ರೈಲ್ವೇ ನೇಮಕಾತಿ ಪರೀಕ್ಷೆಯಲ್ಲಿ (Railway exams ) ಜನಿವಾರ (Janivara), ಮಂಗಳಸೂತ್ರ ತೆಗೆಯಬೇಕು ಎಂಬ ಸೂಚನೆ ಇರುವ ವಿಚಾರಕ್ಕೆ ಸಂಬಂಧಪಟ್ಟಂತೆ ಧಾರ್ಮಿಕವಾಗಿ ಮಂಗಳಸೂತ್ರ, ಜನಿವಾರ ಚೆಕ್ ಮಾಡಲಿ ಬೇಡ ಎಂದವರು ಯಾರು? ಆದರೆ ಸಂಪ್ರದಾಯ, ಧರ್ಮದಲ್ಲಿ ಇರೋದನ್ನ ತೆಗಿ ಅಂತ ಹೇಳೋದು ಸರಿಯಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಪ್ರತಿಕ್ರಿಯಿಸಿದ್ದಾರೆ.

ಈ ಬಿಜೆಪಿಯವರು ಹೇಳೊದೊಂದು ಮಾಡೋದೊಂದು. ಬಿಜೆಪಿಯವರ ಮುಖವಾಡವೇ ಬೇರೆಯಿದೆ.ನಾವು ಸ್ಪಷ್ಟವಾಗಿ ಹೇಳಿದ್ದೇವೆ.. ಧಾರ್ಮಿಕ ವಿಚಾರಗಳೇ ಬೇರೆ, ಕಿವಿಯೋಲೆ, ಮಂಗಳಸೂತ್ರ, ಕಾಲುಂಗುರ, ಕುಂಕುಮ ಎಲ್ಲಾ ಇರುತ್ತದೆ. ಅದನ್ನ ಚೆಕ್ ಮಾಡಲಿ ಬೇಡ ಎನ್ನಲ್ಲ ಎಂದಿದ್ದಾರೆ.
ಈ ಹಿಂದೆ ಪರೀಕ್ಷೆ ಬರೆಯುವಾಗ ಅಭ್ಯರ್ಥಿ ಮೈಕ್ರೋ ಫೋನ್ ಹಾಕಿದ್ದ ಘಟನೆ ಇತ್ತು. ಹಾಗಾಗಿ ಚೆಕ್ ಮಾಡುವುದು ತಪ್ಪಿಲ್ಲ. ಆದ್ರೆ ಮೊದಲು ಈ ಸೂಚನೆ ವಾಪಸ್ ತೆಗೆಯಬೇಕು. ರಾಜ್ಯದ ಜನ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ.
ಹೀಗಾಗಿ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು, ಈ ಸೂಚನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಡಿಸಿಎಂ ಶಿವಕುಮಾರ್ ಆಗ್ರಹಿಸಿದ್ದಾರೆ.