ಬೆಂಗಳೂರು : ಹುಡುಗಿ ಕೈಕೊಟ್ಟಿದ್ದಕ್ಕೆ ಪಾಗಲ್ ಪ್ರೇಮಿ ಸೋಮಶೇಖರ್ ಎಂಬವವನು ಹೈಟೆನ್ಷನ್ ಕಂಬ ಹತ್ತಿರುವ ಘಟನೆ ನಗರದ ಹೊರವಲಯದ ಆನೇಕಲ್ ಬಳಿಯ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.

ಕಳೆದ ಮೂರು ವರ್ಷಗಳಿಂದ ಸೋಮಶೇಖರ್ ಯುವತಿಯನ್ನ ಪ್ರೀತಿಸುತ್ತಿದ್ದ. ಇತ್ತೀಚಿಗಷ್ಠೆ ಯುವತಿ ಮದುವೆಗೆ ನಿರಾಕರಣೆ ಮಾಡಿದ್ದಳು, ಅಲ್ಲದೆ ಲವ್ ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಳು. ಬಳಿಕ ಯುವತಿ ಮನೆಯ ಸೀಟ್ ಹೊಡೆದು ದಾಂಧಲೆ ಮಾಡಿದ ಯುವಕ. ಬಳಿಕ ಸೋಮಶೇಖರ್ ಯುವತಿಯ ಮನೆಯ ಶೀಟ್ ಒಡೆದು ಗಲಾಟೆ ಮಾಡಿದ್ದಾನೆ.
ಇನ್ನೂ ಹುಡುಗಿಯ ಬ್ರೇಕಪ್ ಮಾತುಕೇಳಿ ಮನನೊಂದಿರುವ ಸೋಮಶೇಕರ್ ಮನೆಯ ಸಮೀಪದ ಹೈಟೆನ್ಷನ್ ಕಂಬ ಹತ್ತಿ ಹುಡುಗಿ ಬರುವವರೆಗೂ ಕಂಬದಿಂದ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದನು.
ಇನ್ನೂ ಘಟನೆ ತಿಳಿದು ಸ್ಥಳಕ್ಕೆ ಆನೇಕಲ್ ಪೊಲೀಸರು ದೌಡಾಯಿಸಿದ್ದಾರೆ. ಆದರೆ ಕಂಬದಿಂದ ಕೆಳಗಿಳಿಯುವಂತೆ ಪೊಲೀಸರು ಮನವೊಲಿಸಿದರು ಕೆಳಗಿಳಿಯದ ಭೂಪ ಹುಡುಗಿ ಬೇಕೆ ಬೇಕು ಎಂದು ಹಠಹಿಡಿದಿದ್ದ. ಇಷ್ಟೇ ಅಲ್ಲದೆ ಅಗ್ನಿಶಾಮಕ ದಳದ ತಂಡವು ಸ್ಥಳಕ್ಕಾಗಮಿಸಿತ್ತು, ಆದರೂ ಯುವಕ ತನ್ನದೇ ಮೊಂಡುತನ ಮುಂದುವರೆಸಿದ್ದನು. ಬಳಿಕ ಸುರಕ್ಷಿತವಾಗಿ ಆತನನ್ನು ಕೆಳಗಿಳಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರೇಮಿ ಸೋಮಶೇಖರ್ನ ಈ ಹುಚ್ಚಾಟವನ್ನು ನೋಡಲು ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.
ಮೂಲಗಳ ಪ್ರಕಾರ ಸೋಮಶೇಖರ್ ದುಶ್ಚಟಗಳ ದಾಸನಾಗಿದ್ದ, ಮದ್ಯ ಹಾಗೂ ಗಾಂಜಾಗಳಿಗೆ ಅಂಟಿಕೊಂಡಿದ್ದ. ಹೀಗಾಗಿ ಇದರಿಂದ ಬೇಸತ್ತಿದ್ದ ಯುವತಿ ನೇರವಾಗಿ ಪ್ರಿಯತಮನಿಗೆ ಮದುವೆಗೆ ಒಪ್ಪುವುದಿಲ್ಲ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡು ಗಲಾಟೆ ಮಾಡಿ, ಹುಡುಗಿ ಮನೆ ಎದುರಿನ ಹೈಟೆನ್ಷನ್ ಕಂಬ ಹತ್ತಿ ರಂಪಾಟ ಮಾಡಿದ್ದನು.






