ಮುಖ್ಯಮಂತ್ರಿ ಸಿದ್ದರಾಮಯ್ಯ (Cm siddaramaiah) ವಿರುದ್ಧ ದಾವಣಗೆರೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಕಿಡಿಕಾರಿದ್ದಾರೆ. ಎರಡುವರೆ ತಿಂಗಳ ಹಿಂದೆ ಸಿದ್ದರಾಮಯ್ಯನವರಿಗೆ ಅಕ್ರಮವಾಗಿ ಪತ್ನಿಯ ಹೆಸರಲ್ಲಿ ಪಡೆದ 14 ಸೈಟ್ ಹಿಂದಿರುಗಿಸುವಂತೆ ಸಲಹೆ ನೀಡಿದ್ದೇ. ಆದ್ರೆ ನನ್ನ ಮಾತನ್ನು ಕೇಳಿಲ್ಲ ಎಂದಿದ್ದಾರೆ.
ಅಂದು ಸುದ್ದಿಗೋಷ್ಟಿಯಲ್ಲಿ 62 ಕೋಟಿ ನೀಡಿದ್ರೆ ವಾಪಸ್ಸು ಕೊಡ್ತಿನಿ ಅಂತ ಹೇಳಿದ್ರು.ಆದ್ರೆ ಅದು ದಲಿತರ ಭೂಮಿ. ಯಾವಾಗ ಅವರು 62 ಕೋಟಿ ಕೊಡಬೇಕು ಎಂದರೋ ಅವಾಗ್ಲೆ ಅವರ 45 ವರ್ಷದ ರಾಜಕೀಯ ವ್ಯಕ್ತಿತ್ವ ಹಾಳಾಯಿತು ಎಂದರು.
ಸಿದ್ದರಾಮಯ್ಯ ಅವರ ಬಾಯಿಂದ ಆ ರೀತಿ ಮಾತು ಬಾರಬಾರದಿತ್ತು. ಅಲ್ಲಿಯವರೆಗೂ ಪ್ರಾಮಾಣಿಕ ರಾಜಕಾರಣಿ ಅಂತ ಬಹಳಷ್ಟು ಜನ ನಂಬಿದ್ರು. ಆದ್ರೆ ಅವರ ಮಾತಿನಿಂದಲೇ ಅವರ ಪ್ರಾಮಾಣಿಕತೆ ಸುಳ್ಳು ಎಂದು ಸಾಬೀತು ಮಾಡಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.