
ವಿಜಯಪುರ: BJP ರಾಜ್ಯಾಧ್ಯಕ್ಷ ಬಿ.ವೈ ವಿಜಯೆಂದ್ರ ಹಾಗು ರಮೇಶ್ ಜಾರಕಿಹೊಳಿ ನಡುವೆ ವಾಕ್ ಸಮರ ಮತ್ತಷ್ಟು ಇಂಬು ಪಡೆದಿದೆ. ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಾನು ಸದಾಕಾಲ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಲಾಯಕ್ ಇಲ್ಲ. ಅವನನ್ನ ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ. ನಾವು ಉತ್ತರ ಕರ್ನಾಟಕದ ಜನ ಹಿಂಗೇ ಇದ್ದೇವಿ. ಸತೀಶ್ ಜಾರಕಿಹೊಳಿ ಹೇಳಿದ್ದಾಗ ಕೂಡ ನಾನು ಒಬ್ಬನೇ ಹೋಗುತ್ತೇನೆ ಎಂದಿದ್ದೆ.. ನಾವು ಯಾರಿಗೂ ಹೆದರಲ್ಲ, ಜಾರಕಿಹೊಳಿ ಪರವಾಗಿ ನಾವಿದ್ದೇವೆ. ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡ್ಡಿಯೂರಪ್ಪ ಜೇಲಿಗೆ ಹೋದ. ಯಡಿಯೂರಪ್ಪಗೆ ಹೊರಗಡೆ ಪೂಜ್ಯ ತಂದೆ ಅಂತಾನೇ, ಮನೆಯಲ್ಲಿ ಮುದಿಯಾ ಅಂತಾ ಕರಿತಾನೆ ಎಂದು ವ್ಯಂಗ್ಯವಾಡಿದ್ದಾರೆ.
ಮಗನಿಂದಲೇ ಯಡ್ಡಿಯೂರಪ್ಪ ಹಾಳಾಗಿದ್ದು, ಯಡ್ಡಿಯೂರಪ್ಪ ಮಗನ ವ್ಯಾಮೋಹ ಬಿಡಲಿ ಎಂದಿರುವ ಯತ್ನಾಳ್, ಯಡ್ಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಯಡ್ಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಬಿ ಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಯಡಿಯೂರಪ್ಪ ಅನ್ಯಾಯ ಮಾಡಿದ್ದಾನೆ. ಯಡ್ಡಿಯೂರಪ್ಪ ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನ ಮಣ್ಣಲ್ಲಿಟ್ರು. ಯಡ್ಡಿಯೂರಪ್ಪ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂರಲಿ ಎಂದು ಸಲಹೆ ನೀಡಿದ್ದಾರೆ ಯತ್ನಾಳ್.