• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಪಿತೃಪ್ರಧಾನತೆ-ಆಸ್ತಿ ಹಕ್ಕುಗಳುಮತ್ತು ಗೋವಾದ ಏಕರೂಪ ನಾಗರಿಕ ಸಂಹಿತೆ- ಭಾಗ 3

ನಾ ದಿವಾಕರ by ನಾ ದಿವಾಕರ
July 29, 2023
in ಅಂಕಣ, ಅಭಿಮತ
0
ಪಿತೃಪ್ರಧಾನತೆ-ಆಸ್ತಿ ಹಕ್ಕುಗಳು ಮತ್ತು ಗೋವಾದ ಏಕರೂಪ ನಾಗರಿಕ ಸಂಹಿತೆ- ಭಾಗ 2
Share on WhatsAppShare on FacebookShare on Telegram

2016ರ ಗೋವಾ ಕಾಯ್ದೆಯ ಪರಿಣಾಮ

ADVERTISEMENT

2016 ರಲ್ಲಿ ಗೋವಾ ಸರ್ಕಾರವು ಗೋವಾ ಉತ್ತರಾಧಿಕಾರ, ವಿಶೇಷ ನೋಟರಿಗಳು ಮತ್ತು ದಾಸ್ತಾನು ಪ್ರಕ್ರಿಯೆ ಕಾಯ್ದೆಯನ್ನು ಜಾರಿಗೆ ತಂದಿತು, ಇದು ಪೋರ್ಚುಗೀಸ್ ನಾಗರಿಕ ಸಂಹಿತೆಗೆ ಹಲವಾರು ತಿದ್ದುಪಡಿಗಳನ್ನು ತಂದಿದೆ. ಸಾಂವಿಧಾನಿಕತೆ, ಕಾನೂನಾತ್ಮಕ ನಿಖರತೆ ಮತ್ತು ಚಾಲ್ತಿಯಲ್ಲಿರುವ ಪೋರ್ಚುಗೀಸ್ ನಾಗರಿಕ ಸಂಹಿತೆಯಿಂದ ಉತ್ತರಾಧಿಕಾರವನ್ನು ಚರ್ಚೆಯಿಲ್ಲದೆ ಬೇರ್ಪಡಿಸುವುದು ಸೇರಿದಂತೆ ಹಲವಾರು ಆಧಾರದ ಮೇಲೆ ಈ ಕಾಯ್ದೆಯು ಟೀಕೆಗೆ ಗುರಿಯಾಗಿದೆ. ಮೊದಲನೆಯದಾಗಿ, ಸಂಹಿತೆಯ ಒಂದು ಭಾಗವನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ನಂತರ ಕಾಯಿದೆಯಾಗಿ ಜಾರಿಗೆ ತರಲಾಗಿದೆ. ಆ ಮೂಲಕ ಸಂಹಿತೆ ಮತ್ತು ಕಾಯ್ದೆಯು ಎರಡು ವಿಭಿನ್ನ ಕಾನೂನು ಘಟಕಗಳಾಗಿವೆ ಎಂಬ ಮೂಲಭೂತ ಅಂಶವನ್ನು ನಿರ್ಲಕ್ಷಿಸಲಾಗಿದೆ.

