ಮೈಸೂರಿನಲ್ಲಿ ಬುಧವಾರ (ಆಗಸ್ಟ್ 30) ನಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಸಮಾರಂಭಕ್ಕೆ ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಿದ್ದಾರೆ.

ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಹುಲ್ ಬಂದಿಳಿದರು. ಬಳಿಕ ಬಸ್ ನಿಂದ ಸಿದ್ದರಾಮಯ್ಯರನ್ನ ಕೈ ಹಿಡಿದು ಇಳಿಸಿದ ರಾಹುಲ್ ಗಾಂಧಿ.

ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ರಾಹುಲ್ ಗಾಂಧಿ. ಈ ವೇಳೆ ಹೂಗುಚ್ಛ ನೀಡಿ ರಾಹುಲ್ ಗಾಂಧಿಯನ್ನ ಸ್ವಾಗತಿಸಿದ ಸಿದ್ಧರಾಮಯ್ಯ.
ವಿಮಾನ ಲ್ಯಾಂಡಿಂಗ್ ಸ್ಥಳದಿಂದ ಬಸ್ ನಲ್ಲಿ ಬಂದ ನಾಯಕರು ರಾಹುಲ್ ಅವರನ್ನು ಸ್ವಾಗತಿಸಿದರು.






