• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

RSS ಮುಕ್ತ ಭಾರತಕ್ಕೆ ಕರೆ ನೀಡಿದ ಮಾಜಿ IPS ಅಧಿಕಾರಿ ನಾಗೇಶ್ವರ ರಾವ್

Shivakumar A by Shivakumar A
September 10, 2021
in ದೇಶ
0
RSS ಮುಕ್ತ ಭಾರತಕ್ಕೆ ಕರೆ ನೀಡಿದ ಮಾಜಿ IPS ಅಧಿಕಾರಿ ನಾಗೇಶ್ವರ ರಾವ್
Share on WhatsAppShare on FacebookShare on Telegram

ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಎಂ ನಾಗೇಶ್ವರ ರಾವ್ ಅವರು ಈಗ ಹೊಸತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 2019ರಲ್ಲಿ ಸಣ್ಣ ಅವಧಿಗೆ ಸಿಬಿಐ ಹಂಗಾಮಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಇವರು, ಭಾರತವನ್ನು ಆರ್ಎಸ್ಎಸ್ ಮುಕ್ತ ರಾಷ್ಟ್ರವಾಗಿಸಬೇಕು ಎಂದು ಕರೆ ನೀಡಿದ್ದಾರೆ. RSS ಒಂದು ‘ಕಪಟ ಹಿಂದುತ್ವವಾದಿ ವಂಚಕ’ ಸಂಸ್ಥೆ ಎಂದು ಟೀಕಿಸಿದ್ದಾರೆ.

ADVERTISEMENT

ಸರಣಿ ಟ್ವೀಟ್’ಗಳ ಮೂಲಕ RSS ಮೇಲೆ ಬೆಂಕಿಯುಗುಳಿರುವ ನಾಗೇಶ್ವರ ರಾವ್, ದೇಶದಲ್ಲಿ RSS ಅನ್ನು ಬಹಿಷ್ಕರಿಸಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ. ಟ್ವಿಟರ್’ನಲ್ಲಿ ತಮ್ಮ ಬಯೋ ಕೂಡಾ ಬದಲಾಯಿಸಿರುವ ನಾಗೇಶ್ವರ ರಾವ್ ಅವರು, ‘ಹಿಂದೂಗಳಿಗೆ ಸಮಾನ ಹಕ್ಕು ಹಾಗೂ ಕಪಟ ಹಿಂದುತ್ವವನ್ನು ಬಹಿರಂಗಪಡಿಸುವುದು’ ಎಂದು ಬರೆದುಕೊಂಡಿದ್ದಾರೆ.

ನಾಗೇಶ್ವರ್ ರಾವ್ ಅವರ ಈ ಟೀಕೆಗೆ ಕಾರಣವಾಗಿದ್ದು ಮುಂಬೈಯಲ್ಲಿ ಆರ್ಎಸ್ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಮಾಡಿದ್ದ ಭಾಷಣ. ಮುಂಬೈನಲ್ಲ ಏರ್ಪಡಿಸಿದ್ದ ವಿಚಾರಗೊಷ್ಠಿಯಲ್ಲಿ ಮಾತನಾಡುತ್ತ, “ಹಿಂದೂ ಮತ್ತು ಮುಸ್ಲೀಮರ ನಡುವ ವೈಮನಸ್ಯ ಉಂಟು ಮಾಡಿ ಪರಸ್ಪರರು ಜಗಳವಾಡುವಂತೆ ಮಾಡಿದ್ದು ಬ್ರಿಟೀಷರು,” ಎಂದು ಮೋಹನ್ ಭಾಗವತ್ ಹೇಳಿದ್ದರು.

ಈ ಹೇಳಿಕೆಯಿಂದಾಗಿ ಅಸಮಾಧಾನಗೊಂಡ ನಾಗೇಶ್ವರ ರಾವ್, “RSS ಮುಸ್ಲೀಮರಿಗೆ ಧೈರ್ಯ ತುಂಬುತ್ತಿದೆ. ಹಿಂದೂಗಳನ್ನು ಹಾಗೂ ಹಿಂದುತ್ವವನ್ನು ವಿನಾಶದ ಹಾದಿಯಲ್ಲಿ ಕೊಂಡೊಯ್ಯುತ್ತಿದೆ. ಇಸ್ಲಾಂ ಗೆಲ್ಲುತ್ತದೆ, ಏಕೆಂದರೆ ಅದು ಎಂದಿಗೂ ಬಗ್ಗದ ಮನಸ್ಥಿತಿಯನ್ನು ಸೃಷ್ಟಿಸುತ್ತದೆ,” ಎಂದು ಹೇಳಿದ್ದಾರೆ.

“RSS’ನಲ್ಲಿ ಇರುವಂತಹ ದೌರ್ಬಲ್ಯವನ್ನು ಇಸ್ಲಾಂ ಮನಗಂಡಿದೆ. ಇದು ಅವರಿಗೆ ಇನ್ನೂ ಹೆಚ್ಚಿನ ಹಿಂಸೆ ಸೃಷ್ಟಿಸಲು ಪ್ರಚೋದನೆ ನಿಡಿದಂತಿದೆ,” ಎಂದು ರಾವ್ ಹೇಳಿದ್ದಾರೆ.

ವಿವಾದಗಳಿಗೇ ಹೆಸರುವಾಸಿಯಾದ ನಿವೃತ್ತ ಅಧಿಕಾರಿ:

ವಿವಾದಗಳನ್ನು ಸೃಷ್ಟಿಸುವುದು ರಾವ್ ಅವರಿಗೆ ಹೊಸ ವಿಚಾರವೇನಲ್ಲ. ಕಳೆದ ಕೆಲವು ವರ್ಷಗಳಿಂದ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಅಭ್ಯಾಸ ಇವರಿಗಿದೆ. ಐಪಿಎಸ್ ಅಧಿಕಾರಿಯಾಗಿದ್ದಾಗ ಸೇವೆಯುದ್ದಕ್ಕೂ ಅಕ್ರಮವೆಸಗಿದ ದೂರು ಹಾಗೂ ಅವರ ಮೇಲಿನ ತನಿಖೆಯಿಂದಲೇ ಹೆಚ್ಚಾಗಿ ಸುದ್ದಿಯಾಗಿದ್ದರು. ಪ್ರಭಾವಿ ವ್ಯಕ್ತಿಗಳ ಪ್ರಕರಣಗಳನ್ನು ಹಳ್ಳ ಹಿಡಿಸಿದ ‘ಕೀರ್ತಿ’ ಇವರಿಗೆ ಸಲ್ಲುತ್ತದೆ.

ಸಂಜಯ್ ಭಂಡಾರಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಭಾರತೀಯ ಕಂದಾಯ ಸೇವೆ ವಿಭಾಗ ಎಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ದ ವಿಚಾರಣೆಯನ್ನೇ ನಿಲ್ಲಿಸಿದ್ದರು. ಇದರೊಂದಿಗೆ ಸಿಬಿಐಗೆ ವಹಿಸಲಾಗಿದ್ದ ಹಲವು ಪ್ರಕರಣಗಳನ್ನು ತಮ್ಮ ಪ್ರಭಾವ ಬೀರಿ ಮುಚ್ಚಿ ಹಾಕಲು ಪ್ರಯತ್ನಿಸಿದ್ದ ಆರೋಪವು ಇವರ ಮೇಲೆ ಇತ್ತು. ಸಿಬಿಐ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಅವರು ತಮ್ಮ ಅಧಿಕಾರದ ದುರಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿದ್ದಾರೆ ಹಾಗೂ ಶೆಲ್ ಕಂಪೆನಿಗಳಿಂದ ನಡೆದ ಅಕ್ರಮದಲ್ಲಿ ಅವರ ಪತ್ನಿಯ ಕೈವಾಡವು ಇದೆ ಎಂಬ ದೂರುಗಳೂ ಕೇಳಿ ಬಂದಿದ್ದವು.

ಸಾಮಾಜಿಕ ಕಾರ್ಯಕರ್ತರಾಗಿದ್ದ ಸ್ವಾಮಿ ಅಗ್ನಿವೇಶ್ ಅವರ ಸಾವನ್ನು ವಿಕೃತ ರೀತಿಯಲ್ಲಿ ಸಂಭ್ರಮಿಸಿದ್ದರು. ಅಗ್ನಿವೇಶರನ್ನು ಹಿಂದೂ ವಿರೋಧಿ ಎಂದು ಜರೆದಿದ್ದ ರಾವ್, ಅವರ ಸಾವು ವಿಡಂಬನಾತ್ಮಕ ಸಾವು ಎಂದು ಹೇಳಿದ್ದರು. ಹಿಂದುತ್ವಕ್ಕೆ ಅಪಾರ ಪ್ರಮಾಣದ ಧಕ್ಕೆ ಉಂಟು ಮಾಡಿದ್ದರು ಎಂದು ಅಗ್ನಿವೇಶ್ ಅವರ ಸಾವಿನ ನಂತರ ಕಿಡಿಕಾರಿದ್ದರು.

“ಉತ್ತಮ ವಿಡಂಬನೆ ಸ್ವಾಮಿ ಅಗ್ನಿವೇಶ್. ನೀವು ಕಾವಿ ಧರಿಸಿದ ಹಿಂದೂ ವಿರೋಧಿ ವ್ಯಕ್ತಿ. ನೀವು ತೆಲುಗು ಬ್ರಾಹ್ಮಣರಾಗಿ ಹುಟ್ಟಿದ್ದಿರಿ ಎಮದು ಹೇಳಲು ನನಗೆ ನಾಚಿಕೆ ಆಗುತ್ತದೆ. ನಿಮಗೆ ಮುಂಚೆಯೇ ಏಕೆ ಸಾವು ಬಂದಿಲ್ಲ ಎಂಬ ಕಾರಣಕ್ಕೆ ನನಗೆ ಯಮರಾಜನ ವಿರುದ್ದ ಸಿಟ್ಟಿದೆ,” ಎಂದು ರಾವ್ ಹೇಳಿದ್ದರು.

Tags: BJPCovid 19IPSRSSRSS ಮುಕ್ತ ಭಾರತನರೇಂದ್ರ ಮೋದಿನಾಗೇಶ್ವರ ರಾವ್ಬಿಜೆಪಿ
Previous Post

ಬೆಂಗಳೂರಲ್ಲಿ ಸುಮಾರು 4,000 ಅಕ್ರಮ ನೀರಿನ ಸಂಪರ್ಕ ಪತ್ತೆ : BWSSB ಸಮೀಕ್ಷೆ

Next Post

ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ನಾನು ಅವರನ್ನ ಸುಮ್ಮನೆ ಬಿಡುವುದಿಲ್ಲ: Anushree

Related Posts

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ
Top Story

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು. ಕಾಯಕವೇ ಕೈಲಾಸ ಅಂತ ಬಸವಣ್ಣ ಹೇಳಿದ್ದರು. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಮಾನ ಗೌರವ ನೀಡಬೇಕು....

Read moreDetails
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

May 1, 2026
Next Post

ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ನಾನು ಅವರನ್ನ ಸುಮ್ಮನೆ ಬಿಡುವುದಿಲ್ಲ: Anushree

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada