• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಹಾಸನದ ಟಿಕೆಟ್​ಗಾಗಿ ರೇವಣ್ಣ, ಕುಮಾರಣ್ಣ ಪಟ್ಟು.. ಕಾರಣ ಅದೊಂದು ಮಾತು..

ಕೃಷ್ಣ ಮಣಿ by ಕೃಷ್ಣ ಮಣಿ
April 11, 2023
in Top Story, ಕರ್ನಾಟಕ
0
ಹಾಸನದ ಟಿಕೆಟ್​ಗಾಗಿ ರೇವಣ್ಣ, ಕುಮಾರಣ್ಣ ಪಟ್ಟು.. ಕಾರಣ ಅದೊಂದು ಮಾತು..
Share on WhatsAppShare on FacebookShare on Telegram

ಬೆಂಗಳೂರು:ಏ.11: ಹಾಸನ ಕ್ಷೇತ್ರದ ಜೆಡಿಎಸ್​​ ಟಿಕೆಟ್​​ಗಾಗಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಡುವೆ ಸಮರವೇ ಏರ್ಪಟ್ಟಿದೆ. ಭವಾನಿ ರೇವಣ್ಣ ಸ್ಪರ್ಧೆ ಮಾಡಬೇಕು ಅನ್ನೋದು ರೇವಣ್ಣ ಕುಟುಂಬದ ಆಗ್ರಹ. ಇಲ್ಲ ಸಾಮಾನ್ಯ ಕಾರ್ಯಕರ್ತ ಸ್ವರೂಪ್​ ಪ್ರಕಾಶ್​ ಜೆಡಿಎಸ್​ ಅಭ್ಯರ್ಥಿ ಆಗಲಿ ಎನ್ನುವುದು ಮಾಜಿ ಸಿಎಂ ಕುಮಾರಸ್ವಾಮಿ ನಿಲುವು. ಈ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ ಎನ್ನುವುದು ವಿರೋಧ ಪಕ್ಷಗಳ ಮಾತು. ಆದರೆ ನಾವು ಎಂದಿಗೂ ಕಿತ್ತಾಡುವುದಿಲ್ಲ, ನೀವು ಖುಷಿ ಪಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ರೇವಣ್ಣ ಪದೇ ಪದೇ ಹೇಳುತ್ತಲೇ ಇದ್ದಾರೆ. ಈ ನಡುವೆ ಸೋಮವಾರ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ರೇವಣ್ಣ, ಭವಾನಿಗೆ ಟಿಕೆಟ್​​ ಕೊಡದಿದ್ದರೆ ಪರವಾಗಿಲ್ಲ, ಹೊಳೆನರಸೀಪುರ ಹಾಗು ಹಾಸನ ಎರಡೂ ಕ್ಷೇತ್ರದಲ್ಲೂ ನಾನೇ ಸ್ಪರ್ಧೆ ಮಾಡ್ತೇನೆ ಎಂದು ಗೌಡರಿಗೆ ಹೇಳಿ ಬಂದಿದ್ದಾರೆ ಎನ್ನಲಾಗಿದೆ.

ADVERTISEMENT

ಎರಡೂ ಕ್ಷೇತ್ರದಲ್ಲೂ ನಾನೇ ಸ್ಪರ್ಧೆ ಮಾಡ್ತೇನೆ..!

ಬೆಂಗಳೂರಿನ ಪದ್ಮನಾಭನಗರದ ದೇವೆಗೌಡರ ನಿವಾಸಕ್ಕೆ ಆಗಮಿಸಿದ್ದ ರೇವಣ್ಣ ಕೆಲವು ಸಮಯ ಗೌಡರ ಜೊತೆಗೆ ಚರ್ಚೆ ನಡೆಸಿದ್ರು. ಎರಡನೇ ಪಟ್ಟಿ ಘೋಷಣೆಗೂ ಮುನ್ನ ಹಾಸನ ಟಿಕೆಟ್​ ವಿಚಾರದಲ್ಲಿ ಎದುರಾಗಿರುವ ಗೊಂದಲ ಪರಿಹಾರಕ್ಕಾಗಿ ದೇವೆಗೌಡರ ಭೇಟಿ ಮಾಡಿದ್ದರು. ಹಾಸನ ಟಿಕೆಟ್​ ಭವಾನಿಗೆ ಕೊಡದೇ ಇದ್ದರೂ ಪರವಾಗಿಲ್ಲ. ಹಾಸನ ಹಾಗು ಹೊಳೆನರಸೀಪುರ ಎರಡೂ ಕಡೆ ನನಗೇ ಟಿಕೆಟ್ ಕೊಡಿ. ಕಳೆದ ಬಾರಿ ರಾಮನಗರ ಹಾಗು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಕೂಡ ಎರಡು ಕಡೆ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಇದೀಗ ನಾನು ಕೂಡ ಎರಡೂ ಕ್ಷೇತ್ರದಲ್ಲಿ ಜಯಗಳಿಸುತ್ತೇನೆ. ಆ ಬಳಿಕ ಒಂದು ಕ್ಷೇತ್ರ ಉಳಿಸಿಕೊಂಡು ಇನ್ನೊಂದು ಕ್ಷೇತ್ರಕ್ಕೆ ರಾಜೀನಾಮೆ ಕೊಡ್ತೇನೆ ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ದೇವೇಗೌಡರ ಭೇಟಿ ಬಳಿಕ ಖುಷಿ ಖುಷಿಯಿಂದ ಹೊರ ಬಂದ ರೇವಣ್ಣ. ಹಾಸನ ಕ್ಷೇತ್ರದ ದೇವೇಗೌಡರ ನಿರ್ಣಯವೇ ಅಂತಿಮ. 60 ವರ್ಷದಿಂದ ದೇವೇಗೌಡರಿಗೆ ಕ್ಷೇತ್ರದ ಬಗ್ಗೆ ಗೊತ್ತಿದೆ. ಅವರು ಏನು ನಿರ್ಣಯ ಕೈಗೊಳ್ತಾರೊ ಅದೇ ಫೈನಲ್ ಎಂದಿದ್ದಾರೆ. ಇನ್ನು ಕುಮಾರಸ್ವಾಮಿ – ರೇವಣ್ಣ ಹೊಡೆದಾಡಿಕೊಳ್ತಾರೆ ಅನ್ನೋದು ಭ್ರಮೆ ಎಂದಿರುವ ಅವರು, ನಮ್ಮ ಕುಟುಂಬಕ್ಕೆ ಶಕುನಿಗಳ ಕಾಟವಿದೆ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ, ಆ ಬಗ್ಗೆ ನನಗೇನು ಗೊತ್ತಿಲ್ಲ ಎನ್ನುವ ಮೂಲಕ ಬೆಣ್ಣೆ ಮೇಲೆ ಕೂದಲು ತೆಗೆದಂತೆ ಮಾತನಾಡಿದ್ದಾರೆ. ಎರಡೂ ಕಡೆ ಸ್ಪರ್ಧೆ ಮಾಡ್ತೀರಾ ಅನ್ನೊ ಪ್ರಶ್ನೆಗೆ ದೇವೇಗೌಡರು ನಿರ್ಣಯ ಮಾಡ್ತಾರೆ ಅಂತಾ ನಗು ಮುಖದಲ್ಲಿ ಹೇಳಿದ್ದಾರೆ. ಇನ್ನು ರೇವಣ್ಣರನ್ನು ಸಮಾಧಾನ ಮಾಡುವ ಶಕ್ತಿ ದೇವೇಗೌಡರಿಗೆ ಇಲ್ಲ ಎಂದಿದ್ದ ಕುಮಾರಸ್ವಾಮಿ ಮಾತಿಗೂ ತಿರುಗೇಟು ನೀಡದ ರೇವಣ್ಣ, ಆ ಬಗ್ಗೆ ನನಗೆ ಗೊತ್ತಿಲ್ಲ, ನಮಗೆ ದೇವೇಗೌಡರ ಆರೋಗ್ಯ ನಮಗೆ ಮುಖ್ಯ, ರಾಜಕೀಯ ಬೇಕಿಲ್ಲ. ಭವಾನಿ ರೇವಣ್ಣ ಸಹ ದೇವೇಗೌಡರ ತೀರ್ಮಾನಕ್ಕೆ ಬದ್ದ ಎಂದಿದ್ದಾರೆ. ನಮಗೆ ದೇವೇಗೌಡ್ರೇ ಫೈನಲ್ ಎಂದಿದ್ದಾರೆ.

ಸ್ವರೂಪ್​ ಪ್ರಕಾಶ್​ ವಿರುದ್ಧ ರೇವಣ್ಣಗೆ ಯಾಕೆ ಸಿಟ್ಟು..?

ಕುಮಾರಸ್ವಾಮಿ ಆಯ್ಕೆ ಮಾಡಿರುವ ಮಾಜಿ ಶಾಸಕ ಹೆಚ್​.ಎಸ್​ ಪ್ರಕಾಶ್​ ಪುತ್ರ ಸ್ವರೂಪ್​ ಅವರ ಮೇಲೆ ರೇವಣ್ಣ ಯಾಕಿಷ್ಟು ಕೆಂಡ ಕಾರುತ್ತಿದ್ದಾರೆ ಎನ್ನುವುದು ಸಾಕಷ್ಟು ಕಡೆಗಳಲ್ಲಿ ಕೇಳಿ ಬರುತ್ತಿರುವ ಮಾತು. ಆದರೆ ರೇವಣ್ಣ ಆತ್ಮೀಯ ವಲಯ ಹೇಳುತ್ತಿರುವ ಮಾತು ಏನಂದ್ರೆ, ಈ ಹಿಂದೆ ಪ್ರೀತಂಗೌಡ ಹಾಸನಕ್ಕೆ ರೇವಣ್ಣನೇ ಬಂದು ನಿಂತರೂ ನಾನು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿದ್ದರು. 50 ಸಾವಿರಕ್ಕಿಂತ ಒಂದೇ ಒಂದು ವೋಟ್​ ಕಡಿಮೆ ಆದರೂ ನಾನು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆ ಹೋಗ್ತೇನೆ ಎಂದು ಪ್ರೀತಂಗೌಡ ಸವಾಲು ಹಾಕಿದ್ರು. ಇದೊಂದೇ ಮಾತಿಗಾಗಿ ರೇವಣ್ಣ ಪ್ರೀತಂಗೌಡ ವಿರುದ್ಧ ಸ್ಪರ್ಧೆ ಮಾಡಲು ರೇವಣ್ಣ ಹಠಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ನಾನೇ ಸ್ಪರ್ಧೆ ಮಾಡಿ, ಪ್ರೀತಂಗೌಡ ಅವರನ್ನು ಸೋಲಿಸ್ತೇನೆ, ಅಥವಾ ಒಂದು ವೇಳೆ ಪ್ರೀತಂಗೌಡ 50 ಸಾವಿರಕ್ಕಿಂತ ಕಡಿಮೆ ಮತಗಳಲ್ಲಿ ಗೆದ್ದರೆ ಮರುಚುನಾವಣೆ ಹೋಗ್ತೇನೆ ಎಂದಿದ್ದಾರೆ. ಆ ಸವಾಲನ್ನು ನಾನು ಸ್ವೀಕಾರ ಮಾಡಿದ್ದೇನೆ. ನಾನೇ ಸ್ಪರ್ಧೆ ಮಾಡ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.

ಕೃಷ್ಣ ಮಣಿ

Tags: Bhavani RevannaCongress PartyHassanHD KumaraswamyhddevegowdahdrevannaJDS KarnatakaJds TicketKarnataka ElectionKarnataka Politicsprakash swaroopಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಸಿದ್ದರಾಮಯ್ಯ
Previous Post

ದೆಹಲಿಗೆ ಅಮಿತ್​ ಶಾ ಮರಳೋದನ್ನೇ ಕಾಯ್ತಿದ್ದಾರೆ ಬಿಜೆಪಿ ವರಿಷ್ಠರು : ಬಳಿಕವೇ ಅಭ್ಯರ್ಥಿಗಳ ಪಟ್ಟಿ ರಿಲೀಸ್​

Next Post

ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ವಿರೋಧಿ ಸಂಚಿಗೆ ಆಕ್ರೋಶ.. ಡಿಕೆಶಿಗೆ ಡಿಚ್ಚಿ..

Related Posts

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
0

ನಾವು ಆಗಾಗ್ಗೆ ಊಟಕ್ಕೆ ಸೇರುತ್ತೇವೆ. ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಅವರು ಇಂದು ಹುಬ್ಬಳ್ಳಿಗೆ ತೆರಳುವ ಮುನ್ನ ಕಿತ್ತೂರು...

Read moreDetails
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025
Next Post
ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ವಿರೋಧಿ ಸಂಚಿಗೆ ಆಕ್ರೋಶ.. ಡಿಕೆಶಿಗೆ ಡಿಚ್ಚಿ..

ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ವಿರೋಧಿ ಸಂಚಿಗೆ ಆಕ್ರೋಶ.. ಡಿಕೆಶಿಗೆ ಡಿಚ್ಚಿ..

Please login to join discussion

Recent News

Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada