ಧರಣಿ ಮಂಡಲ ಮಧ್ಯದೊಳಗೆ ಎಂದರೆ ಮೊದಲಿಗೆ ನೆನಪಾಗುವುದು ಪುಣ್ಯಕೋಟಿ ಪದ್ಯ. ಇದೀಗ ಇದೇ ಹೆಸರಿನ ಚಿತ್ರವೊಂದು ನಮ್ಮ ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿ ಚಿತ್ರೀಕರಣ ಮುಗಿಸಿ ತೆರಗೆ ಬರಲು ಸಜ್ಜಾಗಿದೆ.
ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜ್ಕುಮಾರ್ ಅವರ ಅಭಯ ಹಸ್ತದಿಂದ ಬಿಡುಗಡೆಯಾಗಿದ್ದ ಪೋಸ್ಟರ್ ಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಹುಟ್ಟಿ ಹಾಕಿತ್ತು. ಇತ್ತೀಚಿಗೆ ಬಿಡುಗಡೆಯಾದ ಮಾತು ಮಾತಲ್ಲಿ ಹಾಡಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಚಿತ್ರ ತಂಡದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಗುಳ್ಟು ಖ್ಯಾತಿಯ ನವೀನ್ ಶಂಕರ್ ನಾಯಕನಾಗಿ ನಟಿಸಿದ್ದಾರೆ, ನಾಯಕಿಯಾಗಿ ಸ್ಯಾಂಡಲ್ವುಡ್ ಶಾಕುಂತಲೆ ಐಶಾನಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ತಾರಾಗಣದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಕರಿ ಸುಬ್ಬು, ದಿ || ಮೋಹನ್ ಜುನೇಜಾ, ಕನ್ನಡಿಗ ಚಿತ್ರ ಖ್ಯಾತಿಯ ಜಯಶ್ರೀ ಆರಾಧ್ಯ, ಶಾಂಭವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಟ ಯಶ್ ಶೆಟ್ಟಿ ಹಾಗೂ ನಟಿ ಶಾಂಭವಿ
ಇನ್ನು ಈ ಚಿತ್ರದ ವಿಶೇಷವೆಂದರೆ ಯಶ್ ಶೆಟ್ಟಿ ಹಾಗು ಶಾಂಭವಿ ನಾಲ್ಕನೇ ಭಾರೀ ಜೊತೆಯಾಗಿ ನಟಿಸಿದ್ದಾರೆ. ಮೊಟ್ಟ ಮೊದಲ ಭಾರಿಗೆ ಬೋಲ್ಡ್ ಅವತಾರದಲ್ಲಿ ನಟಿ ಐಶಾನಿ ಶೆಟ್ಟಿ ಕಾಣಿಸಿಕೊಂಡಿದ್ದು ಎಲ್ಲರು ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಗಮನ ಸೆಳೆಯುತ್ತಾರೆ ಎನ್ನಲಾಗಿದೆ. ಕರಿ ಸುಬ್ಬು ಹಾಗು ದಿ || ನಟ ಮೋಹನ್ ಜುನೇಜಾ ತಮ್ಮ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತಾರೆ. ಸಂಜೆ 6ರಿಂದ ಬೆಳ್ಳಗ್ಗೆ 6ರ ನಡುವೆ ಕಥೆಯ ಸುತ್ತ ಚಿತ್ರ ಸಾಗುತ್ತದೆ ಎಂದು ನಿರ್ದೇಶಕ ಶ್ರೀಧರ್ ಶಿಕಾರಿಪುರ ಹೇಳುತ್ತಾರೆ.
ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಶ್ರೀಧರ್ ಶಿಕಾರಿಪುರ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು ಈ ಹಿಂದೆ ಖ್ಯಾತ ನಿರ್ದೇಶಕರಾದ ಪುರಿ ಜಗನ್ನಾಥ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ.
ಧರಣಿ ಮಂಡಲ ಮಧ್ಯದೊಳಗೆ ಚಿತ್ರತಂಡ
ಈ ಚಿತ್ರವನ್ನು ಓಂಕಾರ್ ನಿರ್ಮಾಣ ಮಾಡಿದ್ದು ಸಹ ನಿರ್ಮಾಪಕರಾಗಿ ಕಾಂಚನ್ ಹಾಗು ಗೌತಮಿ ರೆಡ್ಡಿ ಸಾಥ್ ನೀಡಿದ್ದಾರೆ. ಕ್ಯಾಮರಾಮ್ಯಾನ್ ಆಗಿ ಕೀರ್ತನ್ ಪೂಜಾರಿ ಕೆಲಸ ಮಾಡಿದ್ದು ಬಕ್ಕೇಶ್ ಹಾಗು ಕಾರ್ತಿಕ್ ಸಂಗೀತ ಸೋಯೋಜಿಸಿದ್ದಾರೆ. ಸಂಕಲನಕಾರರಾಗಿ ಉಜ್ವಲ್ ಚಂದ್ರ ತಮ್ಮ ಕೈಚಳಕ ತೋರಲಿದ್ದಾರೆ.
ಇನ್ನು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಬಾಕಿ ಕೆಲಸ ಮುಗಿದ ನಂತರ ಚಿತ್ರವನ್ನ ಅದ್ದೂರಿಯಾಗಿ ತೆರೆಗೆ ತರಲಾಗುವುದು ಎಂದು ಚಿತ್ರತಂಡ ಸುದ್ದಿಘೋಷ್ಠಿಯಲ್ಲಿ ಹೇಳಿಕೊಂಡಿದೆ.