• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಇಸ್ಲಾಮೋಫೋಬಿಯೋ ಮುಂದಿಟ್ಟುಕೊಂಡು ಶೂದ್ರರ ಸ್ವಾತಂತ್ರ್ಯ ಕಸಿದುಕೊಂಡ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್!

ಪ್ರತಿಧ್ವನಿ by ಪ್ರತಿಧ್ವನಿ
May 11, 2022
in ಕರ್ನಾಟಕ
0
ಇಸ್ಲಾಮೋಫೋಬಿಯೋ ಮುಂದಿಟ್ಟುಕೊಂಡು ಶೂದ್ರರ ಸ್ವಾತಂತ್ರ್ಯ ಕಸಿದುಕೊಂಡ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್!
Share on WhatsAppShare on FacebookShare on Telegram

ಮುಸ್ಲಿಮರ ಅಝಾನ್ ವಿರುದ್ಧ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸುಪ್ರಭಾತ ನಡೆಸುವ ಅಭಿಯಾನ ಕೈಗೊಂಡರು. ಎರಡು ಬಾರಿ ಗಡುವು ಕೊಟ್ಟು ದೇವಸ್ಥಾನಗಳಲ್ಲಿ ಮೈಕ್ ಕಟ್ಟಿ ರಾಮಜಪ, ಹನುಮಾನ ಚಾಲೀಸ ಪಠಣೆ ಮಾಡಿದರು. ಸರ್ಕಾರ ಕೂಡ ಇದಕ್ಕೆ ಸ್ಪಂದಿಸಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿತು. ಇದೀಗ ಸರ್ಕಾರ ಧ್ವನಿ ವರ್ಧಕಗಳ ಬಳಕೆ ಬಗ್ಗೆ ಕಾನೂನು ರೂಪಿಸಿದ್ದು, ಇಂತಿಷ್ಟೇ ಮಾದರಿಯಲ್ಲಿ ಶಬ್ಧ ಮಾಡಬೇಕೆಂದು ಆದೇಶಿಸಿದೆ.‌

ADVERTISEMENT

ಆದೇಶದಲ್ಲಿ ಪ್ರಮುಖವಾಗಿ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಇಂತಿಷ್ಟೇ ಡೆಸಿಬಲ್ ನಿಗದಿ ಮಾಡಿ ಆದೇಶ ಮಾಡಿದೆ.‌ ಕೈಗಾರಿಕಾ ಝೋನ್ – 75 dB – 70 dB, ಕಮರ್ಷಿಯಲ್ ಝೋನ್ – 65 dB – 55 dB, ರೆಸಿಡೆನ್ಸಿಯಲ್ ಝೋನ್ – 55 dB – 45 dB, ಸೈಲೆಂಟ್ ಝೋನ್ – 50 dB – 40 dB ಅಷ್ಟೇ ಶಬ್ದ ಇರಬೇಕು ಎಂದು ಸುತ್ತೋಲೆ ಹೊರಡಿಸಿದೆ. ಇದರ ಜೊತೆಗೆ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಎಲ್ಲಾ ರೀತಿಯ ಧ್ವನಿ ವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ಕಡಿವಾಣ ಹಾಕಲಾಗಿದೆ.‌ಆದರೆ ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಅನುಮತಿ ಸಿಗಲಿದೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ವಾಹನಗಳು ಹಾರ್ನ್ ಮೂಲಕ ಕಿರಿಕಿರಿ ಮಾಡುವಂತಿಲ್ಲ, ಸಾರ್ವಜನಿಕರಿಂದ ದೂರು ಬಂದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ. ಮನೆಯಲ್ಲಿ ನಡೆಸುವ ಕಾರ್ಯಕ್ರಮ ಹಾಗೂ ಇತರೆ ಖಾಸಗಿ ಕಾರ್ಯಕ್ರಮ ಶಬ್ಧ 5dB ಮೀರದಂತೆ ಇರಬೇಕು ಎಂದು ಹೇಳಿದೆ.‌

ಹೀಗೆ ನಿರ್ದಿಷ್ಟ ಡೆಸಿಬಲ್ ಅಷ್ಟೇ ಶಬ್ದ ಇರಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು‌ ವಿಚಾರ ಎಂದರೆ, ಈ ಮೂಲಕ ಕೇವಲ ಮುಸ್ಲಿಮರ ಅಝಾನ್ ಮಾತ್ರವಲ್ಲದೆ ಜಾತ್ರೆ, ಭಜನೆ, ಗಣೇಶ ಚತುರ್ಥಿ, ಕ್ರೈಸ್ತರ ಉತ್ಸವ ಹೀಗೆ ಎಲ್ಲದಕ್ಕೂ ಕಡಿವಾಣ ಬಿದ್ದಿದೆ. ಆಗಾಗ್ಗೆ ಗೆಳೆಯರಲ್ಲಾ ಸೇರಿ ಸಂಭ್ರಮಿಸುವ ನೆರೆಹೊರೆಯ ಮದುವೆ, ಇತರೆ ಕಾರ್ಯಕ್ರಮಗಲ್ಲಿನ ಧ್ವನಿ ವರ್ಧಕಗಳ ಬಳಕೆಗೆ ಬ್ರೇಕ್ ಬಿದ್ದಿದೆ. ಇದು ಶೂದ್ರರು ಸಂಭ್ರಮಿಸುವುದನ್ನು ಸಹಿಸಿದ ಮೇಲ್ಜಾತಿ ಬ್ರಾಹ್ಮಣ್ಯದ ಒಂದು ಭಾಗವೇ ಎಂದು ಈ ಮೂಲಕ ಸಾಬೀತಾಗಿದೆ.

ಬಹುತೇಕ ಕಡೆಗಳಲ್ಲಿ ಜಾತ್ರೆ ಎಂದರೆ ಶೂದ್ರರ ಸಂಭ್ರಮ. ಇತ್ತೀಚೆಗೆ ನೀವು ಒಂದು ಸುದ್ದಿ ಗಮನಿಸರಬಹುದು. ಕೊರಗ ಸಮುದಾಯದ ಕುಟುಂಬವೊಂದು ಮದುವೆ ಸಂಭ್ರಮದಲ್ಲಿ ಡಿಜೆ ಹಾಕಿದ್ದಕ್ಕೆ ಹಿಂದೂ ಸಂಘಟನೆಗಳು ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿತ್ತು. ಇದರ ಮುಂದುವರೆದ ಭಾಗವೇ ಇದು. ಇಂಥಾ ತುಳಿಯಲ್ಪಟ್ಟ ಜಾತಿಗಳು ಮೈ ಮುರಿದು ದುಡಿದು ಒಂದು ದಿನ ಸಂಭ್ರಮಿಸಿದರೆ ಬ್ರಾಹ್ಮಣ್ಯ ಸಹಿಸಿಕೊಳ್ಳುವುದಿಲ್ಲ.‌ ಈಗ ಅವರ ಸಂಭ್ರಮಕ್ಕೆ ಹಾಡು ಹಾಕಬೇಕೋ ಬೇಡವೋ ಎಂದು ಪ್ರಮೋದ್ ಮುತಾಲಿಕ್ ರಂಥಾ ಬ್ರಾಹ್ಮಣರು ಕಾನೂನಿನ ಸಹಾಯದೊಂದಿಗೆ ನಿರ್ಧರಿಸಿದರು. ಇದಕ್ಕೆ ಇವರು ಬಳಸಿದ್ದು ಮುಸ್ಲಿಮರನ್ನು. ಅಸಲಿಗೆ ಇವರಿಗೆ ಮುಸ್ಲಿಮರ ಅಝಾನ್ ನಿಲ್ಲಿಸುವುದು ಒಂದು ಮಾತ್ರವಲ್ಲ ಉದ್ದೇಶ. ಮುಸ್ಲಿಮರನ್ನು ಶೂದ್ರರ ವಿರುದ್ಧ ಎತ್ತಿಕಟ್ಟಿ ಬ್ರಾಹ್ಮಣ್ಯದ ಅಸ್ಪೃಶ್ಯ ಆಚರಣೆಗಳನ್ನು‌ ಜಾರಿ ಮಾಡುವುದು.

ಸದ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಯಾವುದೇ ಮನೆಗಳಲ್ಲಿ ಎಂಥದ್ದೇ ಕಾರ್ಯಕ್ರಮಕ್ಕೂ ಧ್ವನಿ ವರ್ಧಕ ಬಳಸುವಂತಿಲ್ಲ ಎಂದಿದೆ. ತಮಟೆ ಬಡಿಯುವುದು ನಿಷೇಧ ಎಂದು ಹೇಳಿದೆ. ಸಾವಿನ ಮನೆಯಲ್ಲಿ ತಮಟೆ ಬಡಿಯುವುದು ಬ್ರಾಹ್ಮಣರ ಆಚರಣೆಯೇ..? ಅಲ್ಲವಲ್ಲ. ಅಂಥಾ ಶೂದ್ರರ ಆಚರಣೆಗೂ ಪ್ರಮೋದ್ ಮುತಾಲಿಕ್ ರಂಥವರು ನಯವಾಗಿ ಕೊಳ್ಳಿ ಇಟ್ಟರು. ಇಸ್ಲಾಮೋಫೋಬಿಯಾವನ್ನು‌ ಬಳಸಿಕೊಂಡು ಹಿಂದೂ ಪರ ಸಂಘಟನೆಗಳು ಶೂದ್ರ ಹಿಂದೂಗಳ ಸ್ವಾತಂತ್ರ್ಯಕ್ಕೇ ಕೊಳ್ಳಿ ಇಟ್ಟಿದ್ದಾರೆ. ಇದಕ್ಕೆ ಬೆಂಬಲಿಸಿದ ಎಲ್ಲಾ ಶೂದ್ರರು ಈಗ ಪ್ರಮೋದ್ ಮುತಾಲಿಕ್ ರಂಥಾ ಬ್ರಾಹ್ಮಣರ ಕಾಲಿಗೆರಗಿ ಧನ್ಯತಾ ಭಾವ ಧಕ್ಕಿಸಿಕೊಳ್ಳಬೇಕು.

Tags: BJPCongress PartyCovid 19ಇಸ್ಲಾಮೋಫೋಬಿಯೋನರೇಂದ್ರ ಮೋದಿಪ್ರಮೋದ್ ಮುತಾಲಿಕ್ಬಿಜೆಪಿಶೂದ್ರರ ಸ್ವಾತಂತ್ರ್ಯ
Previous Post

ಲ್ಯಾಪ್ ಟಾಪ್ ಖರೀದಿಯಲ್ಲೂ ‌ಗೋಲ್‌ ಮಾಲ್‌ : ಕಾಂಗ್ರೆಸ್‌ ನಾಯಕ ರಾಯರೆಡ್ಡಿ ಗಂಭೀರ ಆರೋಪ

Next Post

ವಿಭಿನ್ನ ಕಥಾ ಹಂದರದ ಸಿನಿಮಾ ಧರಣಿ ಮಂಡಲ ಮಧ್ಯದೊಳಗೆ!

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
Next Post
ವಿಭಿನ್ನ ಕಥಾ ಹಂದರದ ಸಿನಿಮಾ ಧರಣಿ ಮಂಡಲ ಮಧ್ಯದೊಳಗೆ!

ವಿಭಿನ್ನ ಕಥಾ ಹಂದರದ ಸಿನಿಮಾ ಧರಣಿ ಮಂಡಲ ಮಧ್ಯದೊಳಗೆ!

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada