ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆದ ವಿಡಿಯೋ ಕಾನ್ಪರೆನ್ಸನಲ್ಲಿ ಸರ್ದಾರ ವಲ್ಲಭ್ ಭಾಯಿ ಪಟೇಲ್ ಪೊಲೀಸ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವ ಐಪಿಎಸ್ ಪರೀಕ್ಷಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ʼರಾಷ್ಟ್ರ ಮೊದಲು, ಎಲ್ಲವು ಮೊದಲುʼ (NATION FIRST, ALWAYS FIRST) ಎಂಬ ಘೋಷವಾಕ್ಯವನ್ನು ನಾವು ಮಾಡುವ ಪ್ರತಿ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಸಾರ್ವಾಜನಿಕರಲ್ಲಿ ಪೊಲೀಸರ ಬಗ್ಗೆ ಇರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಬೇಕು ಎಂದು ಅವರು ಹೇಳಿದ್ದಾರೆ .
ಪೊಲೀಸರ ಬಗ್ಗೆ ಜನರ ಮನಸ್ಸಿನಲ್ಲಿ ಮೂಡಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸುವುದೆ ದೊಡ್ಡ ಸವಾಲಾಗಿದೆ ಎಂದು ಈ ವೇಳೆ ಅವರು ಅಭಿಪ್ರಾಯ ಪಟ್ಟಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರು ಕಾರ್ಯನಿರ್ವಹಿಸಿದ ರೀತಿಗೆ ಜನರಲ್ಲಿ ಪೊಲೀಸರ ಬಗ್ಗೆ ಗ್ರಹಿಕೆಯೂ ಸ್ವಲ್ಪ ಮಟ್ಟಿಗೆ ಬದಲಾಗಿತ್ತು ಆದರೆ ತಪ್ಪು ಗ್ರಹಿಕೆಯು ಜನರ ಮನಸ್ಸಿನಲ್ಲಿ ಪುನಾರವರ್ತನೆ ಆಗುತ್ತಿರುವುದು ಬೇಸರದ ಸಂಗತಿ ಎಂದು ಈ ವೇಳೆ ಅವರು ಹೇಳಿದ್ದಾರೆ.
ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿರವರು ನಮ್ಮ ದೇಶದ ಪೊಲೀಸರು ಸಾರ್ವಜನಿಕರ ರಕ್ಷಣೆಗೆ ಸದಾ ಸಿದ್ದರಾಗಿರುತ್ತಾರೆ ಪ್ರಾಣದ ಹಂಗನ್ನು ತೊರೆದು ನಮ್ಮ ರಾಷ್ಟ್ರದ ಉದ್ದಗಲವನ್ನು ಕಾಯುತ್ತಿದ್ದಾರೆ ಕಾನೂನು ಸುವ್ಯವಸ್ಥೆ ಮತ್ತು ಭಯೋತ್ಪಾದನೆ ವಿರುದ್ದದ ಹೋರಾಟಕ್ಕೆ ಅವರುಗಳ ಕೊಡುಗೆ ಅಪಾರ ಎಂದು ನೆನೆದು ಶ್ಲಾಘಿಸಿದ್ದಾರೆ.
ಮುಂಬರುವ ಯುವ ಪೀಳಿಗೆ ಜನರ ಮನಸ್ಸಿನಲ್ಲಿ ಪೊಲೀಸರ ಬಗ್ಗೆ ಇರುವ ತಪ್ಪು ಗ್ರಹಿಕೆಯನ್ನು ಹೋಗಿಸಬೇಕೆಂದು ಈ ವೇಳೆ ಅವರು ಹೇಳಿದ್ದರು.
ಕಳೆದ 75 ವರ್ಷಗಳಲ್ಲಿ ಭಾರತ ಪೊಲೀಸ್ ಸೇವೆ ಮತ್ತು ಪೊಲೀಸರಿಗೆ ನೀಡುವ ತರಭೇತಿಯಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತಿದೆ. ಮುಂಬರುವ 25 ವರ್ಷಗಳ ನಿಮ್ಮ ವೃತ್ತಿ ಜೀವನದ ಅತ್ಯಂತ ಕಠಿಣ ಪರಿಶ್ರಮದ ಸಮಯ ಇದಕ್ಕಾಗಿ ನಿಮ್ಮ ತಯಾರಿ ಮಾನಸಿಕ ಸ್ಧಿತಿ ಮತ್ತು ಗುರಿ ಭಾರತದ ಏಳಿಗೆಗೆ ಸಹಕಾರಿಯಾಗಲ್ಲಿದೆ ಎಂದು ಹೇಳಿದರು.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗೃಹ ಸಚಿವರಾದ ಅಮಿತ್ ಷಾ ರವರು ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.