
ಚಂಡೀಗಢ:ರೈತರ ಆಂದೋಲನದ ವಿಚಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೆದ್ದಾರಿ ತಡೆ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಶನಿವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಯಿತು.

ಪಂಜಾಬ್ನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು ನಿರ್ದೇಶನ ನೀಡುವಂತೆ ಪಿಐಎಲ್ ಮೂಲಕ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.ರಾಜ್ಯದ ಹಲವಾರು ಸ್ಥಳಗಳಲ್ಲಿ “ಆಪಾದಿತ ರೈತರು ಮತ್ತು ರೈತ ಸಂಘಗಳು ಅಕ್ರಮವಾಗಿ ಅತಿಕ್ರಮಿಸಿ ಮಾರ್ಗಗಳನ್ನು ನಿರ್ಬಂಧಿಸಿವೆ” ಎಂದು ಅದು ಆರೋಪಿಸಿದೆ.

ಇದರಿಂದಾಗಿ ಸಾವಿರಾರು ಜನರ ಓಡಾಟಕ್ಕೆ ತೊಂದರೆ ಆಗಿರುವ ವಿಷಯನ್ನು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ. ರೈತರ ಪ್ರತಿಭಟನೆಯಿಂದ ವಿಧಿಸಲಾಗಿರುವ ನಿರ್ಬಂಧಗಳನ್ನು ತೆಗೆದುಹಾಕಲು ಮತ್ತು ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲು ಹಳಿಗಳು ಅಡಚಣೆಯಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪಂಜಾಬ್, ಹರಿಯಾಣ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡುವಂತೆ ಪಿಐಎಲ್ ಮನವಿ ಮಾಡಿಕೊಂಡಿದೆ..ರಾಜ್ಯಗಳು ಮತ್ತು ಕೇಂದ್ರವು ಸಾರ್ವಜನಿಕರಿಗೆ ಸುಗಮ ಹಾದಿಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡಬೇಕೆಂದು ಅದು ಒತ್ತಾಯಿಸುತ್ತದೆ.ಡಿಸೆಂಬರ್ 9 ರಂದು ಸುಪ್ರೀಂ ಕೋರ್ಟ್ ಪಿಐಎಲ್ ವಿಚಾರಣೆ ನಡೆಸಲಿದೆ.