ಮೈಸೂರು : ಮಕರ ಸಂಕ್ರಾತಿ (Makarasankranti) ದಿನ ನಾಗೇಂದ್ರ ಅವರಿಗೆ ಸಿಹಿ ಸುದ್ದಿಯನ್ನು ಪಕ್ಷ ಕೊಟ್ಟಿದೆ. ನಾಗೇಂದ್ರ (Lnagendra) ಅವರಿಗೆ ಪಕ್ಷದ ಸಂಘಟಯಲ್ಲಿ ಮತ್ತಷ್ಟು ತೊಡಗಿಸಿಕೊಂಡು ನಗರದಲ್ಲಿ ಪಕ್ಷ ಸಂಘಟನೆಯಲ್ಲಿ ಉತ್ತಮವಾಗಿ ಕೆಲಸ ಮಾಡಲು ಆ ಚಾಮುಂಡಿ ತಾಯಿ ಶಕ್ತಿ ನೀಡಲಿ. ನಾಗೇಂದ್ರ ಅಣ್ಣ ಅವರು ಶಾಸಕರಾಗಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸೋಲು ಗೆಲುವು ಸಾಮಾನ್ಯ ಅದಕ್ಕೆ ಕುಗ್ಗದೆ ಮುಂದಿನ ದಿನಗಳು ಗೆಲುವಿಗೆ ಶ್ರಮಿಸೋಣ ಎಂದು ಸಂಸದ ಪ್ರತಾಪ್ ಸಿಂಹ (Prathapsimha) ಹೇಳಿದರು.
![](https://pratidhvani.com/wp-content/uploads/2024/01/IMG-20240115-WA0196-1024x478.webp)
ಕ್ರೈಸ್ತ ಧರ್ಮದಕ್ಕೆ 106 ದೇಶಗಳಿವೆ, ಮುಸಲ್ಮಾನರಿಗೆ 56 ದೇಶಗಳಿವೆ ನಮ್ಮ ಹಿಂದೂ ಧರ್ಮಕ್ಕೆ ಇರೋದು ಇದೊಂದೆ ದೇಶ.ಹಾಗಾಗಿ ಹಿಂದುತ್ವದ ಪ್ರತಿಪಾದನೆಯ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಎಲ್ಲರು ಮುಂದಿನ ದಿನಗಳಲ್ಲಿ ದಿನಗಳಲ್ಲಿ ಪಕ್ಷ ಸಂಘಟನೆ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಸದ ಪ್ರತಾಪ್ ಸಿಂಹ ಅಭಿನಂದನೆ ಸಲ್ಲಿಸಿದರು
ನಾಗೇಂದ್ರ ಅವರು 1994 ರಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ (Bjp) ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಬಳಿಕ ಅವರು 1996 ರಲ್ಲಿ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿ ಬಂದರು.ಅಂದಿನಿಂದ ಇಲ್ಲಿವರೆಗೂ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿದ್ದು ಶಾಸಕರಾಗಿ ಬಹಳ ಅಭಿವೃದ್ಧಿ ಕೆಲಸಗಳನ್ನ ಮಾಡಿ ಬಂದವರು.
ನಾನು ಅಧ್ಯಕ್ಷನಾಗಿದ್ದಾಗ ಸಾಕಷ್ಟು ಬೆಂಬಲವಾಗಿ ನನಗೆ ಸಹಕಾರ ನೀಡಿದರು.ಮೊದಲ ಬಾರಿಗೆ ಮೇಯರ್ ಮತ್ತು ಉಪ ಮೇಯರ್ ಸ್ಥಾನ ನಮಗೆ ಒಲಿದು ಬಂತು ಎಂದು ಶಾಸಕ ಶ್ರೀವತ್ಸ (Srivatsa) ಹೇಳಿದರು.
![](https://pratidhvani.com/wp-content/uploads/2024/01/IMG-20240115-WA0197-1024x478.webp)
ಮೇಯರ್ ಶಿವಕುಮಾರ್ ಅವರ ಅವಧಿಯಲ್ಲಿ ಚಾಲನೆ ಕೊಟ್ಟ ಕಾಮಗಾರಿಗಳು ಈಗಲೂ ನಡೆಯುತ್ತಿವೆ.ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಿ ಸಂಘಟನೆ ಮುನ್ನೆಡೆಸಿಕೊಂಡು ಹೋಗುವ ಸಾಮರ್ಥ್ಯ ನಾಗೇಂದ್ರ ಅವರಿಗೆ ಇದೆ.
ಅವರಿಗೆ ಎಲ್ಲ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ಕೊಡಲಿ ಎಂದು ಶುಭಕೋರಿದರು.
ಇನ್ನು ನೂತನ ಅದ್ಯಕ್ಷರಾಗಿ ಪದ ಗ್ರಹಣ ಮಾಡಿ ಮಾತನಾಡಿದ ಎಲ್.ನಾಗೇಂದ್ರ ಇದೊಂದು ಅಪರೂಪದ ಕಾರ್ಯಕ್ರಮ.ಇದು ನನ್ನ ಸೌಭಾಗ್ಯ ಇಂದು ಹಬ್ಬ ಹಬ್ಬದ ದಿನದಂದು ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರವುದು ನನಗೆ ಅತೀವ ಸಂತಸ ತಂದಿದೆ.ಇದು ನನಗೆ ಒಂದು ಪ್ರಮುಖವಾದ ದಿನ.
ಪಕ್ಷ ಕೊಟ್ಟ ಜವಾಬ್ದಾರಿಯನ್ನ ನಾನು ವಹಿಸಿದ್ದೇನೆ
ಕರಸೇವೆ ಪ್ರಾರಂಭವಾದ ಕಾಲದಿಂದಲೂ ನಾನು ಇದ್ದೇನೆ.ಕರಸೇವೆಗೆ ನಮ್ಮ ಮನೆಯವರು ಎದುರಿ ನನ್ನನ್ನ ಕಳುಹಿಸಲಿಲ್ಲ. ಕರಸೇವೆ ಪ್ರಾರಂಭವಾದಾಗ ನಾನು ಪಾರ್ಟಿ ಮೆಂಬರ್ ಆದೆ ಎಂದರು.
ಇಂದು ಶ್ರೀರಾಮನ ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ನಾನು ಅಧ್ಯಕ್ಷನಾಗಿರೋದು ಬಹಳ ಸಂತೋಷವಾಗಿದೆ.ಇಂತಹ ಒಂದು ಅವಕಾಶ ಮಾಡಿಕೊಟ್ಟ ವಿಜಯೇಂದ್ರ ಅವರಿಗೆ ನಾನು ಧನ್ಯವಾದಗಳನ್ನ ಹೇಳುತ್ತೇನೆ ನನಗೆ ಸಣ್ಣ ಪುಟ್ಟ ವಿಚಾರಗಳನ್ನ ಬದಿಗೊತ್ತಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ.
ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಹೋರಾಟ ಮಾಡೋಣ. ನಿಮ್ಮೆಲ್ಲರ ಸಹಕಾರ ನನಗೆ ಇರಲಿ
ಎಂದು ನಾಗೇಂದ್ರ ಹೇಳಿದರು