದಿದ್ದರೇ ಹೊಡೆದುರುಳಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಪಶ್ಚಿಮ ಉಕ್ರೇನಿನ ಬೃಹತ್ ನಗರಗಳ ಮೇಲೆ ರಷ್ಯಾ ತನ್ನ ಕ್ಷಿಪಣಿ ಮತ್ತು ಶೆಲ್ ದಾಳಿಯನ್ನು ಮತ್ತಷ್ಟುತೀವ್ರಗೊಳಿಸಿದೆ. ಸೋಮವಾರ ಉಕ್ರೇನ್ನ ಪ್ರಮುಖ ನಗರ ಲಿವಿವ್ ಗುರಿಯಾಗಿಸಿಕೊಂಡು ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ರಷ್ಯಾ ಪಡೆಗಳು ನಾಗರಿಕರನ್ನು ಸ್ಥಳಾಂತರಿಸುವ ಕಾರಿಡಾರ್ಗಳನ್ನು ಗುರಿಯಾಗಿಸಿಕೊಂಡಿವೆ. ಹಾಗಾಗಿ 2ನೇ ದಿನದ ಸ್ಥಳಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.
ಶುಕ್ರವಾರ ಸಿಎನ್ಎನ್ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಡೊನ್ಬಾಸ್ ಪ್ರದೇಶವನ್ನ ವಶಪಡಿಸಿಕೊಳ್ಳದಂತೆ ಉಕ್ರೇನ್ ಪಡೆ ರಷ್ಯಾ ಮಿಲಿಟರಿಯೊಂದಿಗೆ ಹೋರಾಟ ಮಾಡುತ್ತದೆ. ಎಂದಿಗೂ ಕೂಡ ಉಕ್ರೇನ್ನ ಪೂರ್ವ ಭಾಗದಲ್ಲಿರುವ ಯಾವುದೇ ಪ್ರದೇಶವನ್ನು ರಷ್ಯಾಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಯುದ್ಧ ಅಂತ್ಯವಾಗುವವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇವೆ. ಈವರೆಗೂ ಉಕ್ರೇನ್ ಪೂರ್ವ ಭಾಗದಲ್ಲಿರುವ ಡೊನ್ಟೆಸ್ಕ್, ಡೊನ್ಬಾಸ್, ಲುಹಾನ್ಸ್ಕ್ ದಲ್ಲಿ ರಷ್ಯಾ ಪಡೆಯನ್ನ ತಡೆಯುವಲ್ಲಿ ನಮ್ಮ ಉಕ್ರೇನಿಯನ್ ಸೇನೆ ನಿರಂತರವಾಗಿ ಕಾರ್ಯನ್ಮೋಖವಾಗಿದೆ. ಸದ್ಯ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧದ ನಿಯಮಗಳನ್ನ ಧಿಕ್ಕರಿಸಿದ್ದಲ್ಲದೆ ಈ ಯುದ್ಧವನ್ನ ವಿರೋಧಿಸಿ ತನ್ನ ಮಿತ್ರ ರಾಷ್ಟ್ರಗಳೇ ರಷ್ಯಾ ಜೊತೆ ಇದ್ದ ವ್ಯಾಪಾರ ವಹಿವಾಟನ್ನ ನಿರ್ಬಂಧಿಸಿದ್ದರೂ ಕೂಡ ಪುಟಿನ್ ಮಾತ್ರ ಈ ಯುದ್ಧದ ವಿಜಯ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ವಿಜಯಕ್ಕಾಗಿ ಉಕ್ರೇನ್ನ ಡೊನ್ಬಾಸ್ ಪ್ರದೇಶವನ್ನ ವಶಕ್ಕೆ ಪಡೆದುಕೊಳ್ಳಲು ಸಂಚು ರೂಪಿಸಿದ್ದಾರೆ ಅಂತ ಝೆಲೆನ್ಸ್ಕಿ ಕಿಡಿಕಾರಿದ್ದಾರೆ.