ಗೋವಾ ಉತ್ತರಾಧಿಕಾರ ಕಾಯ್ದೆಯ ಮಸೂದೆಯನ್ನು ಬಹಿರಂಗಗೊಳಿಸಿದಾಗ, ಸಲಹೆಗಳು ಮತ್ತು ಆಕ್ಷೇಪಣೆಗಳಿಗೆ ಕೇವಲ ಎರಡು ವಾರಗಳ ನೋಟಿಸ್ ನೀಡಲಾಯಿತು. ಆದರೂ ಅನೇಕ ಪ್ರಮುಖ ವಕೀಲರು ಮತ್ತು ಮಹಿಳಾ ಕಾರ್ಯಕರ್ತರು ಅದನ್ನು ಅಧ್ಯಯನ ಮಾಡಲು ಮತ್ತು ವಿಶ್ಲೇಷಿಸಲು ತ್ವರಿತವಾಗಿ ಒಟ್ಟುಗೂಡಿದರು. ಸಲಹೆಗಳ ಸಮಿತಿಯು “ಈ ಕಲ್ಪನೆಯು ಹಿಮ್ಮುಖವಾಗಿದೆ ಮತ್ತು ಕಾನೂನನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ.  ಇದು ನ್ಯಾಯಶಾಸ್ತ್ರ, ಕಾನೂನು ಸಿದ್ಧಾಂತ, ಭಾರತೀಯ ಮತ್ತು ಪಾಶ್ಚಿಮಾತ್ಯ ಕಾನೂನು ಇತಿಹಾಸ ಮತ್ತು ಕಾನೂನು ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. ನಾವು ಕಾರಿನಿಂದ ಎತ್ತಿನ ಗಾಡಿಗೆ ಹಿಮ್ಮುಖವಾಗಿ ಹೋಗುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿತ್ತು.” ಆದರೆ ಎಲ್ಲಾ ಆಕ್ಷೇಪಣೆಗಳನ್ನು ವಜಾಗೊಳಿಸಲಾಯಿತು ಮತ್ತು ಯಾವುದೇ ಶಿಫಾರಸುಗಳನ್ನು ಪರಿಗಣಿಸಲಾಗಲಿಲ್ಲ.

ಉಡುಪಿ

ಈ ಕಾಯ್ದೆಯು ಉತ್ತರಾಧಿಕಾರದ ಸಮಸ್ಯೆಯನ್ನು ಮೀರಿ ಹೋಗುತ್ತದೆ ಹಾಗಾಗಿ ಇತರ ಅಂಶಗಳ ಮೇಲೆಯೂ ಪರಿಣಾಮ ಬೀರುತ್ತದೆ.  2016 ರ ಕಾಯ್ದೆಯ ಅನೇಕ ಭಾಗಗಳು ಉತ್ತರಾಧಿಕಾರವನ್ನು ಮೀರಿ ಪೋರ್ಚುಗೀಸ್ ನಾಗರಿಕ ಸಂಹಿತೆಯಲ್ಲಿ ಅಂತರ್ಗತವಾಗಿರುವ ವಿವಾಹ, ವಿಚ್ಛೇದನ ಮತ್ತು ಪ್ರತ್ಯೇಕತೆಯ ಕಾನೂನುಗಳಿಗೆ ಒಳಪಡುತ್ತವೆ. ಸೆಕ್ಷನ್ 249 ರ ಪ್ರಕಾರ, ಹಿರಿಯ ಸಂಗಾತಿಯು ಕುಟುಂಬದ ಮುಖ್ಯಸ್ಥ ಆಗಿರುತ್ತಾರೆ. ಪಿತೃಪ್ರಧಾನ ಸಮಾಜದಲ್ಲಿ, ಪುರುಷ ಸಂಗಾತಿಯು ಸ್ತ್ರೀ ಸಂಗಾತಿಗಿಂತ ಯಾವಾಗಲೂ ಹಿರಿಯನಾಗಿದ್ದಾನೆ ಎಂಬ ಅಂಶದಿಂದ ಹಿರಿಯ ಸಂಗಾತಿ ಎಂಬ ಕಲ್ಪನೆಯನ್ನು ಸಂದರ್ಭೋಚಿತಗೊಳಿಸಲಾಗುತ್ತದೆ. ಪ್ರತಿಯೊಂದು ನಿಬಂಧನೆಯಲ್ಲೂ ಕುಟುಂಬದ ಮುಖ್ಯಸ್ಥನನ್ನು ಅವನು ಎಂದು ಉಲ್ಲೇಖಿಸುವ ಮೂಲಕ ಈ ಕಾಯ್ದೆಯು ಅದನ್ನೇ ಸಮ್ಮತಿಸುತ್ತದೆ. ತಾರತಮ್ಯದ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಲು ಮತ್ತು ಟೀಕಿಸಲು ಹಲವಾರು ಪ್ರಯತ್ನಗಳನ್ನು ಈ ಕಾಯ್ದೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ, ರಾಜ್ಯದ ಕುಟುಂಬ ಕಾನೂನುಗಳನ್ನು ಪರಿಶೀಲಿಸಲು ಗೋವಾ ಸರ್ಕಾರವು 2000 ರ ದಶಕದ ಆರಂಭದಲ್ಲಿ ರಚಿಸಿದ ಪುನಾರಚನೆ ಸಮಿತಿಯ ಸಲಹೆಗಳು ಮತ್ತು ಆಕ್ಷೇಪಣೆಗಳು 2016 ರ ಕಾಯ್ದೆಯ ರಚನೆಯನ್ನು ತಿಳಿಸುವಲ್ಲಿ ಯಾವುದೇ ಪಾತ್ರವನ್ನು ವಹಿಸಲಿಲ್ಲ.

ಈ ಅಂಕಣವನ್ನು ಓದಿದ್ದೀರಾ; ಪಿತೃಪ್ರಧಾನತೆ-ಆಸ್ತಿ ಹಕ್ಕುಗಳು ಮತ್ತು ಗೋವಾದ ಏಕರೂಪ ನಾಗರಿಕ ಸಂಹಿತೆ- ಭಾಗ 2

1867 ರ ಸಂಹಿತೆಯ ಅನುಚ್ಛೇದ 1057 ಮದುವೆಗಳ ನೋಂದಣಿಯನ್ನು ಅನುಮತಿಸುತ್ತದೆ. ಮದುವೆಯ ಉದ್ದೇಶವನ್ನು ನಾಗರಿಕ ನೋಂದಣಿ ಅಧಿಕಾರಿಗಳ ಮುಂದೆ ಸಂಗಾತಿಗಳು ದಾಖಲಿಸಬೇಕು ಮತ್ತು ಹದಿನೈದು ದಿನಗಳಲ್ಲಿ ವಿವಾಹ ಪತ್ರಕ್ಕೆ ಸಹಿ ಹಾಕಬೇಕು ಎಂಬ ನಿಯಮ ವಿಧಿಸುತ್ತದೆ. ಸಹಿಗಳ ಮೂಲಕ ಎರಡನೇ ದೃಢೀಕರಣದ ಅವಶ್ಯಕತೆಯ ಬಗ್ಗೆ ಅನೇಕ ಮಹಿಳೆಯರಿಗೆ ತಿಳಿಸಲಾಗುವುದಿಲ್ಲ. ಇದರ ಪರಿಣಾಮವೆಂದರೆ, ವಿವಾದವು ಉದ್ಭವಿಸಿದಾಗ ಮದುವೆಯನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ, ಇದರಿಂದಾಗಿ ಈ ಮಹಿಳೆಯರು ವಂಚನೆ, ದ್ವಿಪತ್ನಿತ್ವದ ಸಮಸ್ಯೆಗಳೊಂದಿಗೆ ಕೆಲವೊಮ್ಮೆ ಸುಲಿಗೆಗೆ ಒಳಗಾಗುತ್ತಾರೆ. ಅಂತೆಯೇ ಚರ್ಚ್ ನ್ಯಾಯಮಂಡಳಿಯು ಅನುಭೋಗವಿಲ್ಲದ ಪ್ರಕರಣಗಳಲ್ಲಿ ಚರ್ಚ್ ಮದುವೆಗಳನ್ನು ರದ್ದುಗೊಳಿಸಬಹುದು. ಕ್ರೈಸ್ತರಲ್ಲದವರಿಗೆ ಅನುಭೋಗ ಮಾಡದಿರುವುದು ರದ್ದತಿ ಅಥವಾ ವಿಚ್ಛೇದನದ ಆಧಾರವಾಗಿ ಪರಿಗಣಿಸಲಾಗುವುದಿಲ್ಲ.

ಇದಲ್ಲದೆ, ವ್ಯಕ್ತಿಗಳು ಮತ್ತು ಸ್ವತ್ತುಗಳ ಪ್ರತ್ಯೇಕತೆಯ ಬಗ್ಗೆ ವ್ಯವಹರಿಸುವ ಅನುಚ್ಛೇದ 1204 ರ ಅಡಿಯಲ್ಲಿ, ಹೆಂಡತಿ ವ್ಯಭಿಚಾರ ಮಾಡಿದರೆ ಪತಿಗೆ ವಿಚ್ಛೇದನ ಪಡೆಯಲು ಅವಕಾಶವಿದೆ. ಆದಾಗ್ಯೂ ಪತಿಯು ಸಾರ್ವಜನಿಕ ಹಗರಣದೊಂದಿಗೆ ವ್ಯಭಿಚಾರ ಮಾಡಿದರೆ ಮಾತ್ರ ಹೆಂಡತಿಗೆ ಪ್ರತ್ಯೇಕಿಸಲು ಅನುಮತಿಸಲಾಗುತ್ತದೆ ಮತ್ತು ಪತಿ ಅವಳನ್ನು ತ್ಯಜಿಸಿದರೆ ಮತ್ತು ಅವನು ಪ್ರೇಯಸಿಯನ್ನು ವೈವಾಹಿಕ ವಾಸಸ್ಥಳದಲ್ಲಿ ಇಟ್ಟುಕೊಂಡರೆ ಮಾತ್ರ ವಿಚ್ಛೇದನಕ್ಕೆ ಅನುಮತಿಸಲಾಗುತ್ತದೆ. ವಿವಾಹಪೂರ್ವ ಒಪ್ಪಂದಗಳ ನಾಲ್ಕು ರೂಪಗಳನ್ನು ಅನುಮತಿಸಲಾಗಿದೆ, ಅವುಗಳಲ್ಲಿ ಯಾವುದನ್ನೂ ಮದುವೆಯ ಅವಧಿಯಲ್ಲಿ ಮಾರ್ಪಡಿಸಲಾಗುವುದಿಲ್ಲ.

ಮೊದಲನೆಯ ಪದ್ಧತಿಯಲ್ಲಿ ಆಸ್ತಿಗಳ ಸಂಪೂರ್ಣ ಬೇರ್ಪಡಿಸುವಿಕೆ ಅಥವಾ ಯಾವುದೇ ಸಂಪರ್ಕವಿಲ್ಲದೆ ಇದ್ದಲ್ಲಿ ಅನ್ವಯವಾಗುತ್ತದೆ. ಇದು ಮದುವೆಯ ಸುತ್ತಲಿನ ಭಾವನೆಗಳನ್ನು ಪರಿಗಣಿಸದ ಕಾರಣ ಮದುವೆಗೆ ಮೊದಲು ಸಹಿ ಹಾಕಿದ ಅತ್ಯಂತ ಅಪರೂಪದ ಒಪ್ಪಂದವಾಗಿದೆ. ಇಲ್ಲಿ ಪಾಲುದಾರರು ತಮ್ಮ ಎಲ್ಲಾ ಆಸ್ತಿಗಳನ್ನು ಸ್ವತಂತ್ರವಾಗಿ ಹಿಡಿದಿಡುತ್ತಾರೆ. ಎರಡನೆಯ ಪದ್ದತಿಯೆಂದರೆ ಮದುವೆ ಮತ್ತು ತದನಂತರ ಗಳಿಸಿದ ಸ್ವತ್ತುಗಳು ಮತ್ತು ಆಸ್ತಿಗಳ ಸಂಯೋಜನೆಯ ಸಲುವಾಗಿ ಮುಂಚಿತವಾಗಿ ಹೊಂದಿದ್ದ ಆಸ್ತಿಗಳು ಮತ್ತು ಸ್ವತ್ತುಗಳನ್ನು ಸಂಪೂರ್ಣವಾಗಿ ಬೇರ್ಪಡಿಸುವುದು. ಈ ಪದ್ಧತಿಯು  ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ದೋತಾಲ್ ಪದ್ಧತಿಯು ಮೂರನೇ ವರ್ಗವನ್ನು ಒಳಗೊಂಡಿದೆ. ಇದರ ಅಡಿಯಲ್ಲಿ ವಧುವಿನ ತಂದೆಯ ಆಸ್ತಿ ಮತ್ತು ಸ್ವತ್ತುಗಳಲ್ಲಿ ಪತಿಯ ಪಾಲನ್ನು ಗಂಡನಿಗೆ ನೀಡಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ವರದಕ್ಷಿಣೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಮದುವೆಯನ್ನು ವಿಸರ್ಜಿಸಿದರೆ ಪತಿ ತನ್ನ ಸಂಗಾತಿಗೆ ಎಲ್ಲಾ ಆಸ್ತಿ ಮತ್ತು ಸ್ವತ್ತುಗಳನ್ನು ಪುನಃಸ್ಥಾಪಿಸಲು ಬದ್ಧನಾಗಿರುತ್ತಾನೆ. ನಾಲ್ಕನೆಯ ಪದ್ಧತಿಯು ವಿಚ್ಛೇದನ ಅಥವಾ ಮರಣದ ನಂತರ ಸಮಾನವಾಗಿ ವಿಂಗಡಿಸಲಾದ ಗಂಡ ಮತ್ತು ಹೆಂಡತಿಯ ಎಲ್ಲಾ ಸ್ವತ್ತುಗಳ ಸಂಯೋಜನೆಗೆ ಸಂಬಂಧಿಸಿರುತ್ತದೆ. ಇದು ನ್ಯಾಯಸಮ್ಮತವೆಂದು ತೋರಿದರೂ, ಹೆಂಡತಿಯ ವಿಶೇಷ ಆಸ್ತಿಗಳನ್ನೂ ಸೇರಿದಂತೆ ದಂಪತಿಗಳ ಆಸ್ತಿಗಳು ಮತ್ತು ಸಾಮಾನ್ಯ ಸ್ವತ್ತುಗಳ ನಿರ್ವಹಣೆ ಮತ್ತು ಆಡಳಿತ  ಗಂಡನಿಗೆ ಮಾತ್ರ ಸೇರಿದ್ದು ಎಂದು ಕಾನೂನು ಸೂಚಿಸುತ್ತದೆ.

ಉದಾಹರಣೆಗೆ, ಮ್ಯಾನೇಜರ್ ಆಗಿ ಪತಿಯು ಕಟ್ಟಡವನ್ನು ಬಾಡಿಗೆಗೆ ನೀಡಬಹುದು ಮತ್ತು ಪತ್ನಿಯ ಒಪ್ಪಿಗೆಯಿಲ್ಲದೆ ಸಹಕಾರಿ ಸೊಸೈಟಿಯಲ್ಲಿ ಷೇರುಗಳನ್ನು ವರ್ಗಾಯಿಸಬಹುದು. ಈ ಮೊತ್ತವು ನಿವ್ವಳ ಆದಾಯದ ಮೂರನೇ ಒಂದು ಭಾಗವನ್ನು ಮೀರಬಾರದು ಎಂಬ ಷರತ್ತಿನ ಮೇಲೆ ಹೆಂಡತಿಗೆ ತನ್ನ ಸ್ವತ್ತುಗಳಿಂದ ಆದಾಯದ ಒಂದು ಭಾಗವಾಗಿ ಪಾಕೆಟ್ ವೆಚ್ಚಗಳಿಗಾಗಿ ಸ್ವೀಕರಿಸಲು ಕಾನೂನುಬದ್ಧವಾಗಿ ಅನುಮತಿಸಲಾಗಿದೆ. ಅಂತಿಮವಾಗಿ, ಆಸ್ತಿಗಳ ಜಂಟಿ ಮಾಲೀಕತ್ವದಿಂದ ಹೊರಗುಳಿಯಲು ಆಯ್ಕೆ ಮಾಡುವವರಿಗೆ, ಈ ಕಾಯ್ದೆಯು ಕಾನೂನುಬದ್ಧ ಉತ್ತರಾಧಿಕಾರದ ಆದ್ಯತೆಯ ಕ್ರಮದಲ್ಲಿ ಸಂಗಾತಿಯನ್ನು ನಾಲ್ಕನೇ ಸ್ಥಾನದಲ್ಲಿ ಇರಿಸುವ ಮೂಲಕ ಬದುಕುಳಿದ ಸಂಗಾತಿಯ ಮಾಲೀಕತ್ವ ಮತ್ತು ಉತ್ತರಾಧಿಕಾರದ ಅಧಿಕಾರಗಳನ್ನು ಸ್ಪಷ್ಟವಾಗಿ ಕಡಿಮೆ ಮಾಡುತ್ತದೆ.

ಅಂತಿಮವಾಗಿ

1961 ರಲ್ಲಿ ಗೋವಾದ ವಿಮೋಚನೆ ಮತ್ತು ಅದು ಭಾರತಕ್ಕೆ ಸೇರಿದ ನಂತರ, ಗೋವಾದಲ್ಲಿ ಚಾಲ್ತಿಯಲ್ಲಿರುವ ಕುಟುಂಬ ಕಾನೂನುಗಳನ್ನು ಅಥವಾ ಗಣನೀಯ ಸಮಾನತೆಯ ಪರಿಕಲ್ಪನೆಯನ್ನು ಗಣನೆಗೆ ತೆಗೆದುಕೊಳ್ಳದೆ ಕಾನೂನುಗಳನ್ನು ಕೇಂದ್ರಾಡಳಿತ ಪ್ರದೇಶ ಗೋವಾಕ್ಕೆ (ಮತ್ತು ನಂತರ ಗೋವಾ ರಾಜ್ಯಕ್ಕೆ) ಆಮದು ಮಾಡಿಕೊಳ್ಳಲಾಯಿತು ಎಂಬುದು ಕುತೂಹಲಕಾರಿಯಾಗಿದೆ. ಇವುಗಳಲ್ಲಿ ಭೂ ಕಂದಾಯ ಸಂಹಿತೆ ಮತ್ತು ಕೃಷಿ ಹಿಡುವಳಿ ಕಾಯ್ದೆ ಸಹ ಸೇರಿವೆ. ಗೋವಾದಲ್ಲಿ ಭೂ ಹಕ್ಕುಗಳ ಮೇಲೆ ಪರಿಣಾಮ ಬೀರುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಆಸ್ತಿ ಹಕ್ಕುಗಳ ವಿಷಯದಲ್ಲಿ ಕುಟುಂಬ ಕಾನೂನುಗಳೊಂದಿಗೆ ಸಮನ್ವಯಗೊಳಿಸಬೇಕಾಗಿದೆ ಮತ್ತು ಅದೇ ತತ್ವಗಳು ಎಲ್ಲಿ ಮತ್ತು ಅಗತ್ಯವಿದ್ದಾಗ ಸಕಾರಾತ್ಮಕ ತಾರತಮ್ಯವನ್ನು ಹೊರತುಪಡಿಸಿ ಯಾವುದೇ ತಾರತಮ್ಯವಿಲ್ಲದೆ ಭೂ ಹಕ್ಕುಗಳ ಕಾರ್ಯಾಚರಣೆಯಲ್ಲಿ ಪ್ರತಿಬಿಂಬಿಸಬೇಕಿದೆ. ಏಕರೂಪ ಮತ್ತು ಏಕರೂಪತೆ ಎಂಬ ಪದಗಳನ್ನು ಮರು ವ್ಯಾಖ್ಯಾನಿಸಬೇಕಾಗಿದೆ. ಏಕರೂಪತೆಯ ವ್ಯಾಖ್ಯಾನವು ವಿಭಿನ್ನ ಗುಂಪುಗಳಿಗೆ ವಿಭಿನ್ನವಾಗಿ ಅನ್ವಯಿಸುತ್ತದೆ, ಈ ಸಂದರ್ಭದಲ್ಲಿ ಅನ್ಯಧರ್ಮೀಯ ಹಿಂದೂಗಳು?

ಉತ್ಪಾದನಾ ವ್ಯವಸ್ಥೆಯಲ್ಲಿ ಅಸಮಾನರಾಗಿರುವವರನ್ನು, ವಿಶೇಷವಾಗಿ ಹೆಚ್ಚಿನ ಮಹಿಳೆಯರು ಮತ್ತು ಅನೇಕ ಪುರುಷರಂತೆ ಆಸ್ತಿರಹಿತ ಮತ್ತು ಆಸ್ತಿರಹಿತರಿಗೆ ಸಂಬಂಧಿಸಿದಂತೆ ಏಕರೂಪತೆಯು ಹೇಗೆ ಗಣನೆಗೆ ತೆಗೆದುಕೊಳ್ಳುತ್ತದೆ? ಈಗಾಗಲೇ ಅಂಚಿನಲ್ಲಿರುವ ಮತ್ತು ಅಸಮಾನರಾಗಿರುವವರ ಮೇಲೆ ಏಕರೂಪತೆಯನ್ನು ಹೇರಬಹುದೇ? ವಂಚನೆ ಮತ್ತು ಮೋಸದಿಂದ ಪರಿತ್ಯಕ್ತ ಅಥವಾ ವಿವಾಹವಾದ ಮಹಿಳೆಗೆ ಸಮಾನತೆ ಮತ್ತು ಏಕರೂಪತೆಯನ್ನು ಕಾನೂನುಬದ್ಧವಾಗಿ ಹೇಗೆ ಅನ್ವಯಿಸಬೇಕು? ಕುಟುಂಬದ ಪಿತೃಪ್ರಧಾನ ವ್ಯಾಖ್ಯಾನದಿಂದ ಹೊರಗುಳಿದವರು, ಆಯ್ಕೆಯಿಂದ ಅಥವಾ ಅನೈಚ್ಛಿಕವಾಗಿ, ಕಾನೂನಿನ ಮೂಲಕ ಕುಟುಂಬದ ಪ್ರಸ್ತುತ ವ್ಯಾಖ್ಯಾನಕ್ಕೆ ಸರಿಹೊಂದುವವರಿಗೆ ಸಮಾನರಾಗಿದ್ದಾರೆಯೇ? ಅಸಮಾನತೆಯ ಮಟ್ಟಗಳು ಮತ್ತು ವ್ಯಾಪ್ತಿ ಕಡಿಮೆಯಾಗುತ್ತದೆಯೇ ಅಥವಾ ಆಳವಾಗುತ್ತದೆಯೇ?

೨೦೧೬ ರ ಕಾಯ್ದೆಯು ಹೆಚ್ಚಿನ ಗೊಂದಲ ಮತ್ತು ಅಡೆತಡೆಗಳಿಗೆ ಕಾರಣವಾಗಿದೆ. ಈ ಕಾಯ್ದೆಯು ಶತಮಾನಗಳಷ್ಟು ಹಳೆಯದಾದ ಸಂಹಿತೆಯ ಒಂದು ಭಾಗವನ್ನು ಅದರ ಆಂತರಿಕ ಸ್ವರೂಪವನ್ನು ಗಣನೆಗೆ ತೆಗೆದುಕೊಳ್ಳದೆ ಹಿಂತೆಗೆದುಕೊಳ್ಳುತ್ತದೆ., ವಿಶೇಷವಾಗಿ ಆಸ್ತಿ ಮತ್ತು ಸ್ವತ್ತುಗಳ ಮಾಲೀಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಅಂತಹ ಹಕ್ಕುಗಳು ಸೀಮಿತವಾಗಿವೆ.

(ಈ ಲೇಖನವು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ನ ಗ್ರಾಮೀಣ ಅಧ್ಯಯನ ಕೇಂದ್ರಕ್ಕಾಗಿ ನಡೆಸಿದ ‘ಗೋವಾದಲ್ಲಿ ಕಾನೂನು ಸಮಾನತೆಯ ಸಂದರ್ಭದಲ್ಲಿ ಮಹಿಳೆಯರು ಮತ್ತು ಭೂ ಹಕ್ಕುಗಳು’ ಎಂಬ ಲೇಖಕರ ಅಧ್ಯಯನದ ವಿಸ್ತರಣೆಯಾಗಿದೆ. ಡಾ. ಅಲ್ಬರ್ಟಿನಾ ಅಲ್ಮೇಡಾ, ಅಡ್ವೊಕೇಟ್-ಗೋವಾ ಅವರ ಸಲಹೆ ಸೂಚನೆಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಲಾಗಿದೆ)

-೦-೦-೦-

Tags: GoaNarendra ModiUCCUniform Civil Code
Previous Post

ಮಣಿಪುರ ಹಿಂಸಾಚಾರ | ಸಂತ್ರಸ್ತರ ಅಹವಾಲು ಆಲಿಸಲು ಇಂಫಾಲ ತಲುಪಿದ ‘ಇಂಡಿಯಾ’ ನಾಯಕರು

Next Post

ರಾಹುಲ್‌ ಗಾಂಧಿಗೆ ಸೂಕ್ತ ಹುಡುಗಿ ಹುಡುಕಿಕೊಡಿ: ಹರಿಯಾಣ ರೈತ ಮಹಿಳೆ ಪ್ರಶ್ನೆಗೆ ಸೋನಿಯಾ ಉತ್ತರ

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post
ರಾಹುಲ್‌ ಗಾಂಧಿ

ರಾಹುಲ್‌ ಗಾಂಧಿಗೆ ಸೂಕ್ತ ಹುಡುಗಿ ಹುಡುಕಿಕೊಡಿ: ಹರಿಯಾಣ ರೈತ ಮಹಿಳೆ ಪ್ರಶ್ನೆಗೆ ಸೋನಿಯಾ ಉತ್ತರ

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada