ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತಗಟ್ಟೆಗಳತ್ತ ಮುಖ ಮಾಡುತ್ತಿರುವ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಬರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಟ ರಾಘವೇಂದ್ರ ರಾಜ್ಕುಮಾರ್ ಕೂಡ ಇಂದು ಮತಚಲಾವಣೆ ಮಾಡಿದರು.
![](https://pratidhvani.com/wp-content/uploads/2023/05/RAGHAVENDRA-RAJKUMAR-LEAD-1.jpg)
ಮತದಾನ ಮಾಡಿ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ನಾನು ನನ್ನ ಕೆಲಸ ಮಾಡಿದ್ದೇನೆ, ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿದರು. ಅಲ್ಲದೇ ಪುನೀತ್ ರಾಜ್ಕುಮಾರ್ ಇರಬೇಕಿತ್ತು ಎಂದು ನೆನೆದರು.
ಈ ಬಾರಿ ಜನರಿಗೆ ಸಮಸ್ಯೆ ಆಗಬಾರದೆಂದು ಹೆಚ್ಚಿನ ಬೂತ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮತಚಲಾಯಿಸುವ ವೇಳೆ ಯಾವುದೇ ಅಡಚಣೆ ಉಂಟಾಗುತ್ತಿಲ್ಲ ಎಂದು ಹೇಳಿದರು.