ರಾಜ್ಯ ರಾಜಕಾರಣದಲ್ಲಿ ಬಿಎಸ್ ಯಡಿಯೂರಪ್ಪ(BS yediyurappa) ನಾಯಕತ್ವದಿಂದ ಹೊರಬಂದ ಬಿಜೆಪಿ, ಜನಮನ್ನಣೆ ಕಳೆದುಕೊಳ್ತಿದೆ ಎನ್ನುವ ಮಾತುಗಳ ನಡುವೆ ಕರ್ನಾಟಕಕ್ಕೆ ನರೇಂದ್ರ ಮೋದಿ ದಂಡೆತ್ತಿ ಬರುತ್ತಿದ್ದಾರೆ. ಕರ್ನಾಟಕದ(karnataka) ಜನರ ಮನಸ್ಸನ್ನು ಗೆಲ್ಲಲು ಏನೇನು ಬೇಕೋ ಅದೆಲ್ಲವನ್ನೂ ಮಾಡ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಮಾತ್ರ ಬರ್ತಾರೆ ಎನ್ನುವ ವಿರೋಧ ಪಕ್ಷಗಳ ಮಾತಿಗೆ ತಿರುಗೇಟು ಕೊಡುವ ಕೆಲಸ ಮಾಡುತ್ತಿದ್ದಾರೆ. ಕನ್ನಡಿಗರಿಗಾಗಿ ತನ್ನ ಭಾಷಣದ ಪ್ರಮುಖ ವಾಕ್ಯಗಳಲ್ಲೇ ಕನ್ನಡೀಕರಿಸಿ ಸಹೋದರ ಸಹೋದರಿಯರೇ ಎಂದು ಪ್ರಸ್ತಾಪ ಮಾಡುತ್ತಿದ್ದಾರೆ. ಚುನಾವಣೆ(election) ಸಮಯದಲ್ಲೇ ಬಂದರೂ ಕರುನಾಡಿನ ಜನರನ್ನು ಹೇಗೆ ಕಟ್ಟಿ ಹಾಕಬಹುದು ಅನ್ನೋದನ್ನು ಲೆಕ್ಕಾಚಾರ ಮಾಡಿ ಮೋದಿ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಪ್ರಚಾರದ ಕೊನೇ ಹಂತದಲ್ಲಿರುವ ಪ್ರಧಾನಿ ಮೋದಿ(narendra modi) ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ(road show) ಹಮ್ಮಿಕೊಂಡಿದ್ದಾರೆ.


ಮೋದಿ ರೋಡ್ ಶೋಗೆ 10 ಲಕ್ಷ ಜನರ ಸೇರ್ಪಡೆ..
ಬಿಜೆಪಿ ಕಚೇರಿಯಲ್ಲಿ(BJP office) ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಟ್ಟಿರುವ ಬಿಜೆಪಿ ನಾಯಕರು. ಪ್ರಧಾನಿ ನರೇಂದ್ರ ಮೋದಿ(narendra modi) ಮೇ 6 ರಂದು ಕರ್ನಾಟಕ ಸಂಕಲ್ಪ ಹೆಸರಲ್ಲಿ ಮಹಾ ಱಲಿ ನಡೆಸಲಿದ್ದಾರೆ. ಈಗಾಗಲೇ ಕರ್ನಾಟಕದ ಜನತೆ ಮೋದಿ ಅವರನ್ನ ಹರಿಸಿದ್ದಾರೆ. ರ್ಯಾಲಿ ಮೂಲಕ ಕರ್ನಾಟಕ(karnataka) ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಅಂತ ಶನಿವಾರ ರೋಡ್ ಶೋ ಮಾಡಲಾಗ್ತಿದೆ. ಸೋಮವಾರ ವಾರದ ಮೊದಲ ದಿನ ಸಮಸ್ಯೆ ಆಗಲಿದೆ ಅಂತ ಶನಿವಾರಕ್ಕೆ ಪ್ರೀ ಪೋನ್ ಮಾಡಿಕೊಂಡಿದ್ದೇವೆ. ಱಲಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಆಗದಂತೆ ಪೊಲೀಸರು,(police) ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ ಎಂದಿದ್ದಾರೆ ಸಂಸದ ಪಿ.ಸಿ ಮೋಹನ್. ಬೆಂಗಳೂರಲ್ಲಿ ಒಟ್ಟು 38 ಕಿ.ಮೀ ಱಲಿ ನಡೆಯಲಿದೆ. ನಮ್ಮ ಱಲಿ ಭಾರತ್ ಜೋಡೋ ಱಲಿಗೆ ವಿಭಿನ್ನವಾಗಿ ಇರಲಿದೆ. ಮೋದಿ ಅವರಿಗೆ ಆಶೀರ್ವಾದ ಮಾಡಲು 10 ಲಕ್ಷ ಜನ ಬರಲಿದ್ದಾರೆ ಎಂದಿದ್ದಾರೆ.

ಇಲ್ಲಿ ಮೋದಿ ಅಬ್ಬರ ಇರುತ್ತೆ.. ಟ್ರಾಫಿಕ್ ಶತಸಿದ್ಧ..
ಬೆಂಗಳೂರಿನ(bangalore) ಹೆಚ್ಎಎಲ್ ವಿಮಾನ ನಿಲ್ದಾಕ್ಕೆ ಬಂದು ಇಳಿಯುವ ಪ್ರಧಾನಿ ಮೋದಿ, ಸಿ.ವಿ ರಾಮನ್ ನಗರ, ಬ್ರಿಗೆಡ್ ರಸ್ತೆಯ ವಾರ್ ಮೆಮೋರಿಯಲ್ ತಲುಪಲಿದೆ. ಅಲ್ಲಿಂದ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗುವ ರೋಡ್ ಶೋ, ವಿವಿಧ ಕ್ಷೇತ್ರಗಳ ಮೂಲಕ ಮಲ್ಲೇಶ್ವರಂ ತಲುಪಲಿದೆ. ಬೆಳಗ್ಗೆ 10.1 ಕಿ.ಮೀ ಱಲಿ ನಡೆಯಲಿದ್ದು, ಸಂಜೆ 26.5 ಕಿ.ಮೀ ಱಲಿ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. 38 ಕಿ.ಮೀ ಪ್ರಧಾನಿ ಮೋದಿ ಱಲಿ ಇರುವ ಕಾರಣಕ್ಕೆ ಮುಂದಿನ ಶನಿವಾರ ಬೆಂಗಳೂರಿನ(bangalore) ಬಹುತೇಕ ಪ್ರದೇಶಗಳಲ್ಲಿ ಬಂದ್ ವಾತಾವರಣ ಸೃಷ್ಟಿಯಾಗಲಿದೆ. ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಸಂಚಾರ ಮಾಡುವ ಕಾರಣ ಜನಜೀವನ ಅಸ್ತವ್ಯಸ್ತ ಆಗುವುದು ನಿಶ್ಚಿತ. ಕಳೆದ ಭಾನುವಾರ ಅಮಿತ್ ಷಾ(amith shah) ರೋಡ್ ಶೋ ವೇಳೆ ಜನರು ಪೊಲೀಸರ ಜೊತೆಗೆ ವಾಗ್ವಾದ ಮಾಡಿದ್ದರು. ಮುಂದಿನ ಶನಿವಾರ ಕೂಡ ಜನಾಕ್ರೋಶ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಬಿಜೆಪಿ ಭದ್ರಕೋಟೆ, ಪ್ರಜಾಪ್ರಭುತ್ವದ ಹಬ್ಬ – ತೇಜಸ್ವಿ ಸೂರ್ಯ
ಪ್ರಧಾನ ಮಂತ್ರಿ ನರೇಂದ್ರ ಮೋದಿ(narendra modi) ರೋಡ್ ಬಗ್ಗೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ,(tejaswi surya) ನಮ್ಮ ಬೆಂಗಳೂರಿಗೆ, ನಮ್ಮ ಮನೆ ಬಾಗಿಲಿಗೆ ಮೋದಿ ಬರ್ತಿದ್ದಾರೆ. ಇದು ಇಡೀ ಜನತೆ ಸಂತೋಷ ಪಡುವ ಕ್ಷಣ. ಇದು ಐದು ವರ್ಷಕ್ಕೊಮ್ಮೆ ಬರುವ ಪ್ರಜಾಪ್ರಭುತ್ವ ಹಬ್ಬದ ಸಂದರ್ಭ. ವಿಶ್ವದ ನಾಯಕ ಬೆಂಗಳೂರಿಗೆ ಬರ್ತಿದ್ದಾರೆ. ಬೆಂಗಳೂರು ಬಿಜೆಪಿ ಭದ್ರಕೋಟೆ. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯನ್ನು ಆರಿಸಿ ಕಳಿಸಿದ್ದೀರಿ. ಹಾಗಾಗಿ ಬೆಂಗಳೂರಿನ ಜನತೆಗೆ ಕೃತಜ್ಞತೆ ಸಲ್ಲಿಸಲು ಮೋದಿ ಬರ್ತಿದ್ದಾರೆ. ನೀವೂ ಬಂದು ಮೋದಿ ಅವರಿಗೆ ಆಶೀರ್ವಾದ ಮಾಡಬಹುದು. ಬೆಂಗಳೂರಿನಲ್ಲಿ ಯಾವ ಕಾರಣಕ್ಕೂ ಟ್ರಾಫಿಕ್ ಜಾಮ್(traffic jam) ಆಗಬಾರದು ಅಂತ ಹೇಳಿದ್ದಾರೆ. ಸಾಧ್ಯವಾದಷ್ಟು ಕಡಿಮೆ ಸಮಸ್ಯೆ ಆಗುವಂತೆ ಮಾಡಿದ್ದೇವೆ. ಬೆಂಗಳೂರಿಗೆ ಪ್ರಧಾನಿ ಮೋದಿ ಬರ್ತಿರೋದಕ್ಕೆ ಜನರು ಖುಷಿಯಾಗಿದ್ದಾರೆ ಎನ್ನುವ ಮೂಲಕ ಜನರಿಂದ ಆಕ್ಷೇಪವಿಲ್ಲ. ಟ್ರಾಫಿಕ್ ಸಹಿಸಿಕೊಳ್ಳಲು ರೆಡಿಯಾಗಿದ್ದಾರೆ ಎನ್ನುವುನ್ನು ಸಂಸದರೇ ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಸಂಚಾರ ಮಾಡುವ ಮಾರ್ಗ ಹೀಗಿದೆ..
ಬೊಮ್ಮನಹಳ್ಳಿ, ಜೆ.ಪಿ ನಗರ, ಜಯನಗರ, ಅರಬಿಂದೊ ಮಾರ್ಗ, ಕೂಲ್ ಜಾಯಿಂಟ್, ಮಯ್ಯಾಸ್, ಕರಿಸಂದ್ರ, ಸೌತ್ ಎಂಡ್ ಸರ್ಕಲ್, ನೆಟ್ಕಲ್ಲಪ್ಪ ಸರ್ಕಲ್, ಎನ್.ಆರ್ ಕಾಲೋನಿ, ಬಸವನಗುಡಿ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್, ಟಿ.ಆರ್ ಮಿಲ್, ಸಿರ್ಸಿ ಸರ್ಕಲ್, ಈಟಾ ಮಾಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ಮೋದಿ ಆಸ್ಪತ್ರೆ, ನವರಂಗ್ ಸರ್ಕಲ್, ಸಂಪಿಗೆ ರಸ್ತೆ, ಮಲ್ಲೇಶ್ವರ, ಸರ್ಕಲ್ ಮಾರಮ್ಮ ದೇವಸ್ಥಾನ ಬಳಿ ರೋಡ್ ಶೋ ಅಂತ್ಯ ಆಗಲಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ಇರೋದಿಲ್ಲ. ಬದಲಿ ಮಾರ್ಗದಲ್ಲಿ ಸಂಚಾರ ಮಾಡಲು ಅವಕಾಶ ಮಾಡಿಕೊಡಲಾಹುತ್ತದೆ. ಆದರೆ ಬೆಳಗ್ಗೆಯಿಂದಲೂ ರಸ್ತೆಯಲ್ಲಿ ಟ್ರಾಫಿಕ್ ಜಾಮ್(traffic jam) ಗ್ಯಾರಂಟಿ. ಮಳೆ ಬಂದರೆ ಟ್ರಾಫಿಕ್ ದುಪ್ಪಟ್ಟು ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಚುನಾವಣೆ(election) ಸಮಯದಲ್ಲಿ ಮಾತ್ರ ಬರ್ತಾರೆ ಎನ್ನುವ ಮಾತಿನಂತೆ, ಮೋದಿ ಬರ್ತಾರೆ ಜನರಿಗೆ ಸಂಕಷ್ಟ ತರ್ತಾರೆ ಎನ್ನುವಂತಾಗಿದೆ.
