ಈ ಬಲಪಂಥೀಯರು ಅಥವಾ ಸಾಂಪ್ರದಾಯವಾದಿಗಳು ಅಥವಾ ಯಥಾಸ್ಥಿತಿವಾದಿ ಭಯೋತ್ಪಾದಕರು ನಮ್ಮ ದೇಶದ ನೈಜ ನಾಯಕರಾದ ಗಾಂಧಿ-ನೆಹರೂರನ್ನು ಯಾತಕ್ಕೆ ದ್ವೇಷಿಸುತ್ತಾರೆ ಅನ್ನುವುದು ಬಹಳ ನಿಘೂಡವಾದ ಸಂಗತಿಯೇನಲ್ಲ. ದೇಶಕ್ಕೆ ಸ್ವಾತಂತ್ರ ಬಂದು ಜನತಂತ್ರ ವ್ಯವಸ್ಥೆಯ ಮೂಲಕ ಇಲ್ಲಿನ ಬಹುಜನರ ಏಳಿಗೆಯಾದರೆ ತಮ್ಮ ಪರಾವಲಂಬಿ ಬದುಕಿಗೆ ಸಂಚಕಾರ ಬಂದೀತೆಂಬ ಆತಂಕದಿಂದ ರಾಜಸತ್ತೆ ಅಥವ ಧರ್ಮಾಧಾರಿತ ರಾಷ್ಟ್ರವನ್ನು ಪ್ರತಿಪಾದಿಸಿದ ಈ ಉಗ್ರವಾದಿಗಳು ಸ್ವತಂತ್ರ ಪಡೆದು ದೇಶ ಜನತಂತ್ರ ವ್ಯವಸ್ಥೆಗೆ ಜಾರಿದ್ದಕ್ಕೆ ಗಾಂಧಿ-ನೆಹರೂ ಕಾರಣವೆಂದು ಅವರನ್ನು ಅನವರತ ದ್ವೇಷಿಸುತ್ತಿದ್ದಾರೆ. ಈ ಸಂಪ್ರದಾಯವಾಗಿ ಉಗ್ರವಾದಿಗಳು ಈಗ ಪರೋಕ್ಷವಾಗಿ ಭಾರತದ ಅಧಿಕಾರ ಗದ್ದುಗೆಯನ್ನು ನಿಯಂತ್ರಿಸುತ್ತ ತಮಗೆ ಬೇಕಾದ ಅನೇಕ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತಿದ್ದರೂ ಈ ದೇಶವನ್ನು ತಮ್ಮಿಚ್ಛೆಯನುಸಾರ ಧಾರ್ಮಿಕ ರಾಷ್ಟ್ರವಾಗಿ ಪರಿವರ್ತಿಸಿಕೊಳ್ಳಲಾರದಂತೆ ನೆಹರೂ ಗಾಂಧಿ ಅವರು ಮಜಬೂತಾದ ಪ್ರಜಾತಾಂತ್ರಿಕ ಮತ್ತು ಜಾತ್ಯಾತೀತ ತಳಪಾಯ ರೂಪಿಸಿರುವುದು ಅವರ ಅಸೂಯೆಗೆ ಕಾರಣವಾಗಿದೆ.
ದೇಶದ ಪ್ರಥಮ ಕಾನೂನು ಮಂತ್ರಿಯಾಗಿ ಅಂದು ಕಾಂಗ್ರೆಸ್ ಪಕ್ಷದಲ್ಲಿದ್ದ ಅನೇಕ ಪ್ರಭಾವಿ ಬ್ರಾಹ್ಮಣ ನಾಯಕರಿದ್ದಾಗಲೂ ಅವರ ಬದಲಿಗೆ ಲೇಬರ್ ಪಾರ್ಟಿಯಿಂದ ಆಯ್ಕೆಯಾಗಿದ್ದ ದಲಿತ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ನೇಮಿಸಿ ಬಲಿಷ್ಟ ಸಂವಿಧಾನ ಮತ್ತು ಅನೇಕ ಮಹತ್ವಪೂರ್ಣ ಕಾನೂನುಗಳನ್ನು ಅನುಷ್ಠಾನಗೊಳಿಸಿದ ನೆಹರೂ ಬಲಪಂಥೀಯ ಉಗ್ರವಾದಿಗಳಿಗೆ ಬಲವಾದ ಪೆಟ್ಟನ್ನು ನೀಡಿದ್ದರು. ಧರ್ಮಾಧಾರಿತ ದೇಶ ಕಟ್ಟಿ ತಮ್ಮ ಜಾತಿಯ ಪ್ರಾಭಲ್ಯ ರಕ್ಷಿಸಿಕೊಳ್ಳಲು ಹೊಂಚುಹಾಕಿದ್ದ ಬಲಪಂಥೀಯ ಉಗ್ರವಾದಿಗಳಿಗೆ ಭಾರತವನ್ನು ಪರಿಪೂರ್ಣ ಜಾತ್ಯಾತೀತ ಮತ್ತು ಜನತಂತ್ರ ದೇಶವಾಗಿ ಗಾಂಧಿ-ನೆಹರೂ ಅವರು ಕಟ್ಟಿದ್ದು ನುಂಗಲಾರದ ತುತ್ತಾಯಿತು. ಒಂದು ರೀತಿಯಿಂದ ಇದು ಈ ಉಗ್ರರ ಒಳಉದ್ದೇಶಗಳಿಗೆ ಹೊಡೆದ ಮಳೆಯಂತಾಗಿತ್ತು. ಇದರ ಜೊತೆಗೆ ನೆಹರೂ ಅವರು ಪಾಲಿಸಿದ ಸಮಾಜವಾದˌ ಪಾಶ್ಚಿಮಾತ್ಯ ಪ್ರಗತಿಶೀಲ ಧೋರಣೆಗಳುˌ ಅವರು ಸ್ಥಾಪಿಸಿದ ಉನ್ನತ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆ ಸಾಂಪ್ರದಾಯವಾದಿಗಳನ್ನು ಮತ್ತಷ್ಟು ಹತಾಷೆಗೆ ದೂಡಿತು.
![](https://pratidhvani.com/wp-content/uploads/2023/11/nationalherald_2019-11_c513a5c1-ed19-4d8d-be8f-f884f6712d2c_Gandhi-1024x576.jpg)
ನೆಹರೂ ಸ್ಥಾಪಿಸಿದ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳುˌ ಪಂಚವಾರ್ಷಿಕ ಯೋಜನೆಗಳುˌ ಆರ್ಥಿಕನೀತಿಗಳುˌ ಕೈಗಾರಿಕರಣˌ ಕೃಷಿ ಕ್ಷೇತ್ರದಲ್ಲಿನ ಪ್ರಗತಿˌ ಅಂತರಿಕ್ಷ ಸಂಶೋಧನಾ ಸಂಸ್ಥೆಯ ಸ್ಥಾಪನೆˌ ಆಲಿಪ್ತ ನೀತಿ ಮುಂತಾಗಿ ಎಲ್ಲ ರಂಗದಲ್ಲಿ ನೆಹರೂ ಹಾಕಿದ ಭದ್ರ ಬುನಾದಿಯು ಈ ಉಗ್ರರ ದುಷ್ಟ ಉದ್ದೇಶಗಳಿಗೆ ಬಲವಾದ ಹೊಡೆತ ನೀಡಿ ಅವರನ್ನು ಕಂಗೆಡಿಸಿತ್ತು. ಈಗ ದೇಶದ ಅಧಿಕಾರ ಚುಕ್ಕಾಣಿ ಪರೋಕ್ಷವಾಗಿ ನಿಯಂತ್ರಿಸುತ್ತಿರುವ ಈ ಕರ್ಮಟರು ನೆಹರೂ ಹಾಕಿದ ಬುನಾದಿಯನ್ನು ನಿರಾಕರಿಸಲೂ ಆಗದೆˌ ಅದನ್ನು ಸರಳವಾಗಿ ಒಪ್ಪಲೂ ಆಗದೆ ವಿಪರೀತ ಪರದಾಡುತ್ತಿರುವುದನ್ನು ನೋಡಿದರೆ ನಗೆಬಾರದೆ ಇರದು. ಆದ್ದರಿಂದ ಈ ಯಥಾಸ್ಥಿತಿವಾದಿ ಉಗ್ರರು ನೆಹರೂ-ಗಾಂಧಿ ಹೆಸರು ಕೇಳಿದರೆ ಸಾಕು ಕಿಟಾರ್ ಎಂದು ಭಯದಿಂದ ಕಿರುಚುತ್ತಾರೆ. ಅದೇ ಕಾರಣದಿಂದ ನೆಹರೂ-ಗಾಂಧಿಜೀ ಮತ್ತು ಅವರ ಕುಟುಂಬದ ಹೆಸರನ್ನು ಕೆಡಿಸಲು ಕುಚ್ಯೋದ್ಯದ ಸುಳ್ಳು ಕಥೆಗಳನ್ನು ಹೆಣೆದು ತೇಲಿಬಿಡುವ ಅಹಸ್ಯಕರ ಕೆಲಸ ಇವರು ಮಾಡುತ್ತಿದ್ದಾರೆ.
ಈ ಕರ್ಮಟರು ಎಷ್ಟೇ ತಿಪ್ಪರಲಾಗ ಹಾಕಿದರೂ ನೆಹರೂ-ಗಾಂಧಿಯವರ ಹೆಸರನ್ನು ಹಾಗೂ ಅವರು ಮಾಡಿದ ಉತ್ತಮ ಕಾರ್ಯಗಳನ್ನು ಅಳಿಸುವ ದುಷ್ಟ ಹುನ್ನಾರ ಸಫಲವಾಗಲಾರಢು. ಅಲ್ಲಲ್ಲಿ ನೆಹರೂ-ಗಾಂಧಿ ಹೆಸರಿನ ಸ್ಮಾರಕಗಳ ಹೆಸರುಗಳನ್ನು ಬದಲಾಯಿಸುವುದುˌ ನೈಜ ಇತಿಹಾಸವನ್ನು ತಿರುಚುವುದುˌ ಸುಳ್ಳು ಕಥೆಗಳನ್ನು ಹೆಣೆಯುವುದುˌ ಮುಂತಾದ ಹತಾಶೆಯ ಕ್ಷುಲ್ಲಕ ಕೆಲಸಗಳಲ್ಲಿ ಈ ಉಗ್ರಪಡೆ ನಿರತವಾಗಿದೆ. ಗಾಂಧಿಜೀಯವರನ್ನು ಕೊಂದ ಈ ಉಗ್ರವಾದಿಗಳು ನೆಹರೂ ಅವರನ್ನು ಅಲುಗಾಡಿಸಲಾಗದೆ ಅವರ ಸಾಧನೆಗಳನ್ನು ಅಳಿಸಲಾಗದೆ ಈಗ ವಿಪರೀತ ಪರದಾಡುತ್ತಿರುವುದನ್ನು ದೇಶದ ಜನರು ಪುಕ್ಕಟ್ಟೆ ಮನರಂಜನೆಯಾಗಿ ಸವಿಯುತ್ತಿದ್ದಾರೆ. ಭಾರತ ದೇಶ ಇರುವ ತನಕ ನೆಹರೂ-ಗಾಂಧಿ ಹೆಸರುಗಳು ಈ ಅಧುನಿಕ ಭಾರತದ ಅವಿಭಾಜ್ಯ ಅಂಗಗಳಾಗಿ ಉಳಿಯುತ್ತವೆಂಬ ಕಹಿಸತ್ಯ ಅರಗಿಸಿಕೊಳ್ಳದ ಈ ಕೊಳಕು ಮನಸ್ಥಿತಿಯ ಅಲ್ಪರಿಗೆ ನೆಹರೂ-ಗಾಂಧಿಜೀಯವರ ಹೆಸರುಗಳು ಕೊನೆಯ ತನಕ ಅನವರತ ಕಾಡಲಿವೆ.
~ ಡಾ. ಜೆ ಎಸ್ ಪಾಟೀಲ.