• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ʼಮೇಕೆದಾಟು ಮಹಾಭಾರತʼದಲ್ಲಿ ಏಕಾಂಗಿ ಅಭಿಮನ್ಯುವಾದರೆ ಅಶ್ವಥನಾರಾಯಣ?

Shivakumar by Shivakumar
January 12, 2022
in ಕರ್ನಾಟಕ, ರಾಜಕೀಯ
0
ʼಮೇಕೆದಾಟು ಮಹಾಭಾರತʼದಲ್ಲಿ ಏಕಾಂಗಿ ಅಭಿಮನ್ಯುವಾದರೆ ಅಶ್ವಥನಾರಾಯಣ?
Share on WhatsAppShare on FacebookShare on Telegram
ADVERTISEMENT

ಕಾಂಗ್ರೆಸ್‌ ನಾಯಕರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಮೂರು ದಿನಗಳ ಹಿಂದೆ ಮೇಕೆದಾಟುವಿನಿಂದ ಆರಂಭಿಸಿರುವ ಪಾದಯಾತ್ರೆ, ಕೆಪಿಸಿಸಿ ಅಧ್ಯಕ್ಷರ ತವರು ಕನಕಪುರಕ್ಕೆ ತಲುಪುವ ಹೊತ್ತಿಗಾಗಲೇ ರಾಜ್ಯ ರಾಜಕಾರಣದ ಹರಿವಿಗೆ ತಿರುವು ನೀಡುವ ಸೂಚನೆಗಳನ್ನು ಈಗಾಗಲೇ ನೀಡಿದೆ.

ಕಾಂಗ್ರೆಸ್‌ ಪಕ್ಷದ ಹಿಂದಿನ ಸರ್ಕಾರ, ಕೆಪಿಸಿಸಿ ಅಧ್ಯಕ್ಷ ಮತ್ತು ಮೇಕೆದಾಟು ಪಾದಯಾತ್ರೆ ರೂವಾರಿ ಡಿ ಕೆ ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ನಡೆಸಿದ ನಿರಂತರ ವಾಗ್ದಾಳಿ ಮತ್ತು ಪಾದಯಾತ್ರೆಯಿಂದ ಹಿಂದೆ ಸರಿಯುವಂತೆ ಮಾಡಲು ಆಡಳಿತ ಸರ್ಕಾರ ನಡೆಸಿದ ಪ್ರಯತ್ನಗಳ ಹೊರತಾಗಿಯೂ ನಿಗದಿಯಂತೆ ಪಾದಯಾತ್ರೆ ಆರಂಭವಾಯಿತು.

ಅದರಲ್ಲೂ ಬಿಜೆಪಿಯ ಡಬ್ಬಲ್‌ ಎಂಜಿನ್‌ ಸರ್ಕಾರವಿದ್ದರೂ ಯೋಜನೆಗೆ ಕೇಂದ್ರದ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಿಲ್ಲ. ಅದು ಬಿಜೆಪಿಯ ಜನದ್ರೋಹಿ ನಡೆಗೆ ನಿದರ್ಶನ ಎಂಬುದನ್ನು ಯಾತ್ರೆಯ ಉದ್ದಕ್ಕೂ ಕಾಂಗ್ರೆಸ್‌ ನಾಯಕರು ಹೇಳುವ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದು ಸಹಜವಾಗೇ ಬಿಜೆಪಿ ಪಾಳೆಯದಲ್ಲಿ ಭಾರೀ ಮುಜುಗರಕ್ಕೆ ಕಾರಣವಾಗಿದೆ.

ಈ ನಡುವೆ, ಮೇಕೆದಾಟು ಯೋಜನೆ ಫಲಾನುಭವಿ ಕ್ಷೇತ್ರಗಳಾದ ರಾಜ್ಯದ ಅಧಿಕಾರ ಹಿಡಿಯಲು ತೀರಾ ನಿರ್ಣಾಯಕವಾಗಿರುವ ಬೆಂಗಳೂರು ಮತ್ತು ಸುತ್ತಮುತ್ತಲ ಹಳೇ ಮೈಸೂರು ಭಾಗದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಈ ಪಾದಯಾತ್ರೆ ಎಬ್ಬಿಸಿರುವ ಹವಾ ಬಿಜೆಪಿಯ ಕೇಂದ್ರ ನಾಯಕರ ಗಮನಕ್ಕೂ ಹೋಗಿದೆ. ಅವರು ರಾಜ್ಯದ ನಾಯಕರಿಗೆ, ಅಧಿಕಾರ ಕೈಯಲ್ಲಿದ್ದು, ಕೋವಿಡ್‌ ನಿರ್ಬಂಧಗಳ ಅಸ್ತ್ರವಿದ್ದೂ ತಮಗೆ ರಾಜಕೀಯವಾಗಿ ದುಬಾರಿಯಾಗಲಿರುವ ಈ ಯಾತ್ರೆ ತಡೆಯಲಾಗದ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

“ಯೋಜನೆಯ ವಿಷಯದಲ್ಲಿ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಯೋಜಿಸಿದ ಆರಂಭದಿಂದಲೂ ಬಿಜೆಪಿ ನಾಯಕರು ಅದಕ್ಕೆ ಸಮರ್ಥ ಪ್ರತ್ಯುತ್ತರ ನೀಡುವ, ಯೋಜನೆಯ ವಿಷಯದಲ್ಲಿ ಕಾಂಗ್ರೆಸ್‌ ವೈಫಲ್ಯಗಳನ್ನು ಎತ್ತಿ ತೋರಿಸುವ ವಿಷಯದಲ್ಲಿ ಬಿಜೆಪಿ ರಾಜ್ಯ ನಾಯಕರು ಎಡವಿದ್ಧಾರೆ. ರಾಜಕೀಯವಾಗಿ ಕಾಂಗ್ರೆಸ್‌ ಉರುಳಿಸಿದ ಪ್ರಬಲ ದಾಳಕ್ಕೆ ಪ್ರತಿದಾಳ ಉರುಳಿಸುವಲ್ಲಿ ಬಿಜೆಪಿ ನಾಯಕರು ಸಂಪೂರ್ಣ ಎಡವಿದ್ದಾರೆ. ಇಂತಹದ್ದನ್ನು ರಾಜ್ಯ ನಾಯಕರಿಂದ ನಿರೀಕ್ಷಿಸಿರಲಿಲ್ಲ” ಎಂಬ ಸಂದೇಶವನ್ನು ದೆಹಲಿಯಿಂದ ಬಿಜೆಪಿ ವರಿಷ್ಠರು ರವಾನಿಸಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಸಿ ಟಿ ರವಿ, ಗೋವಿಂದ ಕಾರಜೋಳ, ಕೆ ಎಸ್‌ ಈಶ್ವರಪ್ಪ ಮತ್ತಿತರ ನಾಯಕರು ಪಾದಯಾತ್ರೆ ಆರಂಭದ ಮಾರನೇ ದಿನದಿಂದ ಕಾಂಗ್ರೆಸ್‌ ನಾಯಕರ ವಿರುದ್ಧ ಗಟ್ಟಿ ದನಿ ಎತ್ತಿದ್ದಾರೆ ಎಂಬುದು ಬಿಜೆಪಿ ಪಡಸಾಲೆಯಲ್ಲೇ ಕೇಳಿಬರುತ್ತಿರುವ ಮಾತು.

ಈ ನಡುವೆ, ಕಾಂಗ್ರೆಸ್ಸಿನ ಪಾದಯಾತ್ರೆಯ ದಾಳಕ್ಕೆ ಪ್ರತ್ಯುತ್ತರ ನೀಡಲೇಬೇಕಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್‌ ಅಶೋಕ್‌, ಸಚಿವ ಮಾಧುಸ್ವಾಮಿ, ಡಾ ಸುಧಾಕರ್‌, ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲು ಮತ್ತಿತರರು ಕೋವಿಡ್‌ ಕಾರಣದಿಂದ ಕ್ವಾರಂಟೈನ್‌ ಆಗಿದ್ದಾರೆ. ಸಿಎಂ ಸೇರಿದಂತೆ ಅವರ ಸಂಪುಟದ ಪ್ರಮುಖರು ಮತ್ತು ಮುಖ್ಯವಾಗಿ ಪಾದಯಾತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ಹೇಳಿಕೆಗಳನ್ನು ನೀಡಬೇಕಿದ್ದ ಬೆಂಗಳೂರು ಮತ್ತು ಹಳೇ ಮೈಸೂರು ಭಾಗದ ಪ್ರಮುಖ ನಾಯಕರೇ ಹೀಗೆ ಒಂದೆರಡು ದಿನಗಳ ಅಂತರದಲ್ಲಿ ದಿಢೀರನೇ ಕ್ವಾರಂಟೈನ್‌ ಹೆಸರಲ್ಲಿ ತೆರೆಮರೆಗೆ ಸರಿದಿರುವುದು ಕೂಡ ಕುತೂಹಲ ಹುಟ್ಟಿಸಿದೆ.

ಗಮನಿಸಬೇಕಾದ ಸಂಗತಿ ಎಂದರೆ; ಆರ್‌ ಅಶೋಕ್‌, ಡಾ ಸುಧಾಕರ್‌, ಬೊಮ್ಮಾಯಿ ಅಂತಹ ನಾಯಕರು ಕ್ವಾರಂಟೈನ್‌ ಹೆಸರಲ್ಲಿ ಮೌನಕ್ಕೆ ಶರಣಾಗಿರುವ ಹೊತ್ತಲ್ಲಿ ಬೆಂಗಳೂರಿನ ಮತ್ತೊಬ್ಬ ಒಕ್ಕಲಿಗ ನಾಯಕರಾದ ಸಚಿವ ಅಶ್ವಥನಾರಾಯಣ ಕನಕಪುರ, ರಾಮನಗರಗಳಂತಹ ಡಿಕೆ ಶಿ ಸಹೋದರರ ಕೋಟೆಗೇ ನುಗ್ಗಿ ಗುಟುರು ಹಾಕುತ್ತಿದ್ದಾರೆ! ಇದು ಸ್ವತಃ ಅಶ್ವಥನಾರಾಯಣ ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆಯ ಗುಟುರೋ, ಅಥವಾ ಪಕ್ಷದ ಹೈಕಮಾಂಡ್‌ ತಾಕೀತಿನ ಮೇಲೆ ಗಂಟಲ ಮೇಲಿಂದ ಮಾತ್ರ ಬರುತ್ತಿರುವ ಹೂಂಕಾರವೋ ಎಂಬುದು ಇನ್ನಷ್ಟೇ ಖಾತರಿಯಾಗಬೇಕಿದೆ!

ಸದ್ಯಕ್ಕಂತೂ ʼಅತಿರಥ ಮಹಾರಥರೆಲ್ಲಾ ಮೌನಕ್ಕೆ ಜಾರಿರುವಾಗ, ಕ್ವಾರಂಟೈನ್‌ ಆಗಿ ಬದಿಗೆ ಸರಿದಿರುವಾಗ ಅಶ್ವಥ ನಾರಾಯಣ್‌ ಅವರು ಡಿಕೆಶಿ ಸಹೋದರರ ಚಕ್ರವ್ಯೂಹದಲ್ಲಿ ನುಗ್ಗಿದ ಅಭಿಮನ್ಯುವಿನಂತೆ ಕಾಣಿಸುತ್ತಿದ್ದಾರೆ. ಕಾದು ನೋಡೋಣ.. ಮುಂದೇನಾಗುತ್ತೋ ಮಹಾಭಾರತʼ ಎಂಬುದು ಬಿಜೆಪಿಯ ಅಂತರರಂಗದ ಪಿಸುಮಾತು!

ಮೇಕೆದಾಟು ಜಾರಿಗೊಳಿಸುವ ಗಂಡಸುತನ ನಮಗೆ ಮಾತ್ರ ಇದೆ : ಸಚಿವ ASHWATH NARAYANA
Tags: BJPCovid 19ಅಶ್ವಥನಾರಾಯಣಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಒಮಿಶ್ಯೂರ್‌ ಟೆಸ್ಟ್‌ ಕಿಟ್‌ ಖರೀದಿ : ಶುರುವಾಯ್ತೆ ಮತ್ತೆ ಕೋವಿಡ್ ಲೂಟಿ?

Next Post

ಮೇಕೆದಾಟು ಜಾರಿಗೊಳಿಸುವ ಗಂಡಸುತನ ನಮಗೆ ಮಾತ್ರ ಇದೆ : ಸಚಿವ ASHWATH NARAYANA

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಮೇಕೆದಾಟು ಜಾರಿಗೊಳಿಸುವ ಗಂಡಸುತನ ನಮಗೆ ಮಾತ್ರ ಇದೆ : ಸಚಿವ ASHWATH NARAYANA

ಮೇಕೆದಾಟು ಜಾರಿಗೊಳಿಸುವ ಗಂಡಸುತನ ನಮಗೆ ಮಾತ್ರ ಇದೆ : ಸಚಿವ ASHWATH NARAYANA

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada