ಬೆಂ.ಗ್ರಾಮಾಂತರ (Bangalore rural) ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನ ಬದಲಾವಣೆಗೆ ಮಾಡಬೇಕು ಎಂಬ ಒತ್ತಾಯ ಬಿಜೆಪಿಯಲ್ಲಿ (Bjp) ಜೋರಾಗಿ ಕೇಳಿಬರ್ತಿದೆ. ಪ್ರತಿಷ್ಠೆಯ ರಣ-ಕಣವಾಗಿ ಮಾರ್ಪಾಡಾಗಿರುವ ಬೆಂಗಳೂರು ಗ್ರಾಮಾಂತರದಲ್ಲಿ ಹೇಗಾದ್ರೂ ಮಾಡಿ ಡಿಕೆ ಬ್ರದರ್ಸ್ (Dk brothers) ಗೆ ಸೋಲಿನ ರುಚಿ ತೋರಿಸಬೇಕು ಎಂಬ ಹಠದಲ್ಲಿ ಮೈತ್ರಿ ನಾಯಕರಿದ್ದಾರೆ, ಹೀಗಾಗಿ ಸಮರ್ಥ ಉಸ್ತುವಾರಿಯನ್ನ ನೇಮಕ ಮಾಡಿ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
![](https://pratidhvani.com/wp-content/uploads/2024/04/IMG_6522.jpeg)
ಸದ್ಯ ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ (Leader of opposition) ಹೆಗಲಿಗೆ ಬೆಂಗಳೂರು ಗ್ರಾಮಂತರ ಕ್ಷೇತ್ರದ ಜವಾಬ್ದಾರಿಯನ್ನ ನೀಡಲಾಗಿದ್ದು, ಬಿಜೆಪಿ ನಾಯಕರಿಗೆ ಈ ಬಗ್ಗೆ ಅಸಮಾಧಾನವಿದೆ. ಶಾಸಕ ಕೃಷ್ಣಪ್ಪ (Krishnappa) ಮತ್ತು ಮುನಿರತ್ನ (munirathna) ಈ ಬಗ್ಗೆ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದು, ಹೊಂದಾಣಿಕೆ ರಾಜಕಾರಣ ಮಾಡುವ ಆರ್.ಅಶೋಕ್ರಂತ ನಾಯಕ ಈ ಕ್ಷೇತ್ರದ ಉಸ್ತಿಯಾಗಿ ಬೇಡ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
![](https://pratidhvani.com/wp-content/uploads/2024/04/IMG_6523.jpeg)
ಈ ಹಿಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರದ ಜೊತೆಗೆ ಕನಕಪುರದಿಂದ (kanakapura) ಕೂಡ ಆರ್.ಅಶೋಕ್ ರನ್ನ ಹೈಕಮಾಂಡ್ ಅಖಾಡಕ್ಕಿಸಿತ್ತು. ಆ ಮೂಲಕ ಡಿಕೆಶಿ ಗೆ ಠಕ್ಕರ್ ಕೊಡೋ ಪ್ಲಾನ್ ಮಾಡಿತ್ತು, ಆದ್ರೆ ಆರ್..ಅಶೋಕ್ ಇಲ್ಲಿ ಠೇವಣಿಯನ್ನೂ ಉಳಿಸಿಕೊಳ್ಳಲಿಲ್ಲ. ಇಂಥ ನಾಯಕನಿಗೆ ಈಗ ಬೆಂ.ಗ್ರಾಮಂತರ ಕ್ಷೇತ್ರದ ಉಸ್ತುವಾಋಇ ನೀಡಿದ್ರೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